ಹಿರಿಯೂರು :
ಕಾಡುಗೊಲ್ಲ ಸಮುದಾಯದ ಪುರಾಣ ಪುರುಷರಾದ ಚಿತ್ತಯ್ಯ ಕಾಟಯ್ಯ ರವರ ತತ್ವ ಆದರ್ಶಗಳನ್ನು ಇಂದಿನ ಯುವಪೀಳಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಪ್ರೋ.ಜಿ.ಪರಮೇಶ್ವರ್ ಹೇಳಿದರು.
ನಗರದ ವೇದಾವತಿ ಬಡಾವಣೆಯ ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲಿ ಶ್ರೀ ಕೃಷ್ಣ ದೇವಸ್ಥಾನ ಸಮಿತಿಯು ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕ ಕುರಿತು ಹಮ್ಮಿಕೊಳ್ಳಲಾಗಿದ್ದ ಪಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕಾಡುಗೊಲ್ಲ ಸಮುದಾಯವು ತನ್ನದೇ ಆದ ವಿಶಿಷ್ಠ ಸಂಸ್ಕೃತಿ ಭವ್ಯ ಪರಂಪರೆ ಹೊಂದಿದ್ದು, ಇದರ ಇತಿಹಾಸ ಬೆಳೆದು ಬಂದ ಬಗೆಯನ್ನು ನಾನು ಬರೆದಿರುವ ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕದಲ್ಲಿ ತಿಳಿಯಬಹುದಾಗಿದೆ, ಕಾಡುಗೊಲ್ಲರು ಶಿವನ ಬೆವರಿನಿಂದ ಹುಟ್ಟಿದ್ದು, ಉತ್ತಮ ಸಂಸ್ಕೃತಿಯ ನೆಲೆಯಿಂದ ಬಂದವರಾಗಿದ್ದಾರೆ,
ಇಂತಹ ಪುಸ್ತಕಗಳನ್ನು ಬರೆಯುವುದರಿಂದ ನೆರೆಹೊರೆ ಸಮಾಜ ಸಮುದಾಯ ಗುರುತಿಸುತ್ತದೆ, ಪುಸ್ತಕ ಓದುವುದರಿಂದ ಬರೆಯುವುದರಿಂದ ಸಮಾಜದಲ್ಲಿ ಉತ್ತಮ ಆರೋಗ್ಯಕರ ವಾತಾವರಣ ವೃದ್ಧಿಯಾಗುತ್ತದೆ, ಅಲ್ಲದೆ ವ್ಯಕ್ತಿಯಲ್ಲಿರುವ ದುಃಖ ಸಂಕಟ ವೇದನೆಯನ್ನು ಮರೆಯಲು ಓದು ಬರಹ ಸ್ಪೂರ್ತಿ ಆಗುತ್ತದೆ ಎಂಬುದಾಗಿ ಹೇಳಿದರು.
ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕದ ವ್ಯಾಖ್ಯಾನಕಾರರಾದ ಕಾಮಣ್ಣ ಮಾತನಾಡಿ, ಮೊದಮೊದಲು ಕಾಡುಗಳ ಇತಿಹಾಸವನ್ನು ಯಳವರು ಘಣೆ ಹೇಳುವ ಮೂಲಕ ಹೇಳುತ್ತಿದ್ದರು, ಈಗ ಇದರ ಸಂಪೂರ್ಣ ಇತಿಹಾಸವನ್ನು ಪ್ರೊ.ಜಿ.ಪರಮೇಶ್ವರಪ್ಪರವರು ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದಾರೆ,
ಇದು ಮುಂದಿನ ಯುವ ಪೀಳಿಗೆ ತಿಳಿಯಲು ಸಹಕಾರಿಯಾಗುತ್ತದೆ, ಕಾಡುಗೊಲ್ಲರ ಇತಿಹಾಸವು ಬಹಳ ಪ್ರಾಚೀನ ವಾಗಿದ್ದು, ಶಿವ ಪಾರ್ವತಿಯು ಭೂಮಿಯ ಪರ್ಯಟನೆ ಮಾಡುವ ಸಂದರ್ಭದಲ್ಲಿ ಗುಡಿಬಂಡೆ ಮತ್ತು ನಿಡಕನ್ ಮಧ್ಯೆ ಕಾಡಿಗೆ ಬೆಂಕಿ ಬಿದ್ದಿರುವ ಸಂದರ್ಭದಲ್ಲಿ ನವಿಲುಗಳು ಶಿವನನ್ನು ಬೇಡುತ್ತಾ ನಾವು ಇರುವರೆಗೂ ನಮ್ಮ ನವಿಲು ಗರಿಯನ್ನು ನಿಮಗೆ ಅರ್ಪಣೆ ಮಾಡುತ್ತೇವೆ, ಈ ಬೆಂಕಿಯನ್ನು ನಂದಿಸು ಎಂದು ಶಿವನನ್ನು ಬೇಡಿಕೊಳ್ಳುತ್ತವೆ,
ಆಗ ಬೆಂಕಿಯನ್ನು ನಂದಿಸುವಾಗ ಶಿವನ ಬೆವರಿನಿಂದ ಮೂರು ಜನ ಹುಟ್ಟುತ್ತಾರೆ. ಇವರು ಶಿವನ ಮಕ್ಕಳಾಗಿ ಕಾಟಯ್ಯ, ಚಿತ್ತಯ್ಯ, ಓಬಳ ನರಸಿಂಹಯ್ಯ ಎಂಬ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾರೆ, ಇವರು ಕಾಡುಗೊಲ್ಲರ ಮೂಲಪುರುಷರಾಗಿ ಗುರುತಿಸಲ್ಪಟ್ಟಿದ್ದಾರೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಮುಖಂಡ ಕರಿಯಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರಿಯಾಲ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ವೈ.ಶಿವಲಿಂಗಪ್ಪ, ತಮ್ಮಣ್ಣ, ಯುವಮುಖಂಡರಾದ ನಿರಂಜನ್ ಸ್ವಾಮಿ, ವಿವೇಕಾನಂದ ರಾಜ್ಯಯುವ ಪ್ರಶಸ್ತಿ ಪುರಸ್ಕೃತರಾದ ಎಸ್.ಜಿ.ರಂಗಸ್ವಾಮಿ ಸಕ್ಕರ, ತಾಲ್ಲೂಕು ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಚಿಕ್ಕಣ್ಣ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಜೈ.ನಿಜಲಿಂಗಪ್ಪ, ಡಿ.ಪಾಂಡುರಂಗಪ್ಪ, ಕಾಂತರಾಜು, ಡಿ.ದಾಸಣ್ಣ, ನಾಗರಾಜು, ಮಹಾಲಿಂಗಪ್ಪ, ಅರ್ಚಕ ರಾಮಚಂದ್ರಪ್ಪ, ತಿಮ್ಮಣ್ಣ, ರಾಮು,, ಕೃಷ್ಣಪ್ಪ, ಹಾಗೂ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments