ನಗರಸಭೆ ಕಚೇರಿಯ ಹೈಟೆಕ್ ಕಟ್ಟಡ ಕಾಮಗಾರು ಕುಂಠಿತ
ಚಳ್ಳಕೆರೆ ಜನಧ್ವನಿ ವಾರ್ತೆ ಮೇ 6 ಹಲವು ಸ್ಥಳಗಳಲ್ಲಿ ಸರ್ಕಾರಿ ಜಾಗವಿದ್ದರೂ ಅವುಗಳನ್ನು ಸಂರಕ್ಷಿಸಿ ಸರ್ಕಾರಿ ಇಲಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸದೆ, ಬಾಡಿಗೆ ಕಟ್ಟಡದಲ್ಲೇ ಸರ್ಕಾರದ ವಿವಿಧ ಇಲಾಖೆ ಕಚೇರಿಗಳು ಕಾರ್ಯನಿರ್ವ ಹಿಸಿತ್ತಿದರೆ ಇತ್ತ ನಗರಸಭೆ ಕಚೇರಿ ಕಟ್ಟಡ ನಿರ್ಮಿಸುವ ಹಂತದಲ್ಲೇ ಶಿಥಿವಾಗಲು ಪ್ರಾರಂಭಿಸಲಾಗಿದ್ದ ಇದರಿಂದ ಸರ್ಕಾರ ಬೊಬ್ಬಸಕ್ಕೆ ನಷ್ಟವನ್ನುಂಟು ಮಾಡುವಂತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರಸಭೆಯ ಹಳೆಯ ಜಚೇರಿ ಕಟ್ಟಡ ನೆಲಸಮ
ಹೌದು ಇದು ಚಳ್ಳಕೆರೆ ತಾಲೂಕು ಕೇಂದ್ರವನ್ನು ವಿಶ್ವದ ಭೂಪಟದಲ್ಲಿ ನೋಡುವಂತಾಗಿದ್ದು ದಿನಿದಿಂದ ದನಿಕ್ಕೆ ನಗರ ವೇಗವಾಗಿ ಬೆಳೆದು ವಿಸ್ತರಗೊಂಡರೂ ಸಹ ನಗರೆದ ಆಡಳೀತ ಕೇಂದ್ರ ಕಚೇರಿಯ ಕಟ್ಟವನ್ನು ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸ ಹೈಟೆಕ್ ಕಟ್ಟಡ ನಿರ್ಮಾಣಕ್ಕಾಗಿ 2018-19ರಲ್ಲಿ ನಗರೋತ್ಥಾನ ಯೋಜನೆಯ4.90 ಕೋಟಿ ರೂ. ವೆಚ್ಚದಲ್ಲಿ ನಗರಸಭೆಗೆ ಕಟ್ಟಡ ನಿರ್ಮಾಣ ಮಾಡಲು ಕಾಮಗಾರಿ ಪ್ರಾರಂಭಿಸಿದ್ದು ಅನುದಾನ ಕೊರತೆಯಿಂದ ಸುಮಾರು 6 ವರ್ಷಗಳು ಕಳೆದರೂ ಕಟ್ಟಡ ಹರೆಬೆರೆಯಾಗಿ ನಿಂತಿದ್ದು ನೆಲ ಮಹಡಿಗೆಂದು ತೆಗೆದು ಗುಂಡಿಯಲ್ಲಿ ಮಳೆ ಬಂದರೆ ಹೊಂಡದಂತಗಾಗಿ ನೀರು ನಿಲ್ಲುವಂತಾಗುತ್ತದೆ.
ನಗರಕ್ಕೆ ಪ್ರವೇಶ ಮಾಡಿದ ತಕ್ಷಣ ವೇಗವಾಗಿ ,ವಿಶಾಸ ರಸ್ತೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ,ಮಿನಿವಿಧಾನ ಸೌಧ, ಸುಂದರವಾಕಟ್ಟ ಸರಕಾರಿ ಕಚೇರಿ ಕಟ್ಟಡಗಳು ಕಣ್ಣಿಗೆ ಕಾಣುತ್ತವೆ ಅದೇ ನಗರದ ಹೊಳಗೆ ಪ್ರವೇಶ ಮಾಡಿದರೆ ಯಾವುದೇ ಹಳ್ಳಿ ಗಾಡಿಗೆ ಹೋದಂತೆ ಬಾಷವಾಗುತ್ತಿದೆ ಕಿತ್ತುಹೋದ ರಸ್ತೆ, ಹೂಳು ತುಂಬಿದ ಚರಂಡಿಗಳು, ಪಾಳು ಬಿದ್ದು ಉದ್ಯಾಹನ ವನಗಳು, ಈಗೆ ಅನೈರ್ಮಲ್ಯದಿಂದ ತಾಂಡವಾಗುತ್ತಿದೆ.
ಕಲಾವಿದರ ಪ್ರೋತ್ಸಹಕ್ಕಾಗಿ ಶಿಥಿಲವಾದ ಹಳೆಯ ಬಯಲು ರಂಗಮಂದಿರ ತೆರವುಗೊಳಿಸಿ ಸುಂದರ ವಿನ್ಯಾಸದೊಂದಿಗೆ ಹೈಟೆಕ್ ಬಯುಲು ರಂಗಮಂದಿರ ಕಟ್ಟಡ ನಿರ್ಮಾಣ.
ನಗರಸಭೆಗೆ ಸಾಕಷ್ಟು ತೆರಿಗೆ ಬಂದರೂ ಸಹ ಸ್ವಂತ ಕಟ್ಟಡದ ಭಾಗ್ಯವಿಲ್ಲದೆ ಕಲಾ ವಿದರಿಗೆಂದು ನಿರ್ಮಿಸಿದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ರಂಗ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶಿಥಿಲವಾದ ಬಯಲು ರಂಗಮಂದಿರವನ್ನು ತೆರವುಗೊಳಿಸಿ ಹೈಟೆಕ್ ಬಯಲು ರಂಗಮಂದಿರವನ್ನು ನಿರ್ಮಾಣ ಮಾಡಲಾಗಿತ್ತು.
ಈ ಬಯಲು ರಂಗಮಂದಿರಕಟ್ಟಡದಲ್ಲಿ ಸುಮಾರು 6 ವರ್ಷಗಳಿಂದ ನಗರಸಭೆ ಕಚೇರಿ ಆಡಳೀತ ನಡೆಸುವುದರಿಂದ ಕಲಾವಿಧರು ಬೇರೆ ಕಡೆ ಸಭೆ ಸಮಾರಂಭಗಳನ್ನು ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಚಳ್ಳಕೆರೆ ನಗರದಲ್ಲಿ 31 ವಾರ್ಡ್ಗಳ ಸುಮಾರು 80 ಸಾವಿರ ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಪ್ರದೇಶದ ನಿರ್ವಹಣೆಯ ಬಹುದೊಡ್ಡ ಜವಾಬ್ದಾರಿ ನಗರಸಭೆ ಆದರೆ, ಕಾರ್ಯಭಾರ ಮಾಡಲು ಸ್ವಂತಕ್ಕೊಂದು ಕಟ್ಟಡ ಇಲ್ಲದೆ ಇರುವುದು ಇನ್ನು ನಗರದ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದು ಪ್ರಜ್ಙಾವಂತರ ಪ್ರಶ್ನೆಯಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ನಗರಸಭೆ ಕಟ್ಟಡ ಕಾಮಗಾರಿಗೆ ಪೂರ್ಣಗೊಳಿಸಿ ಕಲಾವಿಧರಿಗೆ ರಂಗಮಂದಿರ ಬಿಟ್ಟುಕೊಡುವರೇ ಕಾದು ನೋಡಬೇಕಿದೆ.
0 Comments