ಗ್ರಹಣ ಹಾಗೂ ನ್ಯೂಸ್ ಚಾನೆಲ್ ಗಳ ಸುತ್ತ
by ಗೋಪನಹಳ್ಳಿಶಿವಣ್ಣ | Nov 8, 2022 | ಕಥೆ – ಕವನ, ವಿಶ್ಲೇಷಣೆ
*************************************** ಈ ಸೂರ್ಯಗ್ರಹಣ , ಚಂದ್ರಗ್ರಹಣ ಅಂತ ಬಂದರೆ ಸಾಕು, ಸೂರ್ಯ ಚಂದ್ರಗಿಂತಲೂ ಸಿಕ್ಕಾಪಟ್ಟೆ ಬಿಜ಼ಿ ಆಗೋದು ಅಂದ್ರೆ ನಮ್ಮ ಟೀವಿ ನ್ಯೂಸ್ ಚಾನೆಲ್ ಗಳು ! ನಭೋಮಂಡಲದಲ್ಲಿ ಆಯಾ ಕಾಲಕ್ಕನುಸಾರವಾಗಿ ಘಟಿಸುವ ಈ ಕೌತುಕ ವಿದ್ಯಮಾನಗಳು ತಮ್ಮಷ್ಟಕ್ಕೆ ತಾವು ನಡೆದುಕೊಂಡು ಹೋದರೂ ನಮ್ಮ ನ್ಯೂಸ್...ಪರಿಶಿಷ್ಟ ಜಾತಿಯಲ್ಲಿ ಪರಿಶಿಷ್ಟ ಪಂಗಡದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸೂಕ್ತ ಸಾಲ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು ಇದನ್ನು ನಾನು ಸಹಿಸುವುದಿಲ್ಲ ಬ್ಯಾಂಕ್ ಅಧಿಕಾರಿಗಳ ವಿರುದ್ದ ಶಾಸಕ ಟಿ.ರಘುಮೂರ್ತಿ ಗರಂ.
- ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ಮತ್ಸಮುದ್ರ25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ .
- ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ
- ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
- ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ
- ಹಣಕಾಸು ವ್ಯವಹಾರ ದುರುಪಯೋಗ : ಪಿ.ಡಿ.ಓ ಎನ್.ಪಾಲಯ್ಯ ಅಮಾನತು
Recent Posts
![](https://janadhwani.in/wp-content/uploads/2023/08/FB_IMG_1692537327658-1-1024x684.jpg)
Recent Comments
![](https://janadhwani.in/wp-content/uploads/2023/02/IMG-20230215-WA0120-1024x768.jpg)
ಹೂಳು ತುಂಬಿದ ಚರಂಡಿ ಮೂಗು ಮುಚ್ಚಿ ಓಎಅಡುವ ಸಾರ್ವಜನಿರು
![](https://janadhwani.in/wp-content/uploads/2023/02/IMG-20230215-WA0122-1-1024x768.jpg)
ಪರಿಶಿಷ್ಟ ಜಾತಿಯಲ್ಲಿ ಪರಿಶಿಷ್ಟ ಪಂಗಡದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸೂಕ್ತ ಸಾಲ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು ಇದನ್ನು ನಾನು ಸಹಿಸುವುದಿಲ್ಲ ಬ್ಯಾಂಕ್ ವ್ಯವಸ್ಥಾಕರ ವಿರುದ್ದ ಶಾಸಕ ಗರಂ.
ಚಳ್ಳಕೆರೆ ಸೆ.6 ಸರಕಾರ ಗ್ಯಾರೆಂಟಿ ಯೋಜನೆಗಳನ್ನು ಸೆ.30 ರ ಒಳಗೆ ಅರ್ಹ ಫಲಾನುವಿಗಳು ವಂಚಿತರಾಗದಂತೆ ಗುರಿ ಮುಟ್ಟಲು ಅಧಿಕಾರಿಗಳು ಮುಂದಾಗುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ . ವಿವಿಧ ಬ್ಯಾಂಕ್ ವ್ಯವಸ್ಥಾಪಕರ ವಿವಿಧ ಇಲಾಖೆ ಅಧಿಕಾರಿಗಳಿಗೆ ಆಯೋಜಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಯೋಜನೆಗಳಿಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಫಲಾನುಭವಿಗಳ ಖಾತೆಗೆ ಹಣ ಪಾವಾತಿ ಮಾಡಲಾಗುತ್ತಿದ್ದು ಬಡಕುಟುಂಬ ಹಾಗೂ ಅರ್ಹ ಗೃಹಿಣಿಯರು ಗ್ಯಾರೆಂಟಿ ಯೋಜನೆಗಳಿಂದ ವಂಚಿತರಾಗದಂತೆ ಅಧಿಕಾರಿಗಳು ಮುಂದಾಗ ಬೇಕು. ಯಾವುದೇ ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಹಾಗೂ ಯೋಜನೆಗಳು ಯಶಸ್ವಿಯಾಗಲು ಅಧಿಕಾರಿಗಳಿಂದ ಮಾತ್ರ ಸಾಧ್ಯ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ 5 ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನೀಡಿತ್ತು ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೊಂಡಿವೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸಿದ್ದಾರೆ ಆದರೂ ಅನ್ನಭಾಗ್ಯ .ಗೃಹಲಕ್ಷ್ಮಿ .ಗೃಹಜ್ಯೋತಿ. ಯೋಜನೆಗಳು ಶೇ85ರಷ್ಟು ಮಾತ್ರ ಪ್ರಗತಿ ಕಂಡಿವೆ ತಾಲೂಕಿನಲ್ಲಿ ಈ ಯೋಜನೆಗಳ ವ್ಯಾಪ್ತಿಗೆ ಬರುವ ಫಲಾನುಭವಿಗಳು ವಂಚಿತರಾಗಬಾರದು ಸರ್ಕಾರ ಬಡವರಿಗಾಗಿ ಇಂತಹ ಯೋಜನೆಗಳನ್ನು ರೂಪಿಸಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಗರಸಭೆ .ಬೆಸ್ಕಾಂ ಇಲಾಖೆ. ಆಹಾರ ಇಲಾಖೆ. ಬ್ಯಾಂಕ್ ಅಧಿಕಾರಿಗಳು ತಮ್ಮ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತಂಡಗಳನ್ನು ರಚಿಸಿಕೊಂಡು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲ ಪ್ರತಿ ಮನೆಗಳಿಗೆ ಭೇಟಿ ನೀಡಿ ಯೋಜನೆಗಳಿಂದ ವಂಚಿತರಾಗಿರುವ ಫಲಾನುಭವಿಗಳನ್ನು ಗುರುತಿಸಿ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ವಂಚಿತರಾಗಿದ್ದಾರೆ ಯಾವ ಕಾರಣ ಎಂದು ತಿಳಿದುಕೊಂಡು ಅವುಗಳನ್ನು ಸರಿಪಡಿಸಿ ಯೋಜನೆಗೆ ಒಳಪಡಿಸುವ ಜವಾಬ್ದಾರಿ ಹೊರಬೇಕು ಇದಕ್ಕಾಗಿ ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಬೇಕು ಸೆಪ್ಟೆಂಬರ್ 30ರೊಳಗೆ ಶೇಕಡ ನೂರರಷ್ಟು ಗುರಿ ಸಾಧಿಸಲು ಪ್ರಯತ್ನ ಪಡಬೇಕು ಯಾವುದೇ ಕಾರಣಕ್ಕೂ ನೆಪಗಳನ್ನು ಹೇಳದೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಅಂತಹ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
![](https://janadhwani.in/wp-content/uploads/2023/09/IMG-20230906-WA0182-1024x768.jpg)
![](https://janadhwani.in/wp-content/uploads/2023/09/IMG-20230906-WA0177-1024x768.jpg)
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹರಿಪ್ರಸಾದ್ ಮಾಹಿತಿ ನೀಡಿ ಗೃಹಲಕ್ಷ್ಮಿ ಯೋಜನೆಗೆ ತಾಲೂಕಿನಲ್ಲಿ 89 920 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು 78597 ಫಲಾನುಭವಿಗಳಿಗೆ ಯೋಜನೆ ಜಾರಿಗೊಳಿಸಲಾಗಿದೆ ಬಾಕಿ ಉಳಿದಿರುವ 11323 ಫಲಾನುಭವಿಗಳಿಗೆ ಯಾವ ಕಾರಣಕ್ಕೆ ಹಣ ಬಂದಿಲ್ಲ ಎಂಬುದನ್ನು ಪತ್ತೆ ಹಚ್ಚಲಾಗುವುದು 87.41 ರಷ್ಟು ಯೋಜನೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಬೆಸ್ಕಾಂ ಇಲಾಖೆಗೆ ಟಾರ್ಗೆಟ್ : ಬೆಸ್ಕಾಂ ಇಲಾಖೆ ಅಧಿಕಾರಿಗಳು ಲೈನ್ ಮ್ಯಾನ್ ಗಳ ತಂಡ ರಚಿಸಿ ಪ್ರತಿ ಮನೆಗೆ ಭೇಟಿ ನೀಡಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳು ನೋಂದಾವಣೆ ಮಾಡಿಕೊಳ್ಳದಿದ್ದರೆ ಅಂತಹವರನ್ನು ಗುರುತಿಸಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಕುಟೀರ ಜ್ಯೋತಿ ಯೋಜನೆಗೆ ಒಳಪಟ್ಟವರನ್ನು ಗೃಹಜೋತಿ ಯೋಜನೆಯ ಲಾಭ ಪಡೆಯಲು ಇರುವ ಕಾನೂನು ನಿಯಮಗಳನ್ನು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು
![](https://janadhwani.in/wp-content/uploads/2023/09/IMG-20230906-WA0183-1024x768.jpg)
ಬ್ಯಾಂಕ್ ವ್ಯವಸ್ಥಾಪಕರಿಗೆ ತರಾಟೆ: ಸಭೆಯಲ್ಲಿ ಪಾಲ್ಗೊಂಡಿದ್ದ ಬ್ಯಾಂಕ್ ವ್ಯವಸ್ಥಾಪಕರಿಗೆ ತರಾಟೆಗೆ ತೆಗೆದುಕೊಂಡ ಶಾಸಕರು ಬ್ಯಾಂಕುಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಪರಿಶಿಷ್ಟ ಪಂಗಡದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸೂಕ್ತ ಸಾಲ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು ಇದನ್ನು ನಾನು ಸಹಿಸುವುದಿಲ್ಲ ಸಾಲ ನೀಡುವುದಲ್ಲದೆ ವಸೂಲಿ ಮಾಡುವುದು ಬ್ಯಾಂಕ್ ಸಿಬ್ಬಂದಿಯ ಜವಾಬ್ದಾರಿ ಆಗಿರುತ್ತದೆ ಇಲ್ಲಸಲ್ಲದ ನೆಪಗಳನ್ನು ಹೇಳಿ ಸಾಲ ಸೌಲಭ್ಯಗಳಿಂದ ವಂಚನೆಗೆ ಒಳಪಡಿಸುತ್ತಿದ್ದೀರಾ ದೂರವಾಣಿಯ ಮೂಲಕ ಜಿಲ್ಲಾ ಬ್ಯಾಂಕ್ ಲೀಡ್ ವ್ಯವಸ್ಥಾಪಕರಿಗೆ ಮಾತನಾಡಿ ಕೂಡಲೇ ತಾಲೂಕಿನಲ್ಲಿ ಎಲ್ಲಾ ಬ್ಯಾಂಕುಗಳ ಅಧಿಕಾರಿಗಳ ಸಭೆ ನಡೆಸಿ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಲು ಇ.ಕೆ ವೈ ಸಿ ಮಾಡಬೇಕು ಹಾಗೂ ಬ್ಯಾಂಕುಗಳಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ನಿಮ್ಮ ವಿರುದ್ಧ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನ್ಯಾಯಬೆಲೆ ಮಾಲೀಕರ ಸಮಸ್ಯೆಗೆ ಪರಿಹಾರ: ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಹಕರನ್ನು ಸರ್ಕಾರದ ಯೋಜನೆಗಳನ್ನು ಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸಬೇಕು ಎಂದರು.ಇದೇವೇಳೆ ನ್ಯಾಯ ಬೆಲೆ ಅಂಗಡಿ ಮಾಲೀಕರು ತೂಕ ಅಳತೆ ವ್ಯತ್ಯಾಸ ಕಮಿಷನ್ ಬಿಡುಗಡೆ ಸೇರಿದಂತೆ ಹಲವು ಸಮಸ್ಯೆಗಳನ್ನು ಶಾಸಕರ ಮುಂದೆ ತೆರೆದಿಟ್ಟರು ಇದಕ್ಕೆ ಉತ್ತರಿಸಿದ ಶಾಸಕರು ನಿಮ್ಮ ಎಲ್ಲ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳಿ ಮುಂದಿನ ಸಭೆಯಲ್ಲಿ ಆಹಾರ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರನ್ನು ಸಭೆಗೆ ಆಹ್ವಾನಿಸಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ತಿಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಹನ್ ಪಾಷಾ.ಸೇರಿದಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Categories
- Uncategorized
- ಅಂತರರಾಷ್ಟ್ರೀಯ
- ಅಪಘಾತ
- ಅಭಿಪ್ರಾಯ
- ಅಮಾನತು
- ಆರೋಗ್ಯ
- ಆರ್ಥಿಕ
- ಇತರೆ – ವಿಶ್ಲೇಷಣೆ
- ಇತರೆ ವಿದ್ಯಮಾನ
- ಇಂಪ್ಯಾಕ್ಟ್
- ಇವತ್ತಿನ ಟ್ವೀಟ್
- ಉದ್ಯೋಗ
- ಕಥೆ – ಕವನ
- ಕಥೆ.ಕವನ.ಜೀವನ ಚರಿತ್ರೆ
- ಕರ್ನಾಟಕ
- ಕಾಣೆಯಾದವರ ಪತ್ತೆಗಾಗಿ
- ಕಾನೂನು
- ಕಾರ್ಟೂನ್ Speaks
- ಕೃಷಿ
- ಕ್ರೇಡೆ
- ಕ್ರೈಂ
- ಚರಿತ್ರೆ
- ಚುನಾವಣೆ-2023
- ಜನಧ್ವನಿ
- ಜೀವನಶೈಲಿ
- ತನಿಖಾ ವರದಿ
- ತನಿಖೆ ವರದಿ
- ನಿಧನ ವಾರ್ತೆ
- ನಿರುದ್ಯೋಗ
- ಪರಿಸರ
- ಪುಸ್ತಕ
- ಪ್ರತಿಭಟನೆ
- ಪ್ರವಾಸೋದ್ಯಮ
- ಫ್ಯಾಷನ್
- ಬರ ಅಧ್ಯಯನ
- ಮಾತೆಂದರೆ ಇದು
- ರಂಗಭೂಮಿ
- ರಾಜಕೀಯ
- ರಾಷ್ಟ್ರೀಯ
- ಲೋಕಸಭಾ ಚುನಾವಣೆ-2024
- ವಿಜ್ಞಾನ ತಂತ್ರಜ್ಞಾನ
- ವಿಶ್ಲೇಷಣೆ
- ವೈರಲ್
- ವೈವಿಧ್ಯ
- ಶಿಕ್ಷಣ
- ಸಂಗ್ರಹ
- ಸಂದರ್ಶನ
- ಸಾಮಾಜಿಕ
- ಸಾಂಸ್ಕೃತಿಕ
- ಸಿನಿಮಾ
- ಸುದ್ದಿ