ಚಳ್ಳಕೆರೆ ಮೇ 28 ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸದೇ ಇರುವುದು ಬೆಳೆಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮಪಂಚಾಯಿತಿ ಗಳಲ್ಲಿ ಸೆ.23 ರಿಂದ ಇಲ್ಲಿಯವರಗೆ ಮೃತ ಪಟ್ಟ ಗ್ರಾಪಂ ಸದಸ್ಯರ ಚಿನಾವಣೆ ಸುಮಾರು 10 ತಿಂಗಳು ಕಳೆದರೂ ಚುನಾವಣಾ ಆಯೋಗ ಚುನಾವಣೆ ನಡೆಸಲು ಮುಂದಾಗದೆ ಇರುವುದು ಜನರಲ್ಲಿ ಅಸಮದಾನಕ್ಕೆ ಕಾರಣವಾಗಿದೆ. ಎಂ ಎಲ್ ಎ ಚುನಾವಣೆ. ಎಂ.ಪಿ.ಎಂ.ಎಲ್.ಸಿ. ನಿಗಮಮಂಡಳಿ. ನಾಮನಿರ್ದೇಶನ ಸದಸದಸ್ಯರ ಆಯ್ಕೆ ಸಾಲು ಸಾಲು ಚುನಾವಣೆಗಳು ನಡೆದರೂ ಸಹ ಸ್ಥಳೀಯ ಸಂಸ್ಥೆಗಳಾದ ನಗರಸಭೆ.ಪಟ್ಟಣ ಪಂಚಾಯಿತಿ ಗಳಿಗೆ ಅಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಘೋಷಣೆ ಮಾಡದೆ .ಜಿಲ್ಲಾಪಂಚಾಯತ್ .ತಾಲೂಕು ಪಂಚಾಯತ್ ಸದಸ್ಯರ ಅವದಿ ಮುಗಿದು ಸುಮಾರು ಎರಡು ವರ್ಚಗಳು ಕಳೆದರೂ ಚುನಾವಣೆ ಘೋಷಣೆ ಮಾಡದೇ ಇರುವ ಬೆನ್ನಲ್ಲೇ
ಇತ್ತ ಸದಸ್ಯರಿಲ್ಲದೆ ಗ್ರಾಮಗಳ ಅಭಿವೃದ್ಧಿಗೆ ಕುಂಠಿತವಾಗಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ ಇತ್ತ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ ಕನಸು ನನಸಾಗಬೇಕಾದರೆ ಗ್ರಾಮಗಳು ಅಭಿವೃದ್ಧಿಯಾದ ಮಾತ್ರ ಸಾಧ್ಯ ಎಂದು ಜನಪ್ರತಿನಿಧಿಗಳು ಸರಕಾತ ನೀತಿ ಪಾಠ ಹೇಳುತ್ತಿದೆ ಆದರೆ ಸ್ಥಳೀಯ ಸಂಸ್ಥೆಗಳ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಸಲು ವಿಳಂಭ ದೋರಣೆ ಮಾಡುತ್ತಿದೆ ಈಗಲಾದರೂ ತೆರವಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವರೇ ಕಾದು ನೋಡಬೇಕಿದೆ.
0 Comments