ಕಾಡುಗೊಲ್ಲ ಸಮುದಾಯದ ಪುರಾಣ ಪುರುಷರಾದ ಚಿತ್ತಯ್ಯ, ಕಾಟಯ್ಯ ರವರ ತತ್ವ ಹಾಗುಆದರ್ಶಗಳನ್ನ ಯುವಜನತೆ ಅಳವಡಿಸಿಕೊಳ್ಳಿ :ಪ್ರೋ.ಜಿ.ಪರಮೇಶ್ವರ್

by | 06/05/24 | ಸುದ್ದಿ


ಹಿರಿಯೂರು :
ಕಾಡುಗೊಲ್ಲ ಸಮುದಾಯದ ಪುರಾಣ ಪುರುಷರಾದ ಚಿತ್ತಯ್ಯ ಕಾಟಯ್ಯ ರವರ ತತ್ವ ಆದರ್ಶಗಳನ್ನು ಇಂದಿನ ಯುವಪೀಳಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಪ್ರೋ.ಜಿ.ಪರಮೇಶ್ವರ್ ಹೇಳಿದರು.
ನಗರದ ವೇದಾವತಿ ಬಡಾವಣೆಯ ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲಿ ಶ್ರೀ ಕೃಷ್ಣ ದೇವಸ್ಥಾನ ಸಮಿತಿಯು ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕ ಕುರಿತು ಹಮ್ಮಿಕೊಳ್ಳಲಾಗಿದ್ದ ಪಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕಾಡುಗೊಲ್ಲ ಸಮುದಾಯವು ತನ್ನದೇ ಆದ ವಿಶಿಷ್ಠ ಸಂಸ್ಕೃತಿ ಭವ್ಯ ಪರಂಪರೆ ಹೊಂದಿದ್ದು, ಇದರ ಇತಿಹಾಸ ಬೆಳೆದು ಬಂದ ಬಗೆಯನ್ನು ನಾನು ಬರೆದಿರುವ ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕದಲ್ಲಿ ತಿಳಿಯಬಹುದಾಗಿದೆ, ಕಾಡುಗೊಲ್ಲರು ಶಿವನ ಬೆವರಿನಿಂದ ಹುಟ್ಟಿದ್ದು, ಉತ್ತಮ ಸಂಸ್ಕೃತಿಯ ನೆಲೆಯಿಂದ ಬಂದವರಾಗಿದ್ದಾರೆ,
ಇಂತಹ ಪುಸ್ತಕಗಳನ್ನು ಬರೆಯುವುದರಿಂದ ನೆರೆಹೊರೆ ಸಮಾಜ ಸಮುದಾಯ ಗುರುತಿಸುತ್ತದೆ, ಪುಸ್ತಕ ಓದುವುದರಿಂದ ಬರೆಯುವುದರಿಂದ ಸಮಾಜದಲ್ಲಿ ಉತ್ತಮ ಆರೋಗ್ಯಕರ ವಾತಾವರಣ ವೃದ್ಧಿಯಾಗುತ್ತದೆ, ಅಲ್ಲದೆ ವ್ಯಕ್ತಿಯಲ್ಲಿರುವ ದುಃಖ ಸಂಕಟ ವೇದನೆಯನ್ನು ಮರೆಯಲು ಓದು ಬರಹ ಸ್ಪೂರ್ತಿ ಆಗುತ್ತದೆ ಎಂಬುದಾಗಿ ಹೇಳಿದರು.
ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕದ ವ್ಯಾಖ್ಯಾನಕಾರರಾದ ಕಾಮಣ್ಣ ಮಾತನಾಡಿ, ಮೊದಮೊದಲು ಕಾಡುಗಳ ಇತಿಹಾಸವನ್ನು ಯಳವರು ಘಣೆ ಹೇಳುವ ಮೂಲಕ ಹೇಳುತ್ತಿದ್ದರು, ಈಗ ಇದರ ಸಂಪೂರ್ಣ ಇತಿಹಾಸವನ್ನು ಪ್ರೊ.ಜಿ.ಪರಮೇಶ್ವರಪ್ಪರವರು ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದಾರೆ,
ಇದು ಮುಂದಿನ ಯುವ ಪೀಳಿಗೆ ತಿಳಿಯಲು ಸಹಕಾರಿಯಾಗುತ್ತದೆ, ಕಾಡುಗೊಲ್ಲರ ಇತಿಹಾಸವು ಬಹಳ ಪ್ರಾಚೀನ ವಾಗಿದ್ದು, ಶಿವ ಪಾರ್ವತಿಯು ಭೂಮಿಯ ಪರ್ಯಟನೆ ಮಾಡುವ ಸಂದರ್ಭದಲ್ಲಿ ಗುಡಿಬಂಡೆ ಮತ್ತು ನಿಡಕನ್ ಮಧ್ಯೆ ಕಾಡಿಗೆ ಬೆಂಕಿ ಬಿದ್ದಿರುವ ಸಂದರ್ಭದಲ್ಲಿ ನವಿಲುಗಳು ಶಿವನನ್ನು ಬೇಡುತ್ತಾ ನಾವು ಇರುವರೆಗೂ ನಮ್ಮ ನವಿಲು ಗರಿಯನ್ನು ನಿಮಗೆ ಅರ್ಪಣೆ ಮಾಡುತ್ತೇವೆ, ಈ ಬೆಂಕಿಯನ್ನು ನಂದಿಸು ಎಂದು ಶಿವನನ್ನು ಬೇಡಿಕೊಳ್ಳುತ್ತವೆ,
ಆಗ ಬೆಂಕಿಯನ್ನು ನಂದಿಸುವಾಗ ಶಿವನ ಬೆವರಿನಿಂದ ಮೂರು ಜನ ಹುಟ್ಟುತ್ತಾರೆ. ಇವರು ಶಿವನ ಮಕ್ಕಳಾಗಿ ಕಾಟಯ್ಯ, ಚಿತ್ತಯ್ಯ, ಓಬಳ ನರಸಿಂಹಯ್ಯ ಎಂಬ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾರೆ, ಇವರು ಕಾಡುಗೊಲ್ಲರ ಮೂಲಪುರುಷರಾಗಿ ಗುರುತಿಸಲ್ಪಟ್ಟಿದ್ದಾರೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಮುಖಂಡ ಕರಿಯಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರಿಯಾಲ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ವೈ.ಶಿವಲಿಂಗಪ್ಪ, ತಮ್ಮಣ್ಣ, ಯುವಮುಖಂಡರಾದ ನಿರಂಜನ್ ಸ್ವಾಮಿ, ವಿವೇಕಾನಂದ ರಾಜ್ಯಯುವ ಪ್ರಶಸ್ತಿ ಪುರಸ್ಕೃತರಾದ ಎಸ್.ಜಿ.ರಂಗಸ್ವಾಮಿ ಸಕ್ಕರ, ತಾಲ್ಲೂಕು ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಚಿಕ್ಕಣ್ಣ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಜೈ.ನಿಜಲಿಂಗಪ್ಪ, ಡಿ.ಪಾಂಡುರಂಗಪ್ಪ, ಕಾಂತರಾಜು, ಡಿ.ದಾಸಣ್ಣ, ನಾಗರಾಜು, ಮಹಾಲಿಂಗಪ್ಪ, ಅರ್ಚಕ ರಾಮಚಂದ್ರಪ್ಪ, ತಿಮ್ಮಣ್ಣ, ರಾಮು,, ಕೃಷ್ಣಪ್ಪ, ಹಾಗೂ ಇತರರು ಉಪಸ್ಥಿತರಿದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page