ಚಳ್ಳಕೆರೆ ಜನಧ್ವನಿ ವಾರ್ತೆ ಮೇ2
ಜನರೇನು ದಡ್ಡರಲ್ಲ ಕ್ಷೇತ್ರ ಅಭಿವೃದ್ಧಿಯಾರು ಮಾಡಿದ್ದಾರೆ ಎಂಬುದು ಕಣ್ಣಿಗೆ ಕಾಣಿಸುತ್ತಿದೆ ನನ್ಮ ಜನ ನನ್ನ ಕೈ ಬಿಡಲ್ಲ. ಎಲ್ಲಾರಿಗೂ 13ರಂದು ಉತ್ತರ ಕೊಡುತ್ತಾರೆ. ಮೇ 10 ರಂದು ಮತದಾನದಲ್ಲಿಕ್ರಮ ಸಂಖ್ಯೆ ೩3ರ ಹಸ್ತದ ಗುರುತಿಗೆ ಮತನಾಡಿ ಕಾಂಗ್ರೆಸ್ ಪಕ್ಷಬೆಂಬಲಿಸಿ ಎಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.
ಚಳ್ಳಕೆರೆ ವಿಧಾನ ಸಭೆ ಕ್ಷೇತ್ರವ್ಯಾಪ್ತಿಯ ನಗರಂಗೆರೆ ಹಾಗೂ ಗೋಪನಹಳ್ಳಿ ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೆ ಮಂಗಳವಾರ ರೋಡ್ ಶೋ ಹಾಗೂ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.
ಬಿಜೆಪಿ ಸರ್ಕಾರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡದೇ ಹಿನ್ನೆಯಡೆಯಾಗಿದ್ದು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎದ್ದಿದ್ದು ಕಾಂಗ್ರೆಸ್ ಸರಕಾರ ಬರುವುದು ಖಚಿತ ಹಣ ಇಲ್ಲದೆ ನಿಂತಿರುವ ಉಳಿದಿರುವ ಕಾಮಗಾರಿಗಳನ್ನು ಪೂರ್ಣ ಗೊಳಿಸಿ ಮತ್ತಷ್ಟು ಶಾಶ್ವತವಾದ ಅಭಿವೃದ್ಧಿ ಕಾರ್ಯವೇ ನನ್ನ ಮೂಲ ಧ್ಯೇಯವಾಗಿದೆ ಎಂದು ತಿಳಿಸಿದರು.
ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ ತುರುವನೂರು ಜನ ನಿಮ್ಮ ಮನೆ ಮಗ ರಘುಮೂರ್ತಿ ಅವರನ್ನು ಎಂದು ಕೈ ಬಿಟ್ಟಿಲ್ಲ. ಅದರಂತೆ ಪರಶುರಾಂಪುರ ಭಾಗ ಅಡಕೆ ನಾಡು ಆಗಲು ಶಾಸಕರು ಕಾರಣವಾಗಿದ್ದಾರೆ. ಪರಶುರಾಂಪುರ ಭಾಗದ ಪ್ರತಿ ಹಳ್ಳಿಯಲ್ಲಿ ನಿರೀಕ್ಷೆ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ನಮ್ಮ ಪರಶುರಾಂಪುರ ಭಾಗದಲ್ಲಿ ತುರುವನೂರು ಹೋಬಳಿಯಂತೆ ಪರಶುರಾಂಪುರ ಹೋಬಳಿ ಸಹ ಅತ್ಯಧಿಕ ಮತಗಳನ್ನು ಶಾಸಕರಿಗೆ ತಂದು ಕೊಡುವ ಕೆಲಸವನ್ನು ಪ್ರತಿಯೊಬ್ನ ಕಾರ್ಯಕರ್ತರು ಮಾಡುತ್ತೇವೆ ಎಂದು ಪಣ ತೊಟ್ಟಿದ್ದೇವೆ ಎಂದು ತಿಳಿಸಿದರು.
ಟಿ ರಘುಮೂರ್ತಿ ರವರು 2023 ಮೇ 10 ರ ವಿಧಾನಸಭೆ ಯ ಸಾರ್ವತ್ರಿಕ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದಾಸನಾಯಕನಹಟ್ಟಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡಿದರು ಈ ಸಂದರ್ಭದಲ್ಲಿ ಶಾಸಕರಿಗೆ ಅದ್ದೂರಿಯಾಗಿ ಸ್ವಾಗತಿಸಿ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಯುವ ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು ಕಾರ್ಯಕರ್ತರು ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.
ಪತಿ ಗೆಲುವಿಗೆ ಪತ್ನಿ ಸೊಸೆ ಮತಯಾಚನೆ.
ನಗರದ ವಿಠ್ಠಲ್ ನಗರದಲ್ಲಿ ಶಾಸಕ ಟಿ.ರಘುಮೂರ್ತಿಯವರ ಪತ್ನಿ ಗಾಯತ್ರಮ್ಮ, ಸೊಸೆ ಹಾಗೂ ಮಾಜಿ ಜಿಪಂ ಅಧ್ಯಕ್ಷೆ ಕೌಸಲ್ಯ ವಾರ್ಡಿನ ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯರಾದ ಕವಿತಾ ವೀರೇಶ್ , ಕವಿತಾಬೋರಯ್ಯ, ಗೀತಾಬಾಯಿ, ಸರಸ್ಪತಮ್ಮ. ಉಷಾ, ಭಾಗ್ಯಮ್ಮ, ಭಾಗ್ಯಲಕ್ಷಿö್ಮ.ಬೋರಮ್ಮ, ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತರು ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 Comments