ಗೋಪನಹಳ್ಳಿ ಗ್ರಾಮದ ಗೌರಿದೇವಿ ಹಬ್ಬದ ಪ್ರಯುಕ್ತ ಕ್ಯಾತಗಾನಹಳ್ಳಿ‌ ಕಲಾವಿದರಿಂದ ಕೋಲಾಟ ಪ್ರದರ್ಶನ.

by | 30/11/23 | ಸುದ್ದಿ


ಚಳ್ಳಕೆರೆ ನ.30.ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗೌರಿಹಬ್ಬದ ಅಂಗವಾಗಿ ಜಾನಪದ ಕಲೆ ಕೋಲಾಟ ಹಮ್ಮಿಕೊಳ್ಳಲಾಗಿತ್ತು.
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದೇವತೆ ಶ್ರೀ ಮಾರಿಕಾಂಬಾ ದೇವಾಸ್ಥಾನದಲ್ಲಿ ಶ್ರೀ ಗೌರಿದೇವಿ ಪ್ರತಿಷ್ಠಾಪನೆ ಮಾಡಿದ್ದು ಬುಧವಾರ ರಾತ್ರಿ ಭಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗುರುವಾರ ರಾತ್ರಿ ಕ್ಯಾತಗಾನಹಳ್ಳಿ ಗ್ರಾಮದ ಸುಮಾರು 20ಯುವಕ ತಂಡ ಕೋಲಾಟದಲ್ಲಿ ತೊಡಗಿದ್ದು ಗ್ರಾಮಸ್ಥರು ಕೋಕಾಟವನ್ನು ಕಣ್ಣುತುಂಬಿಸಿಕೊಂಡರು.
ಕೋಲಾಟದ ಮುಖಂಡ ಕ್ಯಾತಗಾನಹಳ್ಳಿ ಗ್ರಾಮದ ಈರಣ್ಣ ಮಾತನಾಡಿ ಹುಣ್ಣಿಮೆಯ ಬೆಳದಿಂಗಳು. ಸುಗ್ಗಿ ಕಾಲ.ಹಬ್ಬ.ಜಾತ್ರೆ. ಉತ್ಸವಗಳಲ್ಲಿ ಕೋಲಾಟಗಳು ಆಕರ್ಷಣೀಯವಾಗಿರುತ್ತಿದ್ದವು ಇತ್ತೀಚಿನ ದಿನಗಳಲ್ಲಿ ಕೋಲಾಟ ಕಣ್ಮರೆಯಾಗಿದ್ದು ಕೆಲವೇ ಗ್ರಾಮಗಳಲ್ಲಿ ಇಂದಿಗೂ ಕೋಲಾಟವನ್ನು ಮುಂದುವರೆಸಿಕೊಂಡು ಬಂದುದೆ., , ಸೊಗಸಾದ ಹಾಡುಗಳನ್ನು ಹಾಡುತ್ತಾ ಕೋಲೊಯ್ಯವ ಆಟಗಾರರು ಕೋಲು ಹಿಡಿದು ಚಕ್ರಾಕಾರವಾಗಿ ನಿಂತು ಹಾಡಿಗೆ ಗೆಜ್ಜೆ ಕಟ್ಟಿ ಕಾಲಿನ ಹೆಜ್ಜೆಗಳನ್ನು ಹಾಕುತ್ತಾ ಕೋಲು ಹೊಡೆಯ್ಯುತ್ತಾ ಕುಣಿಯುತ್ತಾರೆ .


ಕೋಲುಗಳನ್ನು ಕುಟ್ಟುತ್ತಾ ಪದಗಳನ್ನು ಹಾಡುತ್ತಾ ಗುಂಪು ಗುಂಪಾಗಿ ಕೋಲಾಟವಾಡುತ್ತಾರೆ. ಈ ಕೋಲು ಪದ್ಯಗಳ ಸಾಹಿತ್ಯ ಬಹಳ ಸೊಗಸು, ಈ ಪದಗಳಲ್ಲಿ ಉತ್ಸಾಹ, ಆನಂದದ ರಸಗಳೇ ಪ್ರಧಾನ, ಗಂಡಸರೇ ಹೆಚ್ಚಾಗಿ ನಡೆಸುವ ಈ ಕೋಲಾಟಗಳನ್ನು ಕೆಲವು ಕಡೆ ಹೆಂಗಸಲು ಹಾಡುತ್ತಾರೆ. ಕೋಲಾಟಗಳಲ್ಲಿ ಒಂಟಿ ಕೋಲು, ಜೋಡಿಕೋಲು, ತೊಟ್ಟಿಲು ಕೋಲು, ಸುತ್ತುಕೋಲು ಇತ್ಯಾದಿ ವಿಧಗಳಿವೆ.


ಸುಮಾರು 10-16ಜನ ಕಲಾವಿದರು ಈ ಕೋಲಾಟದಲ್ಲಿ ಭಾಗವಹಿಸುವವರು, ಹೆಜ್ಜೆ ಹಾಕುವ ಮತ್ತು ಅದನ್ನು ಬದಲಿಸುವ ವಿಧಾನವನ್ನು ಅನುಸರಿಸಿ ಹಾಗೂ ಒಂದೆಡೆ ಸೇರುವ ಬೇರ್ಪಡಿಸುವ ತಿರುಗಿನ ವಿನ್ಯಾಸವನ್ನು ಅನುಸರಿಸಿ ಕೋಲಾಟದ ವಿಧಗಳನ್ನು ಗಮನಿಸಬಹುದಾಗಿದೆ. ಒಂದೊಂದು ಹೆಜ್ಜೆಯಿಂದ ಆರಂಭವಾಗುವ ಕೋಲಾಟವು ಹೆಚ್ಚಾದಂತೆ ಮೂರೆಹೆಜ್ಜೆಯ ಪ್ರಮಾಣಕ್ಕೆ ಬರುತ್ತದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೋಲಾಟಕ್ಕೆ ದೈವೀ ಸ್ಥಾನವನ್ನು ನೀಡಲಾಗಿದೆ. ಎಂದು ಹೇಳಿದರು.
ಗೌರಿದೇವಿಯ ಉಸ್ತುವರಿಗಳಾದ ಶ್ರೀನಿವಾಸ್.ಭರತೇಶ್.ಮಹಂತೇಶ್. ಬಸವರಾಜ್.ರಂಗಸ್ವಾಮಿ ಹಾಗೂ ಗ್ರಾಪಂ ಸದಸ್ಯರು ಇತರರಿದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page