ಬೆಳೆ ವಿಮೆ ಬೆಳೆ ಪರಿಹಾರ ನೀಡುವಂತೆ ಯುವನೊಬ್ಬ ಸಾಮಾಜಿಕ ಜಾಲ ತಾಣದಲ್ಲಿ ಬೆಳೆವಿಮೆ ಕಟ್ಟಿದ ರಸೀದಿಯೊಂದಿಗೆ ಹಂಚಿಕೊಂಡಿದ್ದಾನೆ. ಫಸಲ್ ಭೀಮಾ ಯೋಜನೆ ಕೇಂದ್ರ ಸರ್ಕಾರ… 2022-2023 (ಬೆಳೆ ವಿಮೆ).
ಬೆಳೆ ಪರಿಹಾರ 2022-23….ರಾಜ್ಯ ಸರ್ಕಾರ…
*
ಈ ವರ್ಷ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತು ಆಲ್ಮೋಸ್ಟ್ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಸಂಪೂರ್ಣ ಬೆಳೆಗಳು ಹಾಳಾಗಿ ಹೋಗಿದೆ ಹಾಗಾಗಿ ಈ ವರ್ಷನಾದ್ರು ನಾವು ಕಟ್ಟಿರುವ ಬೆಳೆ ವಿಮೆಯ ಹಣಕ್ಕೆ ಪ್ರತಿಫಲವಾಗಿ ಬೆಳೆ ವಿಮೆಯ ಹಣವನ್ನು ತಡ ಮಾಡದೆ ನಿಮ್ಮ ಇತರೆ ಉದ್ದೇಶಗಳನ್ನ ಬದಿಗೊತ್ತಿ ನಮ್ಮ ರೈತರ ಖಾತೆಗಳಿಗೆ 2 ಸಾವಿರಾನೋ ಅಥವಾ
3 ಸಾವಿರಾನೋ ಹಾಕಿ ಸಮಾಧಾನ ಮಾಡುವುದನ್ನ ಬಿಟ್ಟು ನ್ಯಾಯಯುತವಾಗಿ ಎಷ್ಟು ಹಣ ನೀಡಬೇಕೊ ಅಷ್ಟು ಹಣವನ್ನ ಕೂಡಲೇ ಜಮೆ ಮಾಡಬೇಕಾಗಿ ಒಬ್ಬ ನಾಗರೀಕನಾಗಿ ಒಬ್ಬ ರೈತ ಮಗನಾಗಿ ಮನವಿ
ಮಾಡಿಕೊಳ್ಳುತ್ತಿದ್ದೇನೆ..
ಇಲ್ಲಿ ಬೆಳೆ ವಿಮೆ ಕಟ್ಟಿರು ರಶೀದಿಯನ್ನ ಹಾಕಿದ್ದೀನಿ ಯೋಜನೆಯ ನಿಯಮಗಳ ಪ್ರಕಾರ 5 ಎಕರೆ ಮಳೆಯಾಶ್ರಿತ ಭೂಮಿಗೆ ಸಂಪೂರ್ಣ ಬೆಳೆ ನಾಶ ಆದರೆ 1ಲಕ್ಷದ 10 ಸಾವಿರ ರೂಪಾಯಿಗಳನ್ನ ನೀಡಬೇಕು ಈ ಭಾರಿ ನಮ್ಮಲ್ಲಿ ನೂರಕ್ಕೆ ನೂರರಷ್ಟು ಬೆಳೆ ನಾಶ ಆಗಿದೆ ಹಾಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಮಖ್ಯವಾಗಿ ಇನ್ಶೂರೆನ್ಸ್ ಕಂಪನಿಗಳು ಎಲ್ಲರೂ ಮಾತಾಡಿಕೊಂಡು ಆದಷ್ಟು ಬೇಗ ರೈತರಿಗೆ ಸಲ್ಲಬೇಕಾಗಿರುವ ಹಣವನ್ನು ನ್ಯಾಯಯುತವಾಗಿ ಸಲ್ಲುವ ಹಾಗೆ ಮಾಡಿ ಇಲ್ಲವಾದರೆ ಈಗಾಗಲೇ ರೈತ ಕೆಲಸಗಳು ಇಳಿಕೆಯಾಗುತ್ತಿದೆ ನೆಕ್ಸ್ಟ್ ಬಿತ್ತನೆ ಮಾಡುವವರ ಸಂಖ್ಯೆ ಇನ್ನೂ ತುಂಬಾ ಕಡಿಮೆ ಆಗುತ್ತದೆ…ಹೀಗಾದರೆ ಮುಂದೆ ಎಲ್ಲರಿಗೂ ತುಂಬಾ ಕಷ್ಟವಾಗುತ್ತದೆ…
ಹೆಸರಿಗಷ್ಟೇ ಯೋಜನೆ ಅನ್ನೋ ಹಾಗೆ ಮಾಡಬೇಡಿ
ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಎಮ್ ಎಲ್ ಎ ಗಳು ಎಂ ಪಿ ಗಳು ಸಚಿವರುಗಳು ರೈತ ಸಂಘದವರು ಇತರೆ ನಾಯಕರುಗಳು ಎಲ್ಲರೂ ಪ್ರಮಾಣಿಕವಾಗಿ ಕೆಲಸ ಮಾಡಿ ನಮ್ಮ ರೈತರಿಗೆ ಬೆಳೆ ವಿಮೆಯ ಸೂಕ್ತ ಹಣವನ್ನು ಕೊಡಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.
ಇದನ್ನ ಬಿಟ್ಟು ವಿಮೆ ಕಂಪೆನಿಗಳಿಂದ ಕೆಲವರು ಹಣಪಡೆದೋ ಅಥವಾ ಮತ್ತಿನ್ಯಾವುದೊ ಕಾರಣಗಳಿಗಾಗಿ ಮೇಲ್ನೋಟಕ್ಕೆ ಹೋರಾಟ ಮಾಡುವ ಹಾಗೆ ನಾಟಕ ಮಾಡಿ ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ…
ರೈತರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ..
ಹಾಗೆ ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನ ಕೇಂದ್ರ ಸರ್ಕಾರ ಯಾಣ ಕೊಟ್ಟಿಲ್ಲ
ಎನ್ ಡಿ ಆರ್ ಎಫ್ ನಿಯಮಗಳು ಸರಿಹೊಂದುತ್ತಿಲ್ಲ ಅಂತ ಇನ್ನಿತರೇ ಯಾವುದೇ ಸಬೂಬು ಹೇಳದೇ ಆದಷ್ಟು ಬೇಗ ರೈತರಿಗೆ ಪರಿಹಾರದ ಹಣವನ್ನ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ…
ದಯವಿಟ್ಟು ಸಂಬಂಧಪಟ್ಟವರು ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಿ ರೈತರಿಗೆ ನ್ಯಾಯ ಒದಗಿಸಿ…ಹಾಗೆ ಎಲ್ಲಾ ನಾಗರೀಕರು ಇದರ ಬಗ್ಗೆ ಧ್ವನಿ ಎತ್ತಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ…
ಎಷ್ಟೋ ವಿಚಾರಗಳಿಗೆ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತುತ್ತೇವೆ ಈ ಕಷ್ಟದ ಸಮಯದಲ್ಲಿ ನಮ್ಮ ರೈತರ ಪರ ಪಕ್ಷಾತೀತವಾಗಿ ಧ್ವನಿ ಎತ್ತೋಣ….
ವಿ ಸ್ಟ್ಯಾಂಡ್ ವಿತ್ ಇಸ್ರೇಲ್ & ಪ್ಯಾಲೆಸ್ತೈನ್..ವಿ ಸ್ಟ್ಯಾಂಡ್ ವಿತ್ ಎಡಪಂಥೀಯ & ಬಲಪಂಥೀಯ ವಿ ಸ್ಟ್ಯಾಂಡ್ ವಿತ್ ಜಾತ್ಯಾತೀತ & ಕೋಮುವಾದ…ಹೀಗೆ ಎಷ್ಟೋ ಪೋಸ್ಟ್ ಗಳನ್ನ ಹಾಕ್ತಿರ್ತೀವಿ ಇದೇ ತರಹ ಅವಾಗಾವಗ ಅಟ್ಲೀಸ್ಟ್ ಕಷ್ಟದ ಸಮಯದಲ್ಲಿ

ವಿ ಸ್ಟ್ಯಾಂಡ್ ವಿತ್ ನಮ್ಮ ರೈತರು ಅಂತ ಹೇಳಬುಹುದಲ್ವಾ???
ಸೋ ಎಲ್ಲಾ ರೈತ ಬಾಂಧವರು ಮತ್ತು ರೈತ ಪರ ಇರುವವರು ಆದಷ್ಟು ಈ ಅರ್ಹ ಹಕ್ಕಿನ ಪೋಸ್ಟನ್ನು ಶೇರ್ ಮಾಡಿ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.💐
0 Comments