ಚಳ್ಳಕೆರೆ ಡಿ.12. ನೇತಾಡುವ ವಿದ್ಯುತ್ ತಂತಿಗಳು ಬಿರುಕು ಬಿಟ್ಟು ಶಿಥಿಲವಾದ ವಿದ್ಯುತ್ ಕಂಬಗಳು ವಿದ್ಯುತ್ ಅವಘಡಕ್ಕೆ ಕೈಬೀಸಿ ಕರೆಯುವಂತಿದೆ ಎಂಬ ತಲೆಬರಹದಡಿಯಲ್ಲಿ ಡಿಸೆಂಬರ್ 5 ರಂದು ಜನಧ್ವನಿ ಡಿಜಿಟಲ್ ಮೀಡಿಯಾದಲ್ಲಿ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಿಥಿಲವಾದ ವಿದ್ಯುತ್ ಕಂಬಗಳನ್ನು ಬದಲಾಯಿಸಿ ನೇತಾಡುವ ವಿದ್ಯುತ್ ತಂತಿಗಳನ್ನು ಸರಿಪಡಿ ಬೆಸ್ಕಾಂ ಅಧಿಕಾರಿಗಳು ಮುಂದಾಗಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ರೈತ ವೃಷಬೇಂದ್ರಪ್ಪ ರಿ ಸಂ44ರಲ್ಲಿ ನೇತಾಡುವ ವಿದ್ಯುತ್ ತಂತಿಗಳು ಕೈಗೆಟುವಂತಿದ್ದು ಇನ್ನು ಕೃಷಿ ಚಟುವಟಿಕೆ ವೇಳೆ ಸ್ವಲ್ಲ ಯ್ಯಾಮಾರಿದರೂ ಇಹ ಲೋಕ ತ್ಯಜಿಸುವುದು ಗ್ಯಾರೆಂಟಿ. ಇನ್ನು ವಿದ್ಯುತ್ ಕಂಬಳು ಬಿರುಕು ಬಿಟ್ಟು ಶಿಥಿಲವಾಗಿದ್ದು ಗಾಳಿಗೆ ಯಾವುದೇ ಸಂದರ್ಭದಲ್ಲಿ ಬೀಳುವ ಭೀತಿಯಲ್ಲಿ ರೈತರು ಆತಂಕದಲ್ಲಿ ಜಮೀನಿನಲ್ಲಿ ಉಳುಮೆ ಮಾಡುವಂತಾಗಿದ್ದು. ಜಾನುವಾರುಗಳೇನಾದರೂ ವಿದ್ಯುತ್ ಕಂಬಗಳಿಗೆ ಉಜ್ಜಿ ದರೆ ವಿದ್ಯುತ್ ಶಾಖ್ ಹೊಡೆಯುವಯದು ಗ್ಯಾರೆಂಟಿ ಶಿಥಿಲವಾದ ವಿದ್ಯುತ್ ಕಂಬಗಳ ನೇತಾಡುವ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಬೆಸ್ಕಾಂ ಇಲಾಖೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ರೈತ ವೃಷಬೇಂದ್ರಪ್ಪ ಅಳಲು ತೋಡಿಕೊಂಡಿದ್ದರು ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಶಿಥಿಲವಾದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ಕಂಬಗಳನ್ನು ಹಾಕಿದ್ದಾರೆ ರೈತ ಜನಧ್ವನಿ ಡಿಜಿಟಲ್ ಮೀಡಿಯಾ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ ಅಭಿನಂಧನೆಗಳನ್ನು ತಿಳಿಸಿದ್ದಾರೆ.
0 Comments