ಭದ್ರಾಮೇಲ್ದಂಡೆ ಯೋಜನೆ ಪೈಪ್ ಲೈನ್ ಕಾಮಗಾರಿಗೆ ರೈತರ ಫಲವತ್ತಾದ ಭೂಮಿ ಬರಡು ಇತ್ತ ಪರಿಹಾರ ಇಲ್ಲದೆ ರೈತರ ಗೋಳು ಕೇಳುವರಾರರು..?

by | 15/05/23 | ಚುನಾವಣೆ-2023

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 15
ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ರೈತನ ಫಲವತ್ತಾದ ಭೂಮಿಯನ್ನು ಕೃಷಿ ಚಟುವಟಿಕೆ ಮಾಡಲು ಬಾರದಂತೆ ಮಾಡಿರುವುದು ಅಭಿವೃದ್ಧಿ ಹೆಸರನಲ್ಲಿ ರೈತರ ಕೃಷಿ ಭೂಮಿಯನ್ನು ಹಾಳುಮಾಡಿರುವುದು ರೈತನನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.


ಹೌದು ಇದು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಚೌಳೂರು ಕಾವಲು ರಿ.ರಂ ೧ ರಲ್ಲಿ ಜಯಮ್ಮ ಕೋಂ ಜಿ.ಕೆ.ವೀರಣ್ಣ ಇವರ ಫಲವತ್ತಾದ ಭೂಮಿಯಲ್ಲಿ ಭದ್ರಾಮೇಲ್ದಂಡೆಯೋಜನೆಯಡಿಯಲ್ಲಿ ಕರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸುಮಾರು ೮ ಅಡಿ ಆಳಕ್ಕೆ ಗುಂಡಿ ತೆಗೆದಿದ್ದು ಜಮೀನಿಲ್ಲಿ ರಾಶಿ ರಾಶಿ ಮಣ್ಣು ಕಲ್ಲುಗಳು ಬಿದ್ದಿದ್ದು ಕೃಷಿ ಚಟುವಟಿಕೆಗೆ ಬಾರದಂತಾಗಿದೆ.


ಪೈಪ್ ಲೈನ್ ಗುಂಡಿತೆಗೆದು ಮುಚ್ಚದೇ ಇರುವದರಿಂದ ಜಮೀನಿನಲ್ಲಿ ಬಿದ್ದಿದ್ದ ಫಲವತ್ತಾದ ಮಣ್ಣನ್ನು ರಾತ್ರೋ ರಾತ್ರಿ ಮಣ್ಣುನಿನ ಕಳ್ಳರು ಜೆಸಿಬಿ ಟ್ರಾಕ್ಟರ್ ಮೂಲಕ ಸಾಗಿಸಿರುವುದು ಮತ್ತಷ್ಟು ರೈತರಲ್ಲಿ ಆತಂಕ ಮೂಡಿದೆ ಇದ್ದ ಫಲವತ್ತಾದ ಮಣ್ಣು ಕಳ್ಳರ ಪಾಲಾಗಿದ್ದು ಜಮೀನು ಜಮೀನಿನಲ್ಲಿ ಇಟಾಚಿ , ಜೆಡಿಬಿ, ಹಾಗೂ ಇತರೆ ವಾಹನಗಳು ಓಡಾಡಿರುವದರಿಂದ ಉಳುಮೆ ಹಾಗೂ ಬಿತ್ತನೆ ಮಾಡಲು ಬರದಂತಾಗಿದೆ ಪೈಪ್ ಲೈಲ್ ತೆಗೆದು ಸುಮಾರು ತಿಂಗಳು ಕಳೆದರೂ ಮುಚ್ಚದೇ ಇರುವುದು ಅಧಿಕಾರಿಗಳ ನಿರ್ಲಕ್ಷದಿಂದ ರೈತರ ಫಲವತ್ತಾದ ಮಣ್ಣು ಕಳ್ಳರ ಪಾಗುತ್ತಿದೆ,
ಈಗಾಲೆ ರೈತರು ಸಕಾಲಕ್ಕೆ ಮಳೆ ಬೆಳೆಲಯಿಲ್ಲದೆ ಸಾಲದ ಸಳಿಗೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿ ಸಾವಿನ ಮನೆ ಕದ ತಟ್ಟುವಂತಾಗಿದೆ ಅದಲ್ಲೂ ಸಹ ಅಭಿವೃದ್ಧಿ ಹೆಸರಿನಲ್ಲಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ,


ಜಮೀನಿನಲ್ಲಿ ಪೈಪ್ ಲೈನ್ ತೋಡಿದ್ದ ರಾಶಿ ರಾಶಿ ಮಣ್ಣು ಸಾಗಿರುವುದು.
ರೈತರ ಫಲವತ್ತಾದ ಭೂಮಿ ಹಾಳದಾರೂ ಸಹ ಇತ್ತ ಪಡಿಗಾಸು ಪರಿಹಾರ ನೀಡಿಲ್ಲ ಸಕಾಲಕ್ಕೆ ಕೆಲಸ ಮುಗಿಸಿ ಅದನ್ನು ಸಮತ್ತಟ್ಟು ಮಾಡುವ ಗೋಜಿಗೆ ಹೋಗತ್ತಿಲ್ಲ ರೈತರಿಗೆ ಅನ್ಯಾಯವಾದರೂ ಸಹ ಯಾವೊಬ್ಬ ಅಧಿಕಾರಿಯೂ ಇತ್ತ ಇಣಿಕಿ ನೋಡುತ್ತಿಲ್ಲ ಕೂಡಲೆ ಸಂಬAಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಬರುವರೇ ಕಾದು ನೋಡ ಬೇಕಿದೆ.
ಇದು ಒಬ್ಬ ರೈತರ ಸಮಸ್ಯೆಯಲ್ಲಿ ರೈತರ ಜಮೀನಿನಲ್ಲಿ ಪೈಪ್ ಲೈನ್ ತೆಗೆದಿರುವ ಎಲ್ಲಾ ರೈತರ ಫಲವತ್ತಾದ ಭೂಮಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷದಿಂದ ಬರಡು ಭೂಮಿಯಾಗಿ ಪರಿವರ್ತನೆಯಾಗಿ ರೈತರನ್ನು ಸಂಕಷ್ಟಕ್ಕೀಡು ಮಾಡುವಂತಾಗಿದೆ.


ರೈತರ ಮಹಿಳೆ ಜಯಮ್ಮ ಮಾತನಾಡಿ ಫಲವತ್ತಾದ ಭೂಮಿಯಲ್ಲಿ ಭದ್ರಾಮೇಲ್ದಂಡೆಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಮಾಡಲು ಸಂಬAಧಪಟ್ಟ ಅಧಿಕಾರಿಗಳು ರೈತನಿಂದ ಯಾವುದೇ ಅಗ್ರಿಮೆಂಟ್ ಹಾಗೂ ಅನುಮತಿ ಪಡೆಯದೆ ಫಲವತ್ತಾದ ಭೂಮಿಯಲ್ಲಿ ಅವೈಜ್ಞಾನಿಕ ಪೈಪ್ ಲೈನ್ ಮಾಡಲಾಗಿದ್ದು. ಜಮೀನಿಲ್ಲಿ ರಾಶಿ ರಾಶಿ ಮಣ್ಣು. ಕಲ್ಲು ಮಣ್ಣು ರಾಶಿಬಿದ್ದಿರುವುದು ಪೈಪ್ ಲೈನ್ ತೆಗೆದು ಸುಮಾರು ನಾಲ್ಕೆöÊದು ತಿಂಗಳು ಕಳೆದರೂ ಮಚ್ಚಿ ಭೂಮಿ ಸಮತಟ್ಟು ಮಾಡದೆ ಇರುವುದರಿಂದ ಜಮೀನಿನಲ್ಲಿದ್ದ ಮಣ್ಣನ್ನು ಸಹ ಸಾಗಿಸಿದ್ದಾರೆ ಇದರಿಂದ ಕೈಷಿ ಚಟುವಟಿಕೆ ಹಾಗೂ ಬಿತ್ತನೆ ಮಾಡಲು ಬರದಂತಾಗಿದ್ದು ಭೂಮಿಯನ್ನು ಸಮತಟ್ಟು ಮಾಡಿಸಿಕೊಡುವಂತೆ ಸಂಬAಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸಾಕಷ್ಟು ಬಾರಿ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಮಹಿಳೆಯ ಅಳಲು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page