ಚಳ್ಳಕೆರೆ ಜನಧ್ವನಿ ವಾರ್ತೆ ಏ 14
ಮನುಷ್ಯ ಬದುಕಿದ್ದಾಗ ಸ್ವಂತ ಭೂಮಿ ಮನೆ ಇಲ್ಲದಿದ್ದರೂ ಸತ್ತಾಗಲಾದರೂ ಅರಡಿ ಮೂರಡಿ ಜಾಗ ಬೇಕೇಬೇಕು. ಆದರೆ ಸ್ಮಶಾನವನ್ನು ಬಿಡದೆ ಅಕ್ರಮ ಒತ್ತವರಿಯಿಂದ ಅಂತಸ್ಕಾರಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಸ ಮುಚ್ಚಗುಂಟೆ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ 20 ವರ್ಷದ ಯುವಕನೊಬ್ಬ ಲೋಬಿಪಿ ಸಮಸ್ಯೆಯಿಂದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಗ್ರಾಮದಲ್ಲೇ ಮೃತಪಟ್ಟಿರುತ್ತಾರೆ.
ಮೃತಪಟ್ಟ ಯುವಕನ ಅಂತ್ಯ ಸಂಸ್ಕಾರ ಮಾಡಲು ಅಡ್ಡಿ ಪಡಿಸಿರುವುದರಿಂದ ಶವವನ್ನು ಮನೆ ಮುಂದೆ ಇಟ್ಟು ಕೊಂಡು ತಹಶೀಲ್ದಾರ್ ರೆಹಾನ್ ಪಾಷ ಇವರಿಗೆ ದೂರವಾಣಿ ಮೂಲಕ ಕರೆ ಮಾಡಿದ್ದಾರೆ. ತಕ್ಷಣ ಕಸಬಾ ಕಂದಾಯ ನಿರೀಕ್ಷಕ ಲಿಂಗೇಗೌಡರಿಗೆ ಗ್ರಾಮಲೆಕ್ಕಾಧಿಕಾರಿ ಪ್ರದೀಫ್ ,ಗ್ರಾಪಂ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಒತ್ತುವರಿದಾರರಿಗೆ ತಿಳುವಳಿಕೆ ನೀಡಿ ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಗ್ರಾಮಸ್ಥರಿಗೆ ಅನುವು ಮಾಡಿಕೊಟ್ಟಿದ್ದಾರೆ.
ಸ್ಮಶಾನ ಹಾಗೂ ಸಾರ್ವಜನಿಕ ಸದುಪಯೋಗಕ್ಕೆ ಮೀಸಲಿಟ್ಟ ಸರಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಂದಾಯ ನಿರೀಕ್ಷಕ ಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.
ಇದೇ ರೀತಿ ಡಿಸೆಂಬರ್ 13 ರಂದು ಮೃತಪಟ್ಟ ಸಂದರ್ಭದಲ್ಲಿಯೂ ಸಹ ಅಡ್ಡಿ ಪಡಿಸಿದ್ದ ಸಂದರ್ಭದಲ್ಲಿ ಇದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತನ ಅಂತಸAಸ್ಕಾರ ಮಾಡಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಸಂಭವಿಸಿದ್ದು ಯಾರಾದರು ಮೃತ ಪಟ್ಟರೆ ಅಧಿಕಾರಿಗಳೇ ಬಂದು ಅಂತ್ಯ ಸಂಸ್ಕಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೆ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಅಕ್ರಮ ಒತ್ತುವರಿ ತೆರವುಗೊಳಿಸಿ ಅಂತಸAಸ್ಕಾರಕ್ಕೆ ಮೀಸಲಿಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
0 Comments