ಚಳ್ಳಕೆರೆ ಜನಧ್ವನಿ ವಾರ್ತೆ ಮಾ.9


ಶ್ರೀಗುರುಹಟ್ಟಿ ತಿಪ್ಪೇಶನ ಜಾತ್ರೆ ಪ್ರಾರಂಭವಾಗಿದ್ದು ಮಾ೧೦ ಮಧ್ಯಾಹ್ನ ೩ ಗಂಟೆಗೆ ಸರಿಯಾಗಿ ದೊಡ್ಡ ರಥೋತ್ಸವ ನಡೆಯಲಿದೆ, ರಾಜ್ಯದಮೂಲೆ ಮೂಲೆಯಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ರಥ ಎಳೆಯಲಿದ್ದಾರೆ.
ಜಾತ್ರೆಗೆ ಬರುವ ಭಕ್ತರಿಗೆ ಸಾರಿಗೆ, ಕುಡಿಯುವ ನೀರು, ತುರ್ತು ಚಿಕಿತ್ಸೆ ಸೇರಿದಂತೆ ಎಲ್ಲಾ ಮೂಲ ಭೂತ ಸೌಲಭ್ಯಗಳನ್ನು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿಲಿದ್ದು ಕಾನೂನು ಸುವ್ಯವಸ್ಥೆಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.

ಶ್ರೀಗುರು ತಿಪ್ಪೇರುದ್ರಸ್ವಾಮಿಯವರ ಕಾಯಕ ಶೇಷ್ಠತೆಯನ್ನು ಸಾರಿದ ನಾಯಕನಹಟ್ಟಿ ಪುಣ್ಯಕ್ಷೇತ್ರವು ಭಾವೈಕ್ಯತೆ ಸಂಗವಾಗಿ ಭಕ್ತಿ ಭಾವದ ಕೇಂದ್ರವಾಗಿದೆ. ಇಂಥಹ ಚೈತನ್ಯ ನೀಡುವ ಪವಿತ್ರ ತಾಣವೆ ‘‘ಹೊರಮಠ’’.
ನಾಯಕನಹಟ್ಟಿ ಪಟ್ಟಣದ ಪಶ್ಚಿಮ ದಿಕ್ಕಿಗಿರುವ ಹಾಗೂ ಊರ ಹೊರಗಿರುವ ಮಠಕ್ಕೆ ಹೊರಮಠವೆಂದು ಕರೆಯುವ ವಾಡಿಕೆಯಿದೆ. ಶ್ರೀಗುರು ತಿಪ್ಪೇರುದ್ರಸ್ವಾಮಿಗಳೇ ಕಟ್ಟಿಸಿದ ಚಿಕ್ಕಕೆರೆಗೆ ಹೊಂದಿಕೊAಡಿರುವAತೆ ಈ ಹೊರಮಠವಿದೆ. ಇಲ್ಲಿ ಶ್ರೀಗಳು ತಮ್ಮ ಅಂತಿಮ ಯಾತ್ರೆಯನ್ನು ಕೈಗೊಂಡ ಜೀವೈಕ್ಯ ಸ್ಥಳವಾಗಿದೆ. ಸಮಾಧಿಯ ಮೇಲೆ ನಿರ್ಮಿತವಾದ ದೇವಾಲಯದ ಮೇಲೆ ಗೋಲಾಕಾರದ ಇಂಡೋ–ಇಸ್ಲಾಮಿಕ್ ಶೈಲಿಯ ಗೋಳಗುಮ್ಮಟ, ಹಿಂದೂ ಮುಸಲ್ಮಾನರ ಭಾವೈಕೆತೆಯ ಸಂಕೇತವಾಗಿದೆ. ಈ ಗುಮ್ಮಟವನ್ನನು ೧೮ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹೊರಮಠ ದೇವಾಲಯವನ್ನು ಕ್ರಿ.ಶ.೧೬೮೯ರಿಂದ ೧೮೨೧ರ ಮಧ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ. ದೇವಾಲಯವನ್ನು ಚಿತ್ರದುರ್ಗವನ್ನು ಆಳಿದ ಧರ್ಮಾಭಿಮಾನಿ ಬಿಚ್ಚುಗತ್ತಿ ಭರಮಣ್ಣ ನಾಯಕನು ನಿರ್ಮಿಸಿದ ಎಂದು ಇತಿಹಾಸ ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಾಗೇ ಇನ್ನು ಕೇಲ ಮೌಖಿಕ ಪರಂಪರೆಯ ಐತಿಹ್ಯಗಳ ಪ್ರಕಾರ ಹೈದರಾಲಿ ಈ ದೇವಾಲಯವನ್ನು ಜಿರ್ಣೋದ್ದಾರ ಮಾಡಿದನೆಂದು ತಿಳಿದು ಬರುತ್ತದೆ.
ಹೊರಮಠದ ವಿಶೇಷತೆ
ಹೊರಮಠದಲ್ಲಿ ಅನೇಕ ಪ್ರಕೃತಿ ವಿಸ್ಮಯವಾದ ಹಾಗೂ ಪ್ರಕೃತಿ ನಿಯಮಕ್ಕೆ ಸವಾಲಾಗುವ ಸಂಗತಿಗಳು ಕಂಡು ಬರುತ್ತವೆ. ಕೇಲವು ವರ್ಷಗಳ ಹಿಂದೆ ದೇವಾಲಯದ ಮುಂಭಾಗದಲ್ಲಿ ಸುಂದರವಾದ ಹೂದೋಟವಿತ್ತು. ಇಲ್ಲಿ ಎಲ್ಲಾ ಜಾತಿಯ ಹೂವಿನ ಗಿಡಗಳು,ಹಣ್ಣಿನ ಗಿಡಗಳು ಇದ್ದವು. ರುದ್ರಾಕ್ಷಿ, ಹತ್ತಿ, ಅಶ್ವತ್ತ, ಆಲ, ಬೇವು, ಬನ್ನಿ ವೃಕ್ಷಗಳು ದೇವಾಲಯದ ಆವರಣದಲ್ಲಿ ವನ ಮಹೋತ್ಸವವನ್ನು ನಿರ್ಮಿಸಿವೆ. ವಿಶೇಷವಾಗಿ ಒಂದೇ ತೆಂಗಿನ ಬುಡದಲ್ಲಿ ಐದು ತೆಂಗಿನ ಮರಗಳು ಬೆಳೆದದ್ದು, ಪಂಚಾಗಣಾಧೀಶ್ವರರನ್ನು ಕುರಿತು ಹೇಳುತ್ತದೆ ಎಂಬ ನಂಬಿಕೆಯ ಜೊತೆಗೆ ವಿಸ್ಮಯವನ್ನು ಉಂಟು ಮಾಡುತ್ತದೆ. ದೇವಾಯಲದ ಆವರಣದಲ್ಲಿ ಕಲ್ಲಿನಿಂದ ನಿರ್ಮಿಸಿದ ವಿಶಾಲವಾದ ಕಲ್ಯಾಣಿ ಇದೆ. ಇದರಲ್ಲಿ ನೈಸರ್ಗಿಕವಾಗಿ ನೀರು ಹರಿದು ಬರುತ್ತಿತ್ತು. ಇದೇ ನೀರನ್ನು ದೇವಾಲಯದ ನಿತ್ಯ ಪೂಜೆಗೆ ಬಳಸಲಾಗುತ್ತಿತ್ತು. ಈ ನೀರು ಬರೀ ನೀರಲ್ಲ ಅದು ಪನ್ನಿರು ಎಂಬುದು ಭಕ್ತರ ಬಲವಾದ ನಂಬಿಕೆಯಾಗಿತ್ತು. ಆದರೆ ಬಗಾಲದ ಹಿನ್ನೆಲೆಯಲ್ಲಿ ಇಂದು ಕಣ್ಮರೆಯಾಗಿದೆ.
ಬುಡಕಟ್ಟು ಆಚರಣೆಯ ನೆಲೆವೀಡು
ಹೊರಮಠ ದೇವಾಲಯದಲ್ಲಿ ನಡೆಯುವ ಎಲ್ಲಾ ಆಚರಣೆಗಳು ಬುಡಕಟ್ಟು ಸಂಸ್ಕೃತಿಯ ಹಿನ್ನೆಲೆಯನ್ನು ಹೊಂದಿವೆ. ನೆಲಮೂಲ ಪರಂಪರೆಯ ಪ್ರತೀಕದಂತೆ ಕಂಡು ಬರುತ್ತದೆ. ಈ ದೇವಾಲಯಕ್ಕೆ ಬರುವ ಭಕ್ತರು, ಅವರು ನಡೆಸುವ ಆಚರಣೆಗಳು ಸಂಪೂರ್ಣವಾಗಿ ಬುಡಕಟ್ಟು ಸಂಸ್ಕೃತಿಗಳ ಜೀವಂತಿಕೆ ಸಾಕ್ಷಿಯಾಗಿವೆ. ಗುಗ್ಗರಿಹಬ್ಬ, ಮೊಸರುಗಡಿಗೆ ಪೂಜೆ, ಪರುವು, ಸಸ್ಯಹಾರ ಮತ್ತು ಮಾಂಸಹಾರ ಎಂಬ ಬೇಧವಿಲ್ಲದೆ ಸಮಕಾಲೀನ ಆಹಾರ ಪದ್ಧತಿಯನ್ನು ಬಿಂಬಿಸುತ್ತದೆ.
ಸಾಧು ಸಂತರ ಮೆಚ್ಚಿನ ತಾಣ
ನಾಯಕನಹಟ್ಟಿ ಹೊರಮಠ ದೇವಾಲಯವು ಸಾಧುಸಂತರ ಮೆಚ್ಚನ ತಾಣವಾಗಿದೆ. ಇಲ್ಲಿ ನಡೆಯುವ ವಾರ್ಷಿಕ ರತೋತ್ಸವದ ಹಿಂದಿನ ದಿನದ ರಾತ್ರಿ ದೇವಾಲಯದ ಆವರಣದಲ್ಲಿ ದೇಶದ ನಾನಾ ಭಾಗಗಳಿಂದ ವಿವಿಧ ರೀತಿಯ ಸಾಧುಸಂತರು ಬಂದು ಸಂಗಮವಾಗುತ್ತಾರೆ. ವಿವಿಧ ಕಡೆಗಳಿಂದ ಬರುವ ಸಾಧುಗಳು ದೇಶದ ಆದ್ಯಾತ್ಮಿಕ ಚಿಂತನೆಯ ಸ್ಥಿತಿಗತಿಯನ್ನು ಕುರಿತು ಚರ್ಚೆ ನಡೆಸು್ತತಾರೆ. ಮದ್ಯಮಾಂಸ, ಭಂಗಿ ಸೇದುವ ಮೂಲಕ ಹಾಡು ಭಜನೆಗಳ ಮೂಲಕ ರಾತ್ರಿ ಪೂರ್ತಿ ಕಳೆಯುತ್ತಾರೆ. ಬೇಳಗಿನ ಜಾವ ಯಾರ ಕೈಗೂ ಸಿಗದಂತೆ ತಮ್ಮತಮ್ಮ ಸ್ವಸ್ಥಾನಗಳಿಗೆ ಮರಳುತ್ತಾರೆ. ಹಾಗೂ ಈ ಸಾಧುಗಳು ಯಾರ ಬಳಿಯು ಭಿಕ್ಷೆಯ್ನನು ಬೇಡದಿರುವುದು ವಿಶೇಷವಾಗಿದೆ.
ಜಿರ್ಣೋದ್ದಾರಗೊಂಡ ದೇವಾಲಯ

ದೇವಾಲಯವು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆಗೊಂಡ ನಂತರ ದೇವಾಯಲದಲ್ಲಿ ವಿನೂತವಾದ ಬದಲಾವಣೆಗಳು ಕಂಡು ಬಂದವು. ಕರ್ನಾಟಕ ರಾಜ್ಯದಲ್ಲಿ ‘ಎ’ ಗ್ರೇಡ್ ದೇವಾಲಯ ಎಂಬ ಮಾನ್ಯತೆ ಪಡೆದ ಈ ದೇವಾಲಯವು ವಾರ್ಷಿಕವಾಗಿ ಮೂರು ಕೋಟಿಗಳಿಗಿಂತ ಹೆಚ್ಚು ಆದಾಯ ತಂದು ಕೊಡುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಹೊರಮಠವು ಹಲವು ರೀತಿಯಲ್ಲಿ ಬದಲಾಣೆಯನ್ನು ಹೊಂದಿದೆ.
ಹೊರಮಠದ ದೇವಾಲಯದ ಜೀರ್ಣೋದ್ದಾರ ಕಾರ್ಯವು ಸುಮಾರು ೩ಕೋಟಿ ರೂಗಳಲ್ಲಿ ನಡೆದಿದೆ. ಕಾಂಪೌAಡ್, ಸಾಲುಗೋಪುರ, ಕಲ್ಯಾಣಿ, ಸಿಸಿರಸ್ತೆ, ದೇವಾಲಯದ ಆವರಣದಲ್ಲಿ ಕಲ್ಲುಹಾಸಿಗೆ, ನೂತನವಾಗಿ ನಿರ್ಮಿಸದ ದ್ವಾರಬಾಗಿಲು, ಗೋಪುರದ ಮೇಲಿರುವ ಉಬ್ಬು ಶಿಲ್ಪಗಳು, ಕಲ್ಯಾಣಯಲ್ಲಿರುವ ಕಾಯಕಯೋಗಿಯ ಪ್ರತಿಮೆ, ದೇವಾಲಯಕ್ಕೆ ನೀರಿನ ಸಂಪರ್ಕ, ಮೂಲಭೂತ ಸೌಲಭ್ಯಗಳ ಪೂರೈಸುವಿಕೆ, ಹಾಗೂ ಯಾತ್ರಿ ನಿವಾಸ ಸೇರಿದಂತೆ ಹಲವು ಪ್ರಗತಿ ಪರ ಕಾರ್ಯಗಳು ನಡೆದು ದೇವಾಲಯ ಕಂಗೊಳಿಸುತ್ತಿದೆ.
ಇಂತಹ ಹಿನ್ನೆಲೆಯಿರುವ ದೇವಾಲಯದ ಆವರಣದಲ್ಲಿ ದೇವರ ದರ್ಶನ ಪಡೆದು ಒಮ್ಮೆ ಕುಳಿತರೆ ಮನಸ್ಸಿಗೆ ಸಾರ್ಥಕವಾದ ಭಾವ ಕಂಡುಬರುತ್ತದೆ. ಅದೇ ಈ ಪವಿತ್ರದ ಕ್ಷೇತ್ರದ ಮಹಿಮೆಯಾಗಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page