ಟ
ಚಳ್ಳಕೆರೆ ಜನಧ್ವನಿ ವಾರ್ತೆ ಮೇ19
ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಏನೆಲ್ಲ ಕಸರತ್ತು ಮಾಡುತ್ತಿದೆ. ಆದರೆ, ಸಂಚಾರ ನಿಯಮ ಉಲ್ಲಂಘಿಸುವ ಆಟೋ ರಿಕ್ಷಾಗಳ ನಿಯಂತ್ರಣ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಗಳು ವಿಸ್ತೀರ್ಣವಿದ್ದರೂ ಸಹ ಆಟೋ ಚಾಲಕರು ವಾಹನಗಳನ್ನು ಮಧ್ಯರಸ್ತೆಯಲ್ಲೇ ನಿಲ್ಲಿಸಿಕೊಂಡು ಹರಟೆ ಹೊಡೆಯುವುದು. ಬಸ್ ಗಳು ಖಾಸಗಿ ಬಸ್ ನಿಲ್ದಾಣಕ್ಕೆ ಬಂದ ತಕ್ಷಣ ಎಲ್ಲೋ ಇದ್ದ ಆಟೋಗಳು ಬಸ್ ನಿಲ್ದಾಣದಲ್ಲಿ ನಿಲ್ಲುವ ಬಸ್ ಸುತ್ತಾ ಆಟೋಗಳು ಸುತ್ತುವರೆದು ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದು ಇದರಿಂದ ಪ್ರಯಾಣಿಕರು ಹಾಗೂ ಪಾದಾ ಚಾರಿಗಳು ಹೈರಾಣಾಗಿದ್ದಾರೆ.
ಖಾಸಗಿ ಬಸ್ ನಿಲ್ದಾಣ ಸೇರಿದಂತೆ ರಸ್ತೆಯಲ್ಲಿ ಆಟೋಗಳ ಅಡ್ಡಾದಿಡ್ಡಿ ನಿಲುಗಡೆ ಹಾಗೂ ಸಂಚಾರಿAದ ಸಂಚಾರಿ ನಿಯಮ ಉಲ್ಲಂಘಟನೆಯಿಂದ ವೃದ್ದರು, ಮಕ್ಕಳು ಹಾಗೂ ಸಾರ್ವಜನಿಕರು ರಸ್ತೆ ದಾಟುವಾಗ ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ ಆಟೋಗಳ ಅಡ್ಡಿದಿಡ್ಡಿ ಸಂಚರಿಸಿದುರೂ ಸಹ ಪೊಲೀಸ್ ಇಲಾಖೆ ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ನಗರಕ್ಕೆ ನಿತ್ಯ ಸಹಸ್ರಾರು ಜನರು ಬರುತ್ತಾರೆ. ಅವರಲ್ಲಿ ಬಹುತೇಕ ಜನರು ಪಾವಗಡ, ಬಳ್ಳಾರಿ ,ಬೆಂಗಳೂರು ರಸ್ತೆಯ ಮೂಲಕ ನೆಹರು ವೃತ್ತದ ಮೂಲಕ ಜನ ದಟ್ಟಣೆ ಹಾಗೂ ವಾಹನಗಳ ದಟ್ಟಣೆ ನಡುವೆಯೂ ರಸ್ತೆಯಲ್ಲೆ ನಡೆದುಕದೊಂಡು ಹೋಗುವ ಪರಿಸ್ಥಿತಿ ಇದ್ದು ಪಾದಚಾರಿಗಳಿಗೆ ವಾಹನಗಳು ಡಿಕ್ಕಿ ಹೊಡೆದ ಪರಿಣಾಮಗಳು ಸಹ ಇವೆ.
ಜನರು ಓಡಾಡುವ ರಸ್ತೆಯಲ್ಲಿ ಆಟೋಗಳನ್ನು ನಿಲ್ಲಿಸುವುದರಿಂದ ಹಾಗೂ ಪ್ರಯಾಣಿಕರನ್ನು ಹುಡುಕಲು ಆಟೊಗಳನ್ನು ನಿಧಾನವಾಗಿ ಚಲಾಯಿಸುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮತ್ತಿತರ ಕಡೆಗಳಿಂದ ಬಂದ ಬಸ್ ಹಾಗೂ ಇತರ ವಾಹನಗಳ ಸಂಚಾರಕ್ಕೂ ಅಡ್ಡಿಯನ್ನುಂಟು ಮಾಡುತ್ತಿವೆ. ಆಟೋಗಳು ರಸ್ತೆ ಮೇಲೆ ನಿಂತು ಜನರನ್ನು ಇಳಿಸುವುದು, ಹತ್ತಿಸಿಕೊಳ್ಳುವುದನ್ನು ಮಾಡುತ್ತವೆ. ಆದರೂ ಪೊಲೀಸರು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತನೆ ಮಾಡುವುದು ಆಟೋ ಚಾಲಕರಿಗೆ ವರದಾನವಾಗಿದೆ.
ಪಾದಚಾರಿಗಳ ರಸ್ತೆಗಳು ಒತ್ತುವರಿ.
ಬೆಂಗಳೂರು ರಸ್ತೆ ಹಗಲೀಕರಣ ಮಾಡಿ ಇನ್ನು ಒಂದು ತಿಂಗಳು ಕಳೆದಿಲ್ಲ ಆಗಲೆ ರಸ್ತೆಯನ್ನು ವಾಹನ ಸವಾರರು ಹಾಗೂ ಬೀದಿ ಬದಿ ವ್ಯಾಪಾರಿಗಳು ಅಕ್ರಮಿಸಿಕೊಂಡಿದ್ದಾರೆ.
ಅದೇ ರೀತಿ ನೆಹರು ವೃತ್ತದಿಂದ ಲೋಕೋಪಯೋಗಿ ಇಲಾಖೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ತಾಲೂಕು ಕಚೇರಿ ವರೆಗೆ ಪಾದಚಾರಿಗಳಿಗೆಂದು ನಿರ್ಮಿಸಿದ ರಸ್ತೆಯನ್ನು ವ್ಯಾಪಾರಿಗಳು ಅಕ್ರಮಿಸಿಕೊಂಡು ಖಾಯಂ ಗುಡಾರ ಹಾಕಿಕೊಂಡಿರುವುದರಿಂದ ಪಾದ ಚಾರಿಗಳಿಗೂ ಓಡಾಡಲು ಬಿಡದೆ ಅಕ್ರಮಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು,ವೃದ್ದರು, ಮಕ್ಕಳು ಹಾಗೂ ಸಾರ್ವಜನಿಕರು ಅನಿವಾರ್ಯವಾಗಿ ರಸ್ತೆಯಲ್ಲೇ ನಡೆದುಕೊಂಡು ಹೋಗವುದು ಅನಿವಾರ್ಯವಾಗಿದೆ..
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ವಾಹನಗಳ ಅಡ್ಡದಿಡ್ಡ ಸಂಚಾರಕ್ಕೆ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸ್ವಲ್ವವಾದರೂ ಪಾದಚಾರಿರಸ್ತೆ ಬಿಡಿಸಿಕೊಡುವರೇ ಕಾದು ನೋಡ ಬೇಕಿದೆ.
0 Comments