ಕಾಡುಗೊಲ್ಲ ಸಮುದಾಯದ ಪುರಾಣ ಪುರುಷರಾದ ಚಿತ್ತಯ್ಯ, ಕಾಟಯ್ಯ ರವರ ತತ್ವ ಹಾಗುಆದರ್ಶಗಳನ್ನ ಯುವಜನತೆ ಅಳವಡಿಸಿಕೊಳ್ಳಿ :ಪ್ರೋ.ಜಿ.ಪರಮೇಶ್ವರ್

by | 06/05/24 | ಸುದ್ದಿ


ಹಿರಿಯೂರು :
ಕಾಡುಗೊಲ್ಲ ಸಮುದಾಯದ ಪುರಾಣ ಪುರುಷರಾದ ಚಿತ್ತಯ್ಯ ಕಾಟಯ್ಯ ರವರ ತತ್ವ ಆದರ್ಶಗಳನ್ನು ಇಂದಿನ ಯುವಪೀಳಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಪ್ರೋ.ಜಿ.ಪರಮೇಶ್ವರ್ ಹೇಳಿದರು.
ನಗರದ ವೇದಾವತಿ ಬಡಾವಣೆಯ ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲಿ ಶ್ರೀ ಕೃಷ್ಣ ದೇವಸ್ಥಾನ ಸಮಿತಿಯು ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕ ಕುರಿತು ಹಮ್ಮಿಕೊಳ್ಳಲಾಗಿದ್ದ ಪಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕಾಡುಗೊಲ್ಲ ಸಮುದಾಯವು ತನ್ನದೇ ಆದ ವಿಶಿಷ್ಠ ಸಂಸ್ಕೃತಿ ಭವ್ಯ ಪರಂಪರೆ ಹೊಂದಿದ್ದು, ಇದರ ಇತಿಹಾಸ ಬೆಳೆದು ಬಂದ ಬಗೆಯನ್ನು ನಾನು ಬರೆದಿರುವ ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕದಲ್ಲಿ ತಿಳಿಯಬಹುದಾಗಿದೆ, ಕಾಡುಗೊಲ್ಲರು ಶಿವನ ಬೆವರಿನಿಂದ ಹುಟ್ಟಿದ್ದು, ಉತ್ತಮ ಸಂಸ್ಕೃತಿಯ ನೆಲೆಯಿಂದ ಬಂದವರಾಗಿದ್ದಾರೆ,
ಇಂತಹ ಪುಸ್ತಕಗಳನ್ನು ಬರೆಯುವುದರಿಂದ ನೆರೆಹೊರೆ ಸಮಾಜ ಸಮುದಾಯ ಗುರುತಿಸುತ್ತದೆ, ಪುಸ್ತಕ ಓದುವುದರಿಂದ ಬರೆಯುವುದರಿಂದ ಸಮಾಜದಲ್ಲಿ ಉತ್ತಮ ಆರೋಗ್ಯಕರ ವಾತಾವರಣ ವೃದ್ಧಿಯಾಗುತ್ತದೆ, ಅಲ್ಲದೆ ವ್ಯಕ್ತಿಯಲ್ಲಿರುವ ದುಃಖ ಸಂಕಟ ವೇದನೆಯನ್ನು ಮರೆಯಲು ಓದು ಬರಹ ಸ್ಪೂರ್ತಿ ಆಗುತ್ತದೆ ಎಂಬುದಾಗಿ ಹೇಳಿದರು.
ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕದ ವ್ಯಾಖ್ಯಾನಕಾರರಾದ ಕಾಮಣ್ಣ ಮಾತನಾಡಿ, ಮೊದಮೊದಲು ಕಾಡುಗಳ ಇತಿಹಾಸವನ್ನು ಯಳವರು ಘಣೆ ಹೇಳುವ ಮೂಲಕ ಹೇಳುತ್ತಿದ್ದರು, ಈಗ ಇದರ ಸಂಪೂರ್ಣ ಇತಿಹಾಸವನ್ನು ಪ್ರೊ.ಜಿ.ಪರಮೇಶ್ವರಪ್ಪರವರು ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದಾರೆ,
ಇದು ಮುಂದಿನ ಯುವ ಪೀಳಿಗೆ ತಿಳಿಯಲು ಸಹಕಾರಿಯಾಗುತ್ತದೆ, ಕಾಡುಗೊಲ್ಲರ ಇತಿಹಾಸವು ಬಹಳ ಪ್ರಾಚೀನ ವಾಗಿದ್ದು, ಶಿವ ಪಾರ್ವತಿಯು ಭೂಮಿಯ ಪರ್ಯಟನೆ ಮಾಡುವ ಸಂದರ್ಭದಲ್ಲಿ ಗುಡಿಬಂಡೆ ಮತ್ತು ನಿಡಕನ್ ಮಧ್ಯೆ ಕಾಡಿಗೆ ಬೆಂಕಿ ಬಿದ್ದಿರುವ ಸಂದರ್ಭದಲ್ಲಿ ನವಿಲುಗಳು ಶಿವನನ್ನು ಬೇಡುತ್ತಾ ನಾವು ಇರುವರೆಗೂ ನಮ್ಮ ನವಿಲು ಗರಿಯನ್ನು ನಿಮಗೆ ಅರ್ಪಣೆ ಮಾಡುತ್ತೇವೆ, ಈ ಬೆಂಕಿಯನ್ನು ನಂದಿಸು ಎಂದು ಶಿವನನ್ನು ಬೇಡಿಕೊಳ್ಳುತ್ತವೆ,
ಆಗ ಬೆಂಕಿಯನ್ನು ನಂದಿಸುವಾಗ ಶಿವನ ಬೆವರಿನಿಂದ ಮೂರು ಜನ ಹುಟ್ಟುತ್ತಾರೆ. ಇವರು ಶಿವನ ಮಕ್ಕಳಾಗಿ ಕಾಟಯ್ಯ, ಚಿತ್ತಯ್ಯ, ಓಬಳ ನರಸಿಂಹಯ್ಯ ಎಂಬ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾರೆ, ಇವರು ಕಾಡುಗೊಲ್ಲರ ಮೂಲಪುರುಷರಾಗಿ ಗುರುತಿಸಲ್ಪಟ್ಟಿದ್ದಾರೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಮುಖಂಡ ಕರಿಯಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರಿಯಾಲ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ವೈ.ಶಿವಲಿಂಗಪ್ಪ, ತಮ್ಮಣ್ಣ, ಯುವಮುಖಂಡರಾದ ನಿರಂಜನ್ ಸ್ವಾಮಿ, ವಿವೇಕಾನಂದ ರಾಜ್ಯಯುವ ಪ್ರಶಸ್ತಿ ಪುರಸ್ಕೃತರಾದ ಎಸ್.ಜಿ.ರಂಗಸ್ವಾಮಿ ಸಕ್ಕರ, ತಾಲ್ಲೂಕು ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಚಿಕ್ಕಣ್ಣ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಜೈ.ನಿಜಲಿಂಗಪ್ಪ, ಡಿ.ಪಾಂಡುರಂಗಪ್ಪ, ಕಾಂತರಾಜು, ಡಿ.ದಾಸಣ್ಣ, ನಾಗರಾಜು, ಮಹಾಲಿಂಗಪ್ಪ, ಅರ್ಚಕ ರಾಮಚಂದ್ರಪ್ಪ, ತಿಮ್ಮಣ್ಣ, ರಾಮು,, ಕೃಷ್ಣಪ್ಪ, ಹಾಗೂ ಇತರರು ಉಪಸ್ಥಿತರಿದ್ದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page