ತಾಯಿ ಮಕ್ಕಳಿಬ್ಬರ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ – ಇಬ್ಬರು ಮಕ್ಕಳು‌ ಆಟವಾಡುತ್ತಾ ನೀರಿನಲ್ಲಿ ಬಿದ್ದು ಮೃತಪಟ್ಟಿರುವುದನ್ನು ಗಾಬರಿಗೊಂಡು ತಾಯಿ ನೇಣಿಗೆ ಶರಣು.

by | 08/12/23 | ಕ್ರೈಂ


ಚಳ್ಳಕೆರೆ ಡಿ.8 ತಾಯಿ ಹಾಗೂ ಎರಡು ಮಕ್ಕಳ ಆತ್ಮಹತ್ಯೆ ಗೆ ಬಿಗ್ ಟ್ವಿಸ್ಟ್. ಹೌದು ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗ್ರಾಮದ ಇಬ್ಬರು ಮಕ್ಕಳು ಪರಿಣಿತ (5) ಹಾಗೂಜ್ಞಾನೇಶದ(18ತಿಂಗಳ ಮಗು) ಇಬ್ಬರು ಆಟವಾಡುತ್ತ ನೀರಿನ ತೊಟ್ಟಿ ಹಾಗೂ ಬಚ್ಚಲು ಪಾತ್ರೆಯಲ್ಲಿ ಬಿದ್ದು ಮೃತಪಟ್ಟಿರುವುದನ್ನು ಕಂಡು ಇಬ್ಬರು ಮಕ್ಕಳು ಮೃತ ಪಟ್ಟಿರುವುದರಿಂದ ಗಾಭರಿಗೊಂಡು ಮರ್ಯಾದೆಗೆ ಅಂಜಿಕೊಂಡು ಲತಾ ಸಹ‌ ನೇಣಿಗೆ‌ ಶರಣಾಗಿದ್ದಾಳೆ ಎಂಬ ಮಾಹಿತಿ ದೂರಿನಲ್ಲಿದೆ. *ದೂರಿನ ಸಾರಂಶ* ಮೃತೆಯ ತಂಗಿ ವೀಣಾ ಚಳ್ಳಕೆರೆ ಠಾಣೆಗೆ ಬಂದು ಮಧ್ಯಾಹ್ನ 1.30. ಗಂಟೆಗೆ ದೂರು ನೀಡಿದ್ದು ಸುಮಾರು 6 ವರ್ಷದ ಹಿಂದೆ ಲತಾಳನ್ನು ಯಲಗಟ್ಟ ಗ್ರಾಮದ ತಿಪ್ಪೇಸ್ವಾಮಿಯೊಂದಿಗೆ ವಿವಾಹವಾಗಿದ್ದು ಗಂಡ ಹೆಂಡತಿ ಇಬ್ಬರು ಯಾವುದೇ ಗಲಾಟೆ ಇಲ್ಲದೆ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು.
ಹೊನ್ನೇಶ ಇವರನ್ನು ಜಮೀನಿನಲ್ಲಿ ರೇಷ್ಮೆ ಮತ್ತು ತರಕಾರಿ ಬೆಳೆಗಳನ್ನು ಹಾಕಿಕೊಂಡು ಜೀವನ ಮಾಡಿಕೊಂಡಿದ್ದೆವು. ನನ್ನ ತಂಗಿಯಾದ ರೇಖಾಳು
ಈಗ್ಗೆ 9 ತಿಂಗಳ ಹಿಂದೆ ಹೆಣ್ಣು ಮಗುವಿಗೆ ಹೆರಿಗೆಯಾಗಿದ್ದು ನಮ್ಮ ಮನೆಗೆ ಬಾಣಂತಿತನಕ್ಕೆ ಬಂದು ಇರುತ್ತಾಳೆ. ನನ್ನ ಅಕ್ಕಳಾದ ಲತಾಳಿಗೆ 1 ನೇ
ಪ್ರಣೀತಾ, ಸುಮಾರು 5 ವರ್ಷ. 2 ನೇ ಜ್ಞಾನೇಶ, ಸುಮಾರು 18ತಿಂಗಳು ಮಕ್ಕಳು ಇರುತ್ತಾರೆ. ಮನೆಯಲ್ಲಿ ಎಲ್ಲರೂ ಅನ್ನೋನ್ಯವಾಗಿ
ಹೊಂದಿಕೊಂಡು ಸಂಸಾರ ಮಾಡುತ್ತಿದ್ದು ಯಾರಿಗೂ ಯಾವುದೇ ತೊಂದರೆ ಮತ್ತು ಕಿರುಕುಳ ಇರುವುದಿಲ್ಲ. ಶುಕ್ರವಾರ
ಬೆಳಿಗ್ಗೆಸುಮಾರು 8-45 ಗಂಟೆಗೆ ನಮ್ಮ ಮನೆಯಲ್ಲಿ ನನ್ನ ಅಕ್ಕಳಾದ ಲತಾ ಮತ್ತು ಆಕೆಯ 2 ಜನ ಮಕ್ಕಳು ಹಾಗೂ ಬಾಣಂತಿಯಾದ ನನ್ನ
ತಂಗಿ ರೇಖಾ ಹಾಗೂ ನಮ್ಮ ಅಜ್ಜಿಯಾದ ಗೌರಮ್ಮ ಇದ್ದರು. ನಮ್ಮ ಜಮೀನಿಗೆ ರೇಷ್ಮೆ ಸೊಪ್ಪನ್ನು
ಕೊಯ್ಯಲು ಹೋಗಿದ್ದು ಶುಕ್ರವಾರ ಬೆಳಿಗ್ಗೆ ಸುಮಾರು 9 ರಿಂದ10 ಗಂಟೆಯ ನಡುವೆ ಯಲಗಟ್ಟ ಗ್ರಾಮದಲ್ಲಿರುವ ನಮ್ಮ ವಾಸದ ಮನೆಯ ಬಚ್ಚಲಿನಲ್ಲಿ ನನ್ನ ಅಕ್ಕ ಲತಾಳ ಮಕ್ಕಳಾದ ಪ್ರಣೀತಾ ಮತ್ತು ಜ್ಞಾನೇಶ ರವರು ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದುದರಿಂದ ನನ್ನ ಅಕ್ಕ ಲತಾಳು ಗಾಬರಿಯಾಗಿ ಹೆದರಿಕೆಯಿಂದ ಬಚ್ಚಲು ಮನೆಯಲ್ಲಿರುವ ಕಬ್ಬಿಣದ ಪೈಪಿಗೆ
ನೈಟಿಯನ್ನು ಕಟ್ಟಿಕೊಂಡು ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ತಿಳಿದುಬಂದಿರುತ್ತದೆ. ನನ್ನ ಅಕ್ಕಳಾದ ಲತಾಳ 2 ಜನ ಚಿಕ್ಕ ಮಕ್ಕಳು
ನೀರಿನಲ್ಲಿ ಬಿದ್ದು ಮೃತ ಪಟ್ಟಿದ್ದರ ಬಗ್ಗೆ ಮತ್ತು ನನ್ನ ಅಕ್ಕ ಲತಾಳು ನೇಣು ಹಾಕಿಕೊಂಡು ಮೃತ ಪಟ್ಟಿರ ಬಹುದು ಎಂಬ ಅನುಮಾನ ನಮಗಿದೆ ಈ
ವಿಚಾರದಲ್ಲಿ ನಮ್ಮ ಬಳಿ ಚರ್ಚೆ ಮಾಡಿ ತಡವಾಗಿ ಬಂದು ದೂರು ನೀಡಿರುತ್ತೇನೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ
ಜರುಗಿಸಿ ಅಂತ ಇದ್ದ ದೂರಿನ ಮೇರೆಗೆ ಚಳ್ಳಕೆರ ಠಾಣೆಲ್ಲಿ ಪ್ರಕರಣ ದಾಖಲಾಗಿದೆ.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page