ಚಳ್ಳಕೆರೆ ಡಿ.8 ತಾಯಿ ಹಾಗೂ ಎರಡು ಮಕ್ಕಳ ಆತ್ಮಹತ್ಯೆ ಗೆ ಬಿಗ್ ಟ್ವಿಸ್ಟ್. ಹೌದು ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗ್ರಾಮದ ಇಬ್ಬರು ಮಕ್ಕಳು ಪರಿಣಿತ (5) ಹಾಗೂಜ್ಞಾನೇಶದ(18ತಿಂಗಳ ಮಗು) ಇಬ್ಬರು ಆಟವಾಡುತ್ತ ನೀರಿನ ತೊಟ್ಟಿ ಹಾಗೂ ಬಚ್ಚಲು ಪಾತ್ರೆಯಲ್ಲಿ ಬಿದ್ದು ಮೃತಪಟ್ಟಿರುವುದನ್ನು ಕಂಡು ಇಬ್ಬರು ಮಕ್ಕಳು ಮೃತ ಪಟ್ಟಿರುವುದರಿಂದ ಗಾಭರಿಗೊಂಡು ಮರ್ಯಾದೆಗೆ ಅಂಜಿಕೊಂಡು ಲತಾ ಸಹ ನೇಣಿಗೆ ಶರಣಾಗಿದ್ದಾಳೆ ಎಂಬ ಮಾಹಿತಿ ದೂರಿನಲ್ಲಿದೆ. *ದೂರಿನ ಸಾರಂಶ* ಮೃತೆಯ ತಂಗಿ ವೀಣಾ ಚಳ್ಳಕೆರೆ ಠಾಣೆಗೆ ಬಂದು ಮಧ್ಯಾಹ್ನ 1.30. ಗಂಟೆಗೆ ದೂರು ನೀಡಿದ್ದು ಸುಮಾರು 6 ವರ್ಷದ ಹಿಂದೆ ಲತಾಳನ್ನು ಯಲಗಟ್ಟ ಗ್ರಾಮದ ತಿಪ್ಪೇಸ್ವಾಮಿಯೊಂದಿಗೆ ವಿವಾಹವಾಗಿದ್ದು ಗಂಡ ಹೆಂಡತಿ ಇಬ್ಬರು ಯಾವುದೇ ಗಲಾಟೆ ಇಲ್ಲದೆ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು.
ಹೊನ್ನೇಶ ಇವರನ್ನು ಜಮೀನಿನಲ್ಲಿ ರೇಷ್ಮೆ ಮತ್ತು ತರಕಾರಿ ಬೆಳೆಗಳನ್ನು ಹಾಕಿಕೊಂಡು ಜೀವನ ಮಾಡಿಕೊಂಡಿದ್ದೆವು. ನನ್ನ ತಂಗಿಯಾದ ರೇಖಾಳು
ಈಗ್ಗೆ 9 ತಿಂಗಳ ಹಿಂದೆ ಹೆಣ್ಣು ಮಗುವಿಗೆ ಹೆರಿಗೆಯಾಗಿದ್ದು ನಮ್ಮ ಮನೆಗೆ ಬಾಣಂತಿತನಕ್ಕೆ ಬಂದು ಇರುತ್ತಾಳೆ. ನನ್ನ ಅಕ್ಕಳಾದ ಲತಾಳಿಗೆ 1 ನೇ
ಪ್ರಣೀತಾ, ಸುಮಾರು 5 ವರ್ಷ. 2 ನೇ ಜ್ಞಾನೇಶ, ಸುಮಾರು 18ತಿಂಗಳು ಮಕ್ಕಳು ಇರುತ್ತಾರೆ. ಮನೆಯಲ್ಲಿ ಎಲ್ಲರೂ ಅನ್ನೋನ್ಯವಾಗಿ
ಹೊಂದಿಕೊಂಡು ಸಂಸಾರ ಮಾಡುತ್ತಿದ್ದು ಯಾರಿಗೂ ಯಾವುದೇ ತೊಂದರೆ ಮತ್ತು ಕಿರುಕುಳ ಇರುವುದಿಲ್ಲ. ಶುಕ್ರವಾರ
ಬೆಳಿಗ್ಗೆಸುಮಾರು 8-45 ಗಂಟೆಗೆ ನಮ್ಮ ಮನೆಯಲ್ಲಿ ನನ್ನ ಅಕ್ಕಳಾದ ಲತಾ ಮತ್ತು ಆಕೆಯ 2 ಜನ ಮಕ್ಕಳು ಹಾಗೂ ಬಾಣಂತಿಯಾದ ನನ್ನ
ತಂಗಿ ರೇಖಾ ಹಾಗೂ ನಮ್ಮ ಅಜ್ಜಿಯಾದ ಗೌರಮ್ಮ ಇದ್ದರು. ನಮ್ಮ ಜಮೀನಿಗೆ ರೇಷ್ಮೆ ಸೊಪ್ಪನ್ನು
ಕೊಯ್ಯಲು ಹೋಗಿದ್ದು ಶುಕ್ರವಾರ ಬೆಳಿಗ್ಗೆ ಸುಮಾರು 9 ರಿಂದ10 ಗಂಟೆಯ ನಡುವೆ ಯಲಗಟ್ಟ ಗ್ರಾಮದಲ್ಲಿರುವ ನಮ್ಮ ವಾಸದ ಮನೆಯ ಬಚ್ಚಲಿನಲ್ಲಿ ನನ್ನ ಅಕ್ಕ ಲತಾಳ ಮಕ್ಕಳಾದ ಪ್ರಣೀತಾ ಮತ್ತು ಜ್ಞಾನೇಶ ರವರು ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದುದರಿಂದ ನನ್ನ ಅಕ್ಕ ಲತಾಳು ಗಾಬರಿಯಾಗಿ ಹೆದರಿಕೆಯಿಂದ ಬಚ್ಚಲು ಮನೆಯಲ್ಲಿರುವ ಕಬ್ಬಿಣದ ಪೈಪಿಗೆ
ನೈಟಿಯನ್ನು ಕಟ್ಟಿಕೊಂಡು ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ತಿಳಿದುಬಂದಿರುತ್ತದೆ. ನನ್ನ ಅಕ್ಕಳಾದ ಲತಾಳ 2 ಜನ ಚಿಕ್ಕ ಮಕ್ಕಳು
ನೀರಿನಲ್ಲಿ ಬಿದ್ದು ಮೃತ ಪಟ್ಟಿದ್ದರ ಬಗ್ಗೆ ಮತ್ತು ನನ್ನ ಅಕ್ಕ ಲತಾಳು ನೇಣು ಹಾಕಿಕೊಂಡು ಮೃತ ಪಟ್ಟಿರ ಬಹುದು ಎಂಬ ಅನುಮಾನ ನಮಗಿದೆ ಈ
ವಿಚಾರದಲ್ಲಿ ನಮ್ಮ ಬಳಿ ಚರ್ಚೆ ಮಾಡಿ ತಡವಾಗಿ ಬಂದು ದೂರು ನೀಡಿರುತ್ತೇನೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ
ಜರುಗಿಸಿ ಅಂತ ಇದ್ದ ದೂರಿನ ಮೇರೆಗೆ ಚಳ್ಳಕೆರ ಠಾಣೆಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments