ಚಳ್ಳಕೆರೆ ಜನಧ್ವನಿ ವಾರ್ತೆ ಮೇ 20
ಬಿಸಿಲಿನ ಧಗೆಯಿಂದ ಕಂಗಾಲಾಗಿರುವ ಹಳ್ಳಿಗಳ ಜನತೆ ದಣಿವಾರಿಸಿಕೊಳ್ಳಲು ಜಮೀನಿಲ್ಲಿರುವ ಈಜಾಡಲು ನೀರಿನ ತೊಟ್ಟಿಗಳ ಮೊರೆ ಹೋಗುತ್ತಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ಸಿದ್ದರಾಪುರ ಗ್ರಾಮದ ಸಮೀಪವಿರುವ ರೈತರ ಜಮೀನಿಲ್ಲಿ ನೀರು ಸಂಗ್ರಹಣೆಗಾಗಿ ನಿರ್ಮಿಸಿರುವ ನೀರಿನ ತೊಟ್ಟಿಯಲ್ಲಿ ಮಕ್ಕಳು ಈಜಾಡುವ ಮೂಲಕ ಬಿಸಿನ ದಣಿವಾರಿಕೊಳ್ಳುವ ದೃಶ್ಯ ಕಂಡು ಬಂತು.
ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿದ್ದ ತೆರದ ಬಾವಿಗಳಲ್ಲಿ ಅಂತರ್ಜಲಕೊರತೆಯಿAದ ಬರಿದಾಗಿದ್ದು ಇನ್ನು ಕೆಲವರು ಕೊಳವೆ ಬಾವಿಗಳ ಹಾವಳಿಗೆ ತೆರದ ಬಾವಿಗಳನ್ನು ಮುಚ್ಚಿದ್ದು ಗ್ರಾಮೀಣ ಭಾಗದ ಇತ್ತೀಚಿನ ಯುವಕರಲ್ಲಿ ಈಜು ಮರೆತುಹೊಗುವಂತೆ ಮಾಡಿದೆ. ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ವಿದ್ಯಾಥಿಗಳು ನೀರಿನ ತೊಟ್ಟಿ, ವೇದಾವತಿ ನದಿ, ಕೆರೆಗಳಲ್ಲಿ ಈಜಲು ಮುಗಿಬೀಳುತ್ತಿದ್ದಾರೆ.
ತಾಲೂಕು ಕೇಂದ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಸರಕಾರದವತಿಯಿಂದ ಈಜು ಕೊಳ ನಿರ್ಮಿಸಿದರೆ ಈಜು ಕಲಿಯಲು ಸಹಕಾರಿಯಾಗಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಬಯಲು ನಾಡಿನ ಜನತೆ ರೋಸಿ ಹೋಗಿದ್ದಾರೆ. ಉಷ್ಣತೆ ಅಧಿಕವಾಗಿದೆ. ಅದರಲ್ಲಿಯೂ ಮಧ್ಯಾಹ್ನ ವೇಳೆಯಂತೂ ಬಿಸಿಲು ಕೆಂಡದAತೆ ಇರುತ್ತದೆ. ಹೊರಗಡೆ ಹೋಗಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಬಿಸಿಲಿನ ತಾಪಮಾನದಿಂದ ತಪ್ಪಿಸಿಕೊಳ್ಳಲು ರೈತರ ಜಮೀನಿನ ನೀರಿನ ತೊಟ್ಟಿ, ಕೆರೆ ಮತ್ತು ಬಾವಿ ಗಳಲ್ಲಿ ಈಜಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೆಲವೊಂದು ಬಾವಿ ಮತ್ತು ಕೆರೆಗಳಲ್ಲಿ ನೀರು. ಇದ್ದ ಕಡಿಮೆ ನೀರಿನಲ್ಲಿಯೇ ಬಹುತೇಕರು ಈಜಾಡುವ ಮೂಲಕ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿರತರಾಗಿದ್ದಾರೆ.
ಈಗಲಾದರೂ ಸಂಬAಧಪಟ್ಟ ಇಲಾಖೆ ತಾಲೂಕು ಕೇಂದ್ರ ಹಾಗೂ ವಿವಿಧ ಕಡೆ ಈಜು ಕೊಳ ನಿರ್ಮಿಸಲು ಮುಂದಾಗುವರೇ ಕಾದು ನೋಡ ಬೇಕಿದೆ.
0 Comments