ಚಳ್ಳಕೆರೆ ಜನಧ್ವನಿ ವಾರ್ತೆ ಫೆ.17 ಚಳ್ಳಕೆರೆ ನಗರವೂ ಸೇರಿದಂತೆ ತಾಲೂಕಿನಾದ್ಯಂತ ಶನಿವಾರ ಬೆಳಗ್ಗೆಯಿಂದಲೇ ಶ್ರದ್ಧಾ ಭಕ್ತಿಯ ಮಹಾಶಿವರಾತ್ರಿ ಆಚರಿಸಲಾಯಿತು.
ಬೆಳಗಿನಿಂದಲೇ ಭಕ್ತರು .ಜನಪ್ರತಿನಿಧಿಗಳು.ವಿವಿಧ ಪಕ್ಷದ ವಿಧಾನ ಸಭಾ ಚುನಾವಣೆಯ ಆಕಾಂಕ್ಷಿಗಳು ಕ್ಷೇತ್ರವ್ಯಾಪ್ತಿಯ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಗರದ ಸೂಜಿನಲ್ಲೇಶ್ವರ. ಈಶ್ವರ.ತಿಮ್ಮಪ್ಪ. ಸಾಯಿಬಾಬ.ನರಹರೇಶ್ವರ.ಮೋದೂರು ಆಂಜನೇಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ. ಜೆಡಿಎಸ್ ಎಂ.ರವೀಶ್ ಕುಮಾರ್. ಬಿಜೆಪಿಯ ಅನಿಲ್ ಕುಮಾರ್.ಜಯರಾಂ.ಜಯಪಾಲಯ್ಯ. ಪಕ್ಷೇತರ ಕೆ.ಟಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ಪಕ್ಷದ ಆಕಾಂಕ್ಷಗಳ ಜತೆ ಕರ್ತವ್ಯ ನಿರ್ವಹಿಸಿ ಸ್ಥಳ ಕಾಯ್ದಿರಿದ ತಹಶೀಲ್ದಾರ್ ಎನ್. ರಘುಮೂರ್ತಿ ಸಹ ಅಭಿಮಾನಿಗಳೊಂದಿಗೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೋಜೆ ಸಲ್ಲಿಸುತ್ತಿರುವ ದೃಶ್ಯ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಗಳಲ್ಲಿ ತಳಮಳವನ್ನುಂಟು ಮಾಡಿದೆ.
ವಿಧಾನಸಭಾ ಸ್ಪರ್ಧೆಯ ಆಕಾಂಕ್ಷಿಗಳು ಮಂದಿರಗಳಿಗೆ ಬಂದು ದರ್ಶನಕ್ಕೆ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ದೊಡ್ಡೇರಿ ಕನ್ನೇಶ್ವರ ಆಶ್ರಮದಲ್ಲಿ ಹೋಮ.ಹವನ.ಭಜನೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು.ಶ್ರೀಮಲ್ಲಿಕಾರ್ಜುನ.ಮಲ್ಲಪ್ಪಸ್ವಾಮಿ.ಅಪ್ಪಾಜಿ ಎಂಬ ನಾಮದೇಯದೊಂದಿಗೆ ಕರೆಯುವ ಸ್ವಾಮಿ ಶ್ರೀ ಈಶ್ವರನವೇಷದಲ್ಲಿ ಹೋಮ ಪೂಜೆಯಲ್ಲಿ ಕಾಣಿಸಿಕೊಂಡಿದ್ದು ಭಕ್ತರು ಅಪ್ಪ.ಅಪ್ಪಾಜಿ .ಓಂನಮ ಶಿವಾಯ ಎಂದು ಮುಗಿಲು ಮುಟ್ಟುವಂತೆ ಶ್ರದ್ದೆ.ಭಕ್ತಿಯಿಂದ ಕೂಗಿ ಕರೆಯುವ ದೃಶ್ಯ ಕಂಡು ಬಂತು.
ಶಿವರಾತ್ರಿ ಜಾಗರಣೆಗೆ ಮಂದಿರಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಭಕ್ತರು ಹೂ-ಕಾಯಿ ಕರ್ಪೂರ ಅರ್ಪಿಸಿ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸೇವಿಸಿದರು.
ಶಿವಮಂದಿರಗಳಲ್ಲಿ ಬೆಳಗಿನ ಜಾವದಿಂದಲೇ ರುದ್ರಾಭಿಷೇಕ, ಆರತಿ ಬೆಳಗುವುದು, ವಿವಿಧ ರೀತಿಯ ಹೂಗಳಿಂದ ಸಿಂಗಾರ ಮಾಡಿರುವುದು ಕಂಡುಬಂತು. ಶಿವರಾತ್ರಿ ನಂಬಿಕೆ ಇರಿಸಿದ ಜನ ಇಡೀ ದಿನ ಉಪವಾಸ ವ್ರತ ಆಚರಣೆ ಮಾಡಿ ಶಿವಧ್ಯಾನ ದಲ್ಲಿ ತೊಡಗಿದ್ದಾರೆ. ಸೂರ್ಯಾಸ್ತದವರೆಗೂ ಉಪವಾಸ ಆಚರಣೆ ಮಾಡಿ ಸಂಜೆ ಮತ್ತೆ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಹಣ್ಣು ಹಂಪಲು ಸೇವಿಸಿ ಉಪವಾಸ ಕೊನೆಗೊಳಿಸುತ್ತಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments