ಚಳ್ಳಕೆರೆ ನ.30.ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗೌರಿಹಬ್ಬದ ಅಂಗವಾಗಿ ಜಾನಪದ ಕಲೆ ಕೋಲಾಟ ಹಮ್ಮಿಕೊಳ್ಳಲಾಗಿತ್ತು.
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದೇವತೆ ಶ್ರೀ ಮಾರಿಕಾಂಬಾ ದೇವಾಸ್ಥಾನದಲ್ಲಿ ಶ್ರೀ ಗೌರಿದೇವಿ ಪ್ರತಿಷ್ಠಾಪನೆ ಮಾಡಿದ್ದು ಬುಧವಾರ ರಾತ್ರಿ ಭಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗುರುವಾರ ರಾತ್ರಿ ಕ್ಯಾತಗಾನಹಳ್ಳಿ ಗ್ರಾಮದ ಸುಮಾರು 20ಯುವಕ ತಂಡ ಕೋಲಾಟದಲ್ಲಿ ತೊಡಗಿದ್ದು ಗ್ರಾಮಸ್ಥರು ಕೋಕಾಟವನ್ನು ಕಣ್ಣುತುಂಬಿಸಿಕೊಂಡರು.
ಕೋಲಾಟದ ಮುಖಂಡ ಕ್ಯಾತಗಾನಹಳ್ಳಿ ಗ್ರಾಮದ ಈರಣ್ಣ ಮಾತನಾಡಿ ಹುಣ್ಣಿಮೆಯ ಬೆಳದಿಂಗಳು. ಸುಗ್ಗಿ ಕಾಲ.ಹಬ್ಬ.ಜಾತ್ರೆ. ಉತ್ಸವಗಳಲ್ಲಿ ಕೋಲಾಟಗಳು ಆಕರ್ಷಣೀಯವಾಗಿರುತ್ತಿದ್ದವು ಇತ್ತೀಚಿನ ದಿನಗಳಲ್ಲಿ ಕೋಲಾಟ ಕಣ್ಮರೆಯಾಗಿದ್ದು ಕೆಲವೇ ಗ್ರಾಮಗಳಲ್ಲಿ ಇಂದಿಗೂ ಕೋಲಾಟವನ್ನು ಮುಂದುವರೆಸಿಕೊಂಡು ಬಂದುದೆ., , ಸೊಗಸಾದ ಹಾಡುಗಳನ್ನು ಹಾಡುತ್ತಾ ಕೋಲೊಯ್ಯವ ಆಟಗಾರರು ಕೋಲು ಹಿಡಿದು ಚಕ್ರಾಕಾರವಾಗಿ ನಿಂತು ಹಾಡಿಗೆ ಗೆಜ್ಜೆ ಕಟ್ಟಿ ಕಾಲಿನ ಹೆಜ್ಜೆಗಳನ್ನು ಹಾಕುತ್ತಾ ಕೋಲು ಹೊಡೆಯ್ಯುತ್ತಾ ಕುಣಿಯುತ್ತಾರೆ .
ಕೋಲುಗಳನ್ನು ಕುಟ್ಟುತ್ತಾ ಪದಗಳನ್ನು ಹಾಡುತ್ತಾ ಗುಂಪು ಗುಂಪಾಗಿ ಕೋಲಾಟವಾಡುತ್ತಾರೆ. ಈ ಕೋಲು ಪದ್ಯಗಳ ಸಾಹಿತ್ಯ ಬಹಳ ಸೊಗಸು, ಈ ಪದಗಳಲ್ಲಿ ಉತ್ಸಾಹ, ಆನಂದದ ರಸಗಳೇ ಪ್ರಧಾನ, ಗಂಡಸರೇ ಹೆಚ್ಚಾಗಿ ನಡೆಸುವ ಈ ಕೋಲಾಟಗಳನ್ನು ಕೆಲವು ಕಡೆ ಹೆಂಗಸಲು ಹಾಡುತ್ತಾರೆ. ಕೋಲಾಟಗಳಲ್ಲಿ ಒಂಟಿ ಕೋಲು, ಜೋಡಿಕೋಲು, ತೊಟ್ಟಿಲು ಕೋಲು, ಸುತ್ತುಕೋಲು ಇತ್ಯಾದಿ ವಿಧಗಳಿವೆ.
ಸುಮಾರು 10-16ಜನ ಕಲಾವಿದರು ಈ ಕೋಲಾಟದಲ್ಲಿ ಭಾಗವಹಿಸುವವರು, ಹೆಜ್ಜೆ ಹಾಕುವ ಮತ್ತು ಅದನ್ನು ಬದಲಿಸುವ ವಿಧಾನವನ್ನು ಅನುಸರಿಸಿ ಹಾಗೂ ಒಂದೆಡೆ ಸೇರುವ ಬೇರ್ಪಡಿಸುವ ತಿರುಗಿನ ವಿನ್ಯಾಸವನ್ನು ಅನುಸರಿಸಿ ಕೋಲಾಟದ ವಿಧಗಳನ್ನು ಗಮನಿಸಬಹುದಾಗಿದೆ. ಒಂದೊಂದು ಹೆಜ್ಜೆಯಿಂದ ಆರಂಭವಾಗುವ ಕೋಲಾಟವು ಹೆಚ್ಚಾದಂತೆ ಮೂರೆಹೆಜ್ಜೆಯ ಪ್ರಮಾಣಕ್ಕೆ ಬರುತ್ತದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೋಲಾಟಕ್ಕೆ ದೈವೀ ಸ್ಥಾನವನ್ನು ನೀಡಲಾಗಿದೆ. ಎಂದು ಹೇಳಿದರು.
ಗೌರಿದೇವಿಯ ಉಸ್ತುವರಿಗಳಾದ ಶ್ರೀನಿವಾಸ್.ಭರತೇಶ್.ಮಹಂತೇಶ್. ಬಸವರಾಜ್.ರಂಗಸ್ವಾಮಿ ಹಾಗೂ ಗ್ರಾಪಂ ಸದಸ್ಯರು ಇತರರಿದ್ದರು.
0 Comments