80 ವರ್ಷ ಮೇಲ್ಪವರಿಗೆ ಹಾಗೂ ವಿಕಲಚೇತನರಿಗೆ ಮನೆಯಲ್ಲೆ ಮತಹಾಕಲು ಅವಕಾಶ ನೀಡಿದ್ದು ನೋಂದಣೆ ಮಾಡಿಕೊಂಡರುವ ಮನೆಯಲ್ಲಿದ್ದು ಮತದಾನಕ್ಕೆ ಸಹಕಾರ ನೀಡುವಂತೆ ಚುನಾವಣಾಧಿಕಾರಿ ಆನಂದ್

by | 29/04/23 | ಚುನಾವಣೆ-2023

ಚಳ್ಳಕೆರೆ ಜನಧ್ವನಿ ವಾರ್ತೆ ಏ29.
ಇದೇ ಮೊದಲ ಬಾರಿಗೆಚುನಾವಣೆ ಆಯೋಗ ರಾಜ್ಯದಲ್ಲಿ 80 ವರ್ಷ ಮೇಲ್ಪವರಿಗೆ ಹಾಗೂ ವಿಕಲಚೇತನರಿಗೆ ಮನೆಯಲ್ಲೆ ಮತಹಾಕಲು ಅವಕಾಶ ನೀಡಿದ್ದು ನೋಂದಣೆ ಮಾಡಿಕೊಂಡರುವ ಮನೆಯಲ್ಲಿದ್ದು ಮತದಾನಕ್ಕೆ ಸಹಕಾರ ನೀಡುವಂತೆ ಚುನಾವಣಾಧಿಕಾರಿ ಆನಂದ್ ತಿಳಿಸಿದ್ದಾರೆ.
ನಗರದ ತಾಲೂಕು ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊAಡರು.
ಈಗಾಗಲೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಹೋಗಿ 80ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರು ಮನೆಯಲ್ಲಿ ವಿಶ್ರಾಂತಿ ಹೊಂದಿರುವ 127 ಮತದಾದರು ಮನೆಯಲ್ಲಿ ಮತ ಹಾಕುತ್ತೇವೆ ಎಂದು ನೋಂದಣೆ ಮಾಡಿಕೊಂಡಿದ್ದು ಮೇ.3ರಂದು ಬೆಳಗೆ 7ರಿಂದ ಸಂಜೆ 7 ಗಂಟೆಯವರಿಗೆ ಮತ ಪೆಟ್ಟಿಗೆಯೊಂದಿಗೆ ಅಧಿಕಾರಿಗಳು ನಿಮ್ಮ ಮನಗೆ ಬರಲಿದ್ದು ಅಂದು ಮನೆಯಲ್ಲೇ ಇದ್ದು ಮನತಗಟ್ಟೆ ಅಧಿಕಾರಿಗಳೊಂದಿಗೆ ಸಹಕರಿಸುವ ಮೂಲಕ ಮತದಾರರು ಕಡ್ಡಾಯವಾಗಿ ಮನೆಯಲ್ಲಿದ್ದು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ತಿಳಿಸಿದರು.
ಬೇರೆ ಕ್ಷೇತ್ರದ ಸಿಬ್ಬಂಗಳನ್ನು 5ಮೊಬೈಲ್ ತಂಡಗಳೊಂದಿಗೆ ಮನೆಬಾಗಿಲಿಗೆ ಮೇ.3ರಂದು ಮತಪೆಟ್ಟಿಗೆಯನ್ನು ಮನೆ ಬಾಗಿಲಿಗೆ ಮತಗಟ್ಟೆಯನ್ನು ಅಗತ್ಯ ಕಾನೂನು ಸುವ್ಯವಸ್ಥೆಯಲ್ಲಿ ಗೌಪ್ಯ ಮತದಾನ ಹಾಗೂ ಮನೆಯಲ್ಲಿನ ಮತದಾನದ ಬಗ್ಗೆ ವೀಡಿಯೋ ಚಿತ್ರೀಕರಣ ಮಾಡಲಾಗುವುದು ನಿಮ್ಮ ಮನೆಬಾಗಿಲಿ ಮತಗಟ್ಟೆಯೊಂದಿಗೆ ಬಂದ ಅಧಿಕಾರಿಗಳಿಗೆ ಸಹಕರಿಸಬೇಕು ಅನಿವಾರ್ಯ ಕಾರಣಗಳಿಂದ ಮನೆಯಲ್ಲಿ ಇರಲು ಸಾಧ್ಯವಾಗದವರಿಗೆ ಮೇ.೫ರಂದು ಮತ್ತೊಂದು ಬಾರಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಚುನಾವಣೆಗೆ ನಿಯೋಜನೆಗೊಂಡ 1532 ಸಿಬ್ಬಂದಿಗಳು, 80 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರು ಸೇರಿ 127 ಹಾಗೂ 13 ಅಗತ್ಯ ಸೇವೆ ಇಲಾಖೆಯಲ್ಲಿನ 26 ಮತದಾರರು ಮತ್ತು ಸೈನ್ಯದಲ್ಲಿರುವ 56 ಮತದಾರರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದರು.
ಇನ್ನೂ ಅಗತ್ಯ ಸೇವೆ 13 ಇಲಾಖೆಯಲ್ಲಿ ಬರುವ 26 ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಮೇ.2,3,ಮತ್ತು 4 ರಂದು ತಾಲೂಕು ಕಚೇರಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ತಮ್ಮ ಇಲಾಖೆಯಿಂದ ರಜೆ ಪಡೆದುಕೊಂಡು ಮೂರು ದಿನಗಳಲ್ಲಿ ಯಾವುದಾರು ದಿನ ಬಂದು ಬೆಳಗ್ಗೆ 9ರಿಂದ ಸಂಜೆ 5ಗಂಟೆಯೊಳಗೆ ವೋಟ್ ಮಾಡಬಹುದು.ಇತ್ತ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ 56 ಮತದಾರರಿಗೆ ಈಗಾಗಲೇ ಅಂಚೆ ಮೂಲಕ ಬ್ಯಾಲೆಟ್ ಕಳಿಸಿದ್ದು, ಅವರು ತಮ್ಮ ಹಕ್ಕು ಚಲಾಯಿಸಿ ಮೇ.13ರಂದು ಮತ ಎಣಿಕೆ ಮಾಡುವ ಬೆಳಗ್ಗೆ 8ಗಂಟೆಯೊಳಗೆ ತಲುಪುವಂತೆ ಕಳಿಸಬೇಕಿದೆ ಎಂದರು.
ಇನ್ನೂ ಚುನಾವಣೆಗೆ ನಿಯೋಜನೆಗೊಂಡ ಅಕ್ಷರಸ್ಥ ಮತದಾರ ಅಧಿಕಾರಿಗಳ ಮತದಾನವೇ ಸಾಕಷ್ಟು ತಿರಸ್ಕೃತಗೊಳ್ಳುತ್ತಿವೆ. ಕಾರಣ ನಿಯಮ ಪ್ರಕಾರ ಅಂಚೆ ಮತದಾನ ಮಾಡಿರುವುದಿಲ್ಲ.ಇಂತ ತಪ್ಪುಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ನಮೂನೆ-13ಎ ಕವರಿನಲ್ಲಿ ಘೋಷಣಾ ಪತ್ರ ಹಾಕಬೇಕು ಮತ್ತು 13ಬಿ ಕವರಿನಲ್ಲಿ ಅಂಚೆ ಮತದಾನ ಹಾಕಬೇಕು. ಈ ಎರಡು ಕವರ್‌ಗಳನ್ನು 13-ಸಿನಲ್ಲಿ ಹಾಕಿದರೆ ಮಾತ್ರ ನಿಮ್ಮ ಮತ ಮನ್ಯವಾಗುವುದು ಎಂದರು.

ಹಣ ಜಪ್ತಿ

ಸಂಗ್ರಹ ಚಿತ್ರ
ಬಳ್ಳಾರಿ ಕಡೆಯಿಯಿಂದ ಹಿರಿಯೂರು ಮಾರ್ಗವಾಗಿ ಕಾರಿನಲ್ಲಿ ಅಕ್ರಮವಾಗಿ ಹಣ ಸಾಗಾಟ ಮಾಡುದ್ದಿ ಕಾರು ಹಾಗೂ ಇಬ್ಬರವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿಕಡೆಯಿಂದ ಹಿರಿಯೂರು ಮಾರ್ಗದ ರೋಜಾ ಹೋಟೆಲ್ ಡಾಬ ಬಳಿಯಿರುವ ಚೆಕ್ ಪೋಸ್ಟ್ ಎಸ್‌ಎಸ್‌ಟಿ ತಂಡದ ಅಧಿಕಾರಿ ಡಾ.ತಿಪ್ಪೇರುದ್ರ ಕಾರು ತಪಾಷಣೆ ಮಾಡಿದಾಗ 10.50 ಲಕ್ಷ ರೂ 500 ರೂ ಹಾಗೂ 200 ರೂ ಮಖಬೆಲೆಯ ನೋಟುಗಳನ್ನು ಸೊಂಟದಲ್ಲಿಟ್ಟುಕೊಂಡುರುವುದು ತಪಾಸಣೆಯ ವೇಳೆ ಪತ್ತೆಯಾಗಿದ್ದು ಆರೋಪಿಗಳಾದ ಭಾಷ್ಕರ್ ರೆಡ್ಡಿ ಹಾಗೂ ಶಿವಶಂಕರ ಮೂರ್ತಿ ಎಂಬುವುರನ್ನು ವಶಕ್ಕೆ ಪಡೆದು ಪ್ರಕರಣದಾಖಲಿಸಾಗಿದೆ ಒಂದು ವಾರದೊಗಳೆಗೆ ಜಪ್ತಿ ಮಾಡಿದ ಹಣಕ್ಕೆ ಸೂಕ್ತ ದಾಖಲೆ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಆನಂದ್ ತಿಳಿಸಿದರು ತಹಸೀಲ್ದಾರ್ ರೇಹಾನಾ ಪಾಷಾ,ಚುನಾವಣೆ ಶಾಖೆಯ ಶ್ರೀಧರ್,ಭಾಷಾ ಇದ್ದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page