ಚಳ್ಳಕೆರೆ ಜನಧ್ವನಿ ವಾರ್ತೆ ಫೆ.15. ರೈತರ ಪಂಪ್ ಸೆಟ್ಗಳಿಗೆ ಹಗಲು ವೇಳೆ ನಿರಂತರವಾಗಿ 7 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ವಿದ್ಯುತ್ ಸರಬರಾಜು ಉಪಕೇಂದ್ರದ ಮುಂದೆ ಬೆಳಂ ಬೆಳಗ್ಗೆ ರೈತರಿ ಪ್ರತಿಭಟನೆ ನಡೆಸಿದರು.
ರೈತರ ಪಂಪ್ಸೆಟ್ಗಳಿಗೆ ನಿತ್ಯ 7 ಗಂಟೆ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಸರ್ಕಾರದ ಆದೇಶವಿದೆ. ಕಾಡು ಪ್ರಾಣಿಗಳು ಮತ್ತು ವಿಷ ಜಂತುಗಳ ಹಾವಳಿ ಹೆಚ್ಚಿರುವ ಕಾರಣ ರಾತ್ರಿ ವೇಳೆ ಬದಲು ಹಗಲಿನ ವೇಳೆ ವಿದ್ಯುತ್ ನೀಡಬೇಕು. ವಿದ್ಯುತ್ ಬಿಡುಗಡೆಯಲ್ಲೂ ಕರ್ನಾಟಕ ವಿದ್ಯುತ್ ಸರಬರಾಜದ ಸಿಬ್ಬಂದಿ ತಾರತಮ್ಯ ನೀತಿ ಅನುಸರಿಸುತ್ತಿದ್ದು, ರೈತರು ಸಿಬ್ಬಂದಿಗೆ ಅಥವಾ ಲೈನ್ಮ್ಯಾನ್ಗಳಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಅಕಸ್ಮಾತ್ ವಿದ್ಯುತ್ ಅವಘಡಗಳು ಸಂಭವಿಸಿದರೆ ರೈತರು ಯಾರಿಗೆ ಹೇಳಬೇಕು ಎಂದು ಪ್ರತಿಭಟನಕಾರರು ಅಕ್ರೋಶವ್ಯಕ್ತಪಡಿಸಿದರು ಪ್ರತಿಭಟನೆಯಲ್ಲಿ ಈಶ್ವರಪ್ಪ.ನರಸಿಂಹಮೂರ್ತಿ.ರಾಜ.ಕುಮಾರ.ವೆಂಕಟೇಶ್ ರೆಡ್ಡಿ.ಓಂಕಾರಿ.ಲಕ್ಷ್ಮಿಪತಿ.ಕೆಂಚಪ್ಪ.ವಿಶ್ವ.ಸಿದ್ದಪ್ಪ ಇತರರಿದ್ದು ಸ್ಥಳಕ್ಕೆ ಚಳ್ಳಕೆರೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದರು
0 Comments