ಯಾವುದೇ ಸಬೂಬು ಹೇಳದೇ ಆದಷ್ಟು ಬೇಗ ರೈತರಿಗೆ ಪರಿಹಾರದ ಹಣವನ್ನ ನೀಡಬೇಕೆಂದು ಸಾಮಾಜಿಕ‌ಜಾಲ ತಾಣದಲ್ಲಿ ಮನವಿ ಮಾಡಿಕೊಂಡಿದ್ದಾನೆ….

by | 31/10/23 | ವೈರಲ್

ಬೆಳೆ ವಿಮೆ ಬೆಳೆ ಪರಿಹಾರ ನೀಡುವಂತೆ ಯುವನೊಬ್ಬ ಸಾಮಾಜಿಕ ಜಾಲ ತಾಣದಲ್ಲಿ ಬೆಳೆವಿಮೆ ಕಟ್ಟಿದ ರಸೀದಿಯೊಂದಿಗೆ ಹಂಚಿಕೊಂಡಿದ್ದಾನೆ. ಫಸಲ್ ಭೀಮಾ ಯೋಜನೆ ಕೇಂದ್ರ ಸರ್ಕಾರ… 2022-2023 (ಬೆಳೆ ವಿಮೆ).

ಬೆಳೆ ಪರಿಹಾರ 2022-23….ರಾಜ್ಯ ಸರ್ಕಾರ…
*
ಈ ವರ್ಷ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತು ಆಲ್ಮೋಸ್ಟ್ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಸಂಪೂರ್ಣ ಬೆಳೆಗಳು ಹಾಳಾಗಿ ಹೋಗಿದೆ ಹಾಗಾಗಿ ಈ ವರ್ಷನಾದ್ರು ನಾವು ಕಟ್ಟಿರುವ ಬೆಳೆ ವಿಮೆಯ ಹಣಕ್ಕೆ ಪ್ರತಿಫಲವಾಗಿ ಬೆಳೆ ವಿಮೆಯ ಹಣವನ್ನು ತಡ ಮಾಡದೆ ನಿಮ್ಮ ಇತರೆ ಉದ್ದೇಶಗಳನ್ನ ಬದಿಗೊತ್ತಿ ನಮ್ಮ ರೈತರ ಖಾತೆಗಳಿಗೆ 2 ಸಾವಿರಾನೋ ಅಥವಾ
3 ಸಾವಿರಾನೋ ಹಾಕಿ ಸಮಾಧಾನ ಮಾಡುವುದನ್ನ ಬಿಟ್ಟು ನ್ಯಾಯಯುತವಾಗಿ ಎಷ್ಟು ಹಣ ನೀಡಬೇಕೊ ಅಷ್ಟು ಹಣವನ್ನ ಕೂಡಲೇ ಜಮೆ ಮಾಡಬೇಕಾಗಿ ಒಬ್ಬ ನಾಗರೀಕನಾಗಿ ಒಬ್ಬ ರೈತ ಮಗನಾಗಿ ಮನವಿ
ಮಾಡಿಕೊಳ್ಳುತ್ತಿದ್ದೇನೆ..

ಇಲ್ಲಿ ಬೆಳೆ ವಿಮೆ ಕಟ್ಟಿರು ರಶೀದಿಯನ್ನ ಹಾಕಿದ್ದೀನಿ ಯೋಜನೆಯ ನಿಯಮಗಳ ಪ್ರಕಾರ 5 ಎಕರೆ ಮಳೆಯಾಶ್ರಿತ ಭೂಮಿಗೆ ಸಂಪೂರ್ಣ ಬೆಳೆ ನಾಶ ಆದರೆ 1ಲಕ್ಷದ 10 ಸಾವಿರ ರೂಪಾಯಿಗಳನ್ನ ನೀಡಬೇಕು ಈ ಭಾರಿ ನಮ್ಮಲ್ಲಿ ನೂರಕ್ಕೆ ನೂರರಷ್ಟು ಬೆಳೆ ನಾಶ ಆಗಿದೆ ಹಾಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಮಖ್ಯವಾಗಿ ಇನ್ಶೂರೆನ್ಸ್ ಕಂಪನಿಗಳು ಎಲ್ಲರೂ ಮಾತಾಡಿಕೊಂಡು ಆದಷ್ಟು ಬೇಗ ರೈತರಿಗೆ ಸಲ್ಲಬೇಕಾಗಿರುವ ಹಣವನ್ನು ನ್ಯಾಯಯುತವಾಗಿ ಸಲ್ಲುವ ಹಾಗೆ ಮಾಡಿ ಇಲ್ಲವಾದರೆ ಈಗಾಗಲೇ ರೈತ ಕೆಲಸಗಳು ಇಳಿಕೆಯಾಗುತ್ತಿದೆ ನೆಕ್ಸ್ಟ್ ಬಿತ್ತನೆ ಮಾಡುವವರ ಸಂಖ್ಯೆ ಇನ್ನೂ ತುಂಬಾ ಕಡಿಮೆ ಆಗುತ್ತದೆ…ಹೀಗಾದರೆ ಮುಂದೆ ಎಲ್ಲರಿಗೂ ತುಂಬಾ ಕಷ್ಟವಾಗುತ್ತದೆ…

ಹೆಸರಿಗಷ್ಟೇ ಯೋಜನೆ ಅನ್ನೋ ಹಾಗೆ ಮಾಡಬೇಡಿ

ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಎಮ್ ಎಲ್ ಎ ಗಳು ಎಂ ಪಿ ಗಳು ಸಚಿವರುಗಳು ರೈತ ಸಂಘದವರು ಇತರೆ ನಾಯಕರುಗಳು ಎಲ್ಲರೂ ಪ್ರಮಾಣಿಕವಾಗಿ ಕೆಲಸ ಮಾಡಿ ನಮ್ಮ ರೈತರಿಗೆ ಬೆಳೆ ವಿಮೆಯ ಸೂಕ್ತ ಹಣವನ್ನು ಕೊಡಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.

ಇದನ್ನ ಬಿಟ್ಟು ವಿಮೆ ಕಂಪೆನಿಗಳಿಂದ ಕೆಲವರು ಹಣಪಡೆದೋ ಅಥವಾ ಮತ್ತಿನ್ಯಾವುದೊ ಕಾರಣಗಳಿಗಾಗಿ ಮೇಲ್ನೋಟಕ್ಕೆ ಹೋರಾಟ ಮಾಡುವ ಹಾಗೆ ನಾಟಕ ಮಾಡಿ ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ…
ರೈತರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ..

ಹಾಗೆ ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನ ಕೇಂದ್ರ ಸರ್ಕಾರ ಯಾಣ ಕೊಟ್ಟಿಲ್ಲ
ಎನ್ ಡಿ ಆರ್ ಎಫ್ ನಿಯಮಗಳು ಸರಿಹೊಂದುತ್ತಿಲ್ಲ ಅಂತ ಇನ್ನಿತರೇ ಯಾವುದೇ ಸಬೂಬು ಹೇಳದೇ ಆದಷ್ಟು ಬೇಗ ರೈತರಿಗೆ ಪರಿಹಾರದ ಹಣವನ್ನ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ…

ದಯವಿಟ್ಟು ಸಂಬಂಧಪಟ್ಟವರು ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಿ ರೈತರಿಗೆ ನ್ಯಾಯ ಒದಗಿಸಿ…ಹಾಗೆ ಎಲ್ಲಾ ನಾಗರೀಕರು ಇದರ ಬಗ್ಗೆ ಧ್ವನಿ ಎತ್ತಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ…

ಎಷ್ಟೋ ವಿಚಾರಗಳಿಗೆ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತುತ್ತೇವೆ ಈ ಕಷ್ಟದ ಸಮಯದಲ್ಲಿ ನಮ್ಮ ರೈತರ ಪರ ಪಕ್ಷಾತೀತವಾಗಿ ಧ್ವನಿ ಎತ್ತೋಣ….

ವಿ ಸ್ಟ್ಯಾಂಡ್ ವಿತ್ ಇಸ್ರೇಲ್ & ಪ್ಯಾಲೆಸ್ತೈನ್..ವಿ ಸ್ಟ್ಯಾಂಡ್ ವಿತ್ ಎಡಪಂಥೀಯ & ಬಲಪಂಥೀಯ ವಿ ಸ್ಟ್ಯಾಂಡ್ ವಿತ್ ಜಾತ್ಯಾತೀತ & ಕೋಮುವಾದ…ಹೀಗೆ ಎಷ್ಟೋ ಪೋಸ್ಟ್ ಗಳನ್ನ ಹಾಕ್ತಿರ್ತೀವಿ ಇದೇ ತರಹ ಅವಾಗಾವಗ ಅಟ್ಲೀಸ್ಟ್ ಕಷ್ಟದ ಸಮಯದಲ್ಲಿ


ವಿ ಸ್ಟ್ಯಾಂಡ್ ವಿತ್ ನಮ್ಮ ರೈತರು ಅಂತ ಹೇಳಬುಹುದಲ್ವಾ???

ಸೋ ಎಲ್ಲಾ ರೈತ ಬಾಂಧವರು ಮತ್ತು ರೈತ ಪರ ಇರುವವರು ಆದಷ್ಟು ಈ ಅರ್ಹ ಹಕ್ಕಿನ ಪೋಸ್ಟನ್ನು ಶೇರ್ ಮಾಡಿ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.💐

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page