ಕಂದಾಯ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ- ಸಿಬ್ಬಂದಿಗಳು.ಗ್ರಾಮಲೆಕ್ಕಾಧಿಕಾರಿಗಳು ಹೈರಾಣು.

by | 21/12/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಡಿ.21 ಸರಕಾರಿ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಇಲಾಖೆಯ ಅಧಿಕಾರಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡುವ ಸರಕಾರ ಅದಕ್ಕೆ ಪೂರಕವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಲು ವಿಫಲವಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಮಾನಸಿಕ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಅನಿವಾರ್ಯವಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕು ಅತಿ ಹೆಚ್ಚು ಭೌಗೋಳಿಕ ಪ್ರದೇಶ ಹಾಗೂ ಅತಿ ಹೆಚ್ಚು ದೊಡ್ಡ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ನಾಲ್ಕು ಹೋಬಳಿ ಕೇಂದ್ರಗಳನ್ನು ಹೊಂದಿದ್ದು ಕ್ಷೇತ್ರ ವಿಂಗಡಯ ನಂತರ ತಾಲೂಕಿನಲ್ಲಿ ಇಬ್ಬರು ಶಾಸಕರು ಆಡಳಿತ ನಡೆಸುತ್ತಿದ್ದಾರೆ.
ತಾಲೂಕು ಕಚೇರಿಯಲ್ಲಿ 122 ಮಂಜುರಾತಿ ಹುದ್ದೆಗಳಲ್ಲಿ 95 ಹುದ್ದೆಗಳು ಕರ್ತವ್ಯ ನಿರ್ವಹಿಸಿದರೆ, 27 ಹುದ್ದೆಗಳು ಖಾಲಿಯಾಗಿದ್ದು ಒಬ್ಬ ಒಬ್ಬ ಸಿಬ್ಬಂದಿ ಎರಡು ಮೂರು ಶಾಖೆಗಳನ್ನು ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವಂತಾಗಿದೆ.
ತಾಲೂಕಿನ 67 ಫಿರ್ಕಾಗಳಿದ್ದು ತಾಲಾ ಒಬ್ಬರಂತೆ 67 ಗ್ರಾಮಲೆಕ್ಕಾಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕಿದೆ ಆದರೆ ನಿವೃತ್ತಿ, ವರ್ಗಾಣೆ ನಂತರ 17 ಗ್ರಾಮಲೆಕ್ಕಾಧಿಕಾರಿಗಳು ಹುದ್ದೆಗಳು ಖಾಲಿ ಇದ್ದು ಒಬ್ಬ ಗ್ರಾಮಲೆಕ್ಕಾಧಿಕಾರಿ ಎರಡರಿಂದ ಮೂರು ಫಿರ್ಕಾಗಳ ಹೊಣೆ ಹೊತ್ತು ಒತ್ತಡಗಳ ನಡುವೆ ರ್ಕವ್ಯ ನಿರ್ವಹಿಸುತ್ತಿದ್ದ ಸರಕಾರದ ಯೋಜನೆಗಳನ್ನು ಜರಿಗೆ ತಲುಪಿಸಲುವಲ್ಲಿ ಸರಕಾರದ ಹಾಗೂ ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಕಂದಾಯ ಇಲಾಖೆಯಲ್ಲಿ ಹುಸಿರು ಗಟ್ಟಿಸುವ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವುದು ಅನಿವಾರ್ಯವಾಗಿದೆ.
ನಗರದ ತಾಲೂಕು ಕಚೇರಿಯ ಗ್ರೇಡ್-2 ತಹಶೀಲ್ದಾರ್ ಸಂಧ್ಯ ಹೆರಿಗೆ ರಜೆ ಮೇಲೆ ಹೋಗಿ ನಂತರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಹಾಯಕ ನಿರ್ಧೆಶಕರಾಗಿ ಬಳ್ಳಾರಿಗೆ ವರ್ಗಾವಣೆಯಾಗಿದ್ದಾರೆ ಸುಮಾರು ಒಂದು ವರ್ಷದಿಂದ ಖಾಲಿ ಇರುವ ಗ್ರೇಡ್ -2 ತಹಶೀಲ್ದಾರ್ ಹುದ್ದೆ ಖಾಲಿ ಇರುವುದರಿಂದ ಆಧಾಯ ಜಾತಿ, ಪ್ರಮಾಣ ಪತ್ರ ಸಾಮಾಜಿಕ ಭದ್ರಾತ ಪಿಂಚಿಣಿ, ಸಕಾಲ , ಪಡಶಾಲೆ, ರೈತರ ಜಮೀನಿನ ಭೂ ದಾಖಲೆ (ಅಭಿಲೇಖಾಯ) ಪ್ರಕೃತಿ ವಿಕೋಪ,ಸೇರಿದಂತೆ ಗ್ರೇಡ್-2 ತಹಶೀಲ್ದಾರ್ ಹೊಣೆಯನ್ನು ತಹಶೀಲ್ದಾರ್ ಹೆಗಲ ಮೇಲೆ ಬಿದ್ದಿರುವುದರಿಂದ ಕಚೆರಿ ಬಿಟ್ಟು ಪೀಲ್ಡ್ ಹೋಗಲು ಸಾಧ್ಯವಾಗದಂತಾಗಿದೆ.
ಪ್ರಕೃತಿ ವಿಕೋಪ ಬೆಳೆ ನಷ್ಟ, ಮನೆಗಳು ಬಿದ್ದಾಗ, ಪವತಿ ಖಾತಿ, ಜಾತಿ ಆಧಾಯ ಪ್ರಮಾಣ ಪತ್ರ, ಪಿಂಚಣಿ ಯೋಜನೆ, ಪಹಣಿ ಚುನಾವಣೆ ಸಂದರ್ಭದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ, ಸೇರಿಂದ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಇರುವ ಸಿಬ್ಬಂದಿ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸರಕಾರದ ಆದೇಶಗಳ ಅನ್ವಯ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಕರ್ತವ್ಯದ ಒತ್ತಡಗಳಿಗೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಚುನಾವಣೆಯ ಶಾಖೆಯ ಪ್ರ.ದ.ಸಹಾಯಕೊರೊಬ್ಬರು ಕಚೇರಿಯಲ್ಲಿನ ಕೆಲಸದ ಒತ್ತಡ ಹಾಗೂ ಅಪಮಾನ ತಾಳಲಾರದೆ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾನೆ.
ಖಾಲಿ ಇರುವ ಫಿರ್ಕಾಗಳು
ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ್, ರಾಜಸ್ವ ನಿರೀಕ್ಷರು-1. ಪ್ರಥಮ ದರ್ಜೆ ಸಹಾಯಕ 1, ದ್ವಿತೀಯ ದರ್ಜೆ ಸಹಾಯಕ 2, ಬೆರಳಚ್ಚುಗಾರ 1,ವಾಹನ ಚಾಲಕ 1, ಡಿ ಗ್ರೂಪ್ ನೌರರು-2, ಆರ್ ಆರ್ ಅಡೆಂಡರ್ 1, ಗ್ರಾಮ ಆಡಳಿತ ಅಧಿಕಾರಿ 17 ಒಟ್ಟು 122 ಮಂಜುರಾತಿ ಹುದೆಗಳಲ್ಲಿ 27 ಹುದ್ದೆಗಳು ಖಾಲಿ ಇವೆ.
ಗ್ರಾಮಲೆಕ್ಕಾಧಿಕಾರಿಗಳ ಹುದ್ದೆ ಖಾಲಿ.
ನಾಡ ಕಚೇರಿ ತಳಕು, ಭೂಮಿ ಕೇಂದ್ರ, ಆರ್.ಆರ್. ಗ್ರಾಮಲೆಕ್ಕಾಧಿಕಾರಿ, ಗೊರ‍್ಲಕಟ್ಟೆ, ಟಿ.ಎನ್.ಕೋಟೆ, ಬೆಳೆಗೆರೆ, ಗಂಜಿಗುಂಟೆ, ಕರೀಕೆರೆ, ಕೊರ‍್ಲಕುಂಟೆ,ದೊಡ್ಡಬೀರನಹಳ್ಳಿ, ನೇರಲಗುಂಟೆ, ದೊಣೆಹಳ್ಳಿ, ಅಬ್ಬೇನಹಳ್ಳಿ, ನೆಲಗೇತನಹಟ್ಟಿ, ಚನ್ನಮ್ಮನಾಗತಿಹಳ್ಳಿ, ಗೋಪನಹಳ್ಳಿ ಹೀಗೆ 17 ಗ್ರಾಮಲೆಕ್ಕಾಧಿಕಾರಿಗಳ ಹುದ್ದೆಗಳು ಖಾಲಿಯಾಗಿರುವುದು ಬೆಳೆಕಿಗೆ ಬಂದಿದೆ.
ಗ್ರಾಮೀಣ ಭಾಗದ ರೈತರು ಹಲವು ಸೌಲಭ್ಯಗಳನ್ನು ಪಡೆಯಲು ತಾಲೂಕು ಕಚೇರಿಗೆದ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಭೂಮಿ ಕೇಂದ್ರದಲ್ಲಿ ರೈತರು ಪಹಣಿ, ಮ್ಯುಟೇಷನ್ ಸೇರಿದಂತೆ ಹಲವು ಸೌಲಭ್ಯಗಳು ಸಕಾಲಕ್ಕೆ ದೊರೆಯದೆ ಅಲೆದಾಡುವ ಪರಿಸ್ಥತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಕಂದಾಯ ಇಲಾಖೆಯಲ್ಲಿ ರೈತರಿಗೆ ಸುಲಭವಾಗಿ ಪಡೆಯಲು ಹಾಗೂ ಗ್ರಾಮಲೆಕ್ಕಾಧಿಗಳು ರೈತರಿಗೆ ತಲುಪಿಸಲು ವಿಳಂಭವಾಗುತ್ತಿದ್ದು ಈಗಲಾದರು ಸರಕಾರ ಜನಸಂಖ್ಯೆಗನುಗುಣವಾಗಿ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದೇ ಕಾದು ನೋಡ ಬೇಕಿದೆ.
.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page