ಚಳ್ಳಕೆರೆ ಜನಧ್ವನಿ ವಾರ್ತೆ ಮೇ 15
ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ರೈತನ ಫಲವತ್ತಾದ ಭೂಮಿಯನ್ನು ಕೃಷಿ ಚಟುವಟಿಕೆ ಮಾಡಲು ಬಾರದಂತೆ ಮಾಡಿರುವುದು ಅಭಿವೃದ್ಧಿ ಹೆಸರನಲ್ಲಿ ರೈತರ ಕೃಷಿ ಭೂಮಿಯನ್ನು ಹಾಳುಮಾಡಿರುವುದು ರೈತನನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಚೌಳೂರು ಕಾವಲು ರಿ.ರಂ ೧ ರಲ್ಲಿ ಜಯಮ್ಮ ಕೋಂ ಜಿ.ಕೆ.ವೀರಣ್ಣ ಇವರ ಫಲವತ್ತಾದ ಭೂಮಿಯಲ್ಲಿ ಭದ್ರಾಮೇಲ್ದಂಡೆಯೋಜನೆಯಡಿಯಲ್ಲಿ ಕರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸುಮಾರು ೮ ಅಡಿ ಆಳಕ್ಕೆ ಗುಂಡಿ ತೆಗೆದಿದ್ದು ಜಮೀನಿಲ್ಲಿ ರಾಶಿ ರಾಶಿ ಮಣ್ಣು ಕಲ್ಲುಗಳು ಬಿದ್ದಿದ್ದು ಕೃಷಿ ಚಟುವಟಿಕೆಗೆ ಬಾರದಂತಾಗಿದೆ.
ಪೈಪ್ ಲೈನ್ ಗುಂಡಿತೆಗೆದು ಮುಚ್ಚದೇ ಇರುವದರಿಂದ ಜಮೀನಿನಲ್ಲಿ ಬಿದ್ದಿದ್ದ ಫಲವತ್ತಾದ ಮಣ್ಣನ್ನು ರಾತ್ರೋ ರಾತ್ರಿ ಮಣ್ಣುನಿನ ಕಳ್ಳರು ಜೆಸಿಬಿ ಟ್ರಾಕ್ಟರ್ ಮೂಲಕ ಸಾಗಿಸಿರುವುದು ಮತ್ತಷ್ಟು ರೈತರಲ್ಲಿ ಆತಂಕ ಮೂಡಿದೆ ಇದ್ದ ಫಲವತ್ತಾದ ಮಣ್ಣು ಕಳ್ಳರ ಪಾಲಾಗಿದ್ದು ಜಮೀನು ಜಮೀನಿನಲ್ಲಿ ಇಟಾಚಿ , ಜೆಡಿಬಿ, ಹಾಗೂ ಇತರೆ ವಾಹನಗಳು ಓಡಾಡಿರುವದರಿಂದ ಉಳುಮೆ ಹಾಗೂ ಬಿತ್ತನೆ ಮಾಡಲು ಬರದಂತಾಗಿದೆ ಪೈಪ್ ಲೈಲ್ ತೆಗೆದು ಸುಮಾರು ತಿಂಗಳು ಕಳೆದರೂ ಮುಚ್ಚದೇ ಇರುವುದು ಅಧಿಕಾರಿಗಳ ನಿರ್ಲಕ್ಷದಿಂದ ರೈತರ ಫಲವತ್ತಾದ ಮಣ್ಣು ಕಳ್ಳರ ಪಾಗುತ್ತಿದೆ,
ಈಗಾಲೆ ರೈತರು ಸಕಾಲಕ್ಕೆ ಮಳೆ ಬೆಳೆಲಯಿಲ್ಲದೆ ಸಾಲದ ಸಳಿಗೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿ ಸಾವಿನ ಮನೆ ಕದ ತಟ್ಟುವಂತಾಗಿದೆ ಅದಲ್ಲೂ ಸಹ ಅಭಿವೃದ್ಧಿ ಹೆಸರಿನಲ್ಲಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ,
![](https://janadhwani.in/wp-content/uploads/2023/05/WhatsApp-Image-2023-05-15-at-7.15.08-AM1-1024x563.jpeg)
ಜಮೀನಿನಲ್ಲಿ ಪೈಪ್ ಲೈನ್ ತೋಡಿದ್ದ ರಾಶಿ ರಾಶಿ ಮಣ್ಣು ಸಾಗಿರುವುದು.
ರೈತರ ಫಲವತ್ತಾದ ಭೂಮಿ ಹಾಳದಾರೂ ಸಹ ಇತ್ತ ಪಡಿಗಾಸು ಪರಿಹಾರ ನೀಡಿಲ್ಲ ಸಕಾಲಕ್ಕೆ ಕೆಲಸ ಮುಗಿಸಿ ಅದನ್ನು ಸಮತ್ತಟ್ಟು ಮಾಡುವ ಗೋಜಿಗೆ ಹೋಗತ್ತಿಲ್ಲ ರೈತರಿಗೆ ಅನ್ಯಾಯವಾದರೂ ಸಹ ಯಾವೊಬ್ಬ ಅಧಿಕಾರಿಯೂ ಇತ್ತ ಇಣಿಕಿ ನೋಡುತ್ತಿಲ್ಲ ಕೂಡಲೆ ಸಂಬAಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಬರುವರೇ ಕಾದು ನೋಡ ಬೇಕಿದೆ.
ಇದು ಒಬ್ಬ ರೈತರ ಸಮಸ್ಯೆಯಲ್ಲಿ ರೈತರ ಜಮೀನಿನಲ್ಲಿ ಪೈಪ್ ಲೈನ್ ತೆಗೆದಿರುವ ಎಲ್ಲಾ ರೈತರ ಫಲವತ್ತಾದ ಭೂಮಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷದಿಂದ ಬರಡು ಭೂಮಿಯಾಗಿ ಪರಿವರ್ತನೆಯಾಗಿ ರೈತರನ್ನು ಸಂಕಷ್ಟಕ್ಕೀಡು ಮಾಡುವಂತಾಗಿದೆ.
ರೈತರ ಮಹಿಳೆ ಜಯಮ್ಮ ಮಾತನಾಡಿ ಫಲವತ್ತಾದ ಭೂಮಿಯಲ್ಲಿ ಭದ್ರಾಮೇಲ್ದಂಡೆಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಮಾಡಲು ಸಂಬAಧಪಟ್ಟ ಅಧಿಕಾರಿಗಳು ರೈತನಿಂದ ಯಾವುದೇ ಅಗ್ರಿಮೆಂಟ್ ಹಾಗೂ ಅನುಮತಿ ಪಡೆಯದೆ ಫಲವತ್ತಾದ ಭೂಮಿಯಲ್ಲಿ ಅವೈಜ್ಞಾನಿಕ ಪೈಪ್ ಲೈನ್ ಮಾಡಲಾಗಿದ್ದು. ಜಮೀನಿಲ್ಲಿ ರಾಶಿ ರಾಶಿ ಮಣ್ಣು. ಕಲ್ಲು ಮಣ್ಣು ರಾಶಿಬಿದ್ದಿರುವುದು ಪೈಪ್ ಲೈನ್ ತೆಗೆದು ಸುಮಾರು ನಾಲ್ಕೆöÊದು ತಿಂಗಳು ಕಳೆದರೂ ಮಚ್ಚಿ ಭೂಮಿ ಸಮತಟ್ಟು ಮಾಡದೆ ಇರುವುದರಿಂದ ಜಮೀನಿನಲ್ಲಿದ್ದ ಮಣ್ಣನ್ನು ಸಹ ಸಾಗಿಸಿದ್ದಾರೆ ಇದರಿಂದ ಕೈಷಿ ಚಟುವಟಿಕೆ ಹಾಗೂ ಬಿತ್ತನೆ ಮಾಡಲು ಬರದಂತಾಗಿದ್ದು ಭೂಮಿಯನ್ನು ಸಮತಟ್ಟು ಮಾಡಿಸಿಕೊಡುವಂತೆ ಸಂಬAಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸಾಕಷ್ಟು ಬಾರಿ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಮಹಿಳೆಯ ಅಳಲು.
0 Comments