ಸಾಂದರ್ಭಿಕ ಚಿತ್ರ ಚಳ್ಳಕೆರೆ ಜನಧ್ವನಿ ವಾರ್ತೆ ಅ.26 ಖೋಟಾ ನೋಟು ದಂಧೆಯಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನು ಚಿತ್ರದುರ್ಗ ಪೋಲಿಸರು ಬಂಧಿಸಿದ್ದಾರೆ.
ಚಿತ್ರದುರ್ಗದ ಜಯಲಕ್ಷ್ಮಿ ಬಡಾವಣೆಯಲ್ಲಿ
ನಕಲಿ ನೋಟು ಕೊಟ್ಟು ಲಕ್ಷ ಲಕ್ಷ ಅಸಲಿ ನೋಟು ಪಡೆಯುವಾಗ ವೇಳೆ ಗಲಾಟೆ ವೇಳೆ
ಚಿತ್ರದುರ್ಗ ಕೋಟೆ ಪೊಲೀಸರು ದಾಳಿ ನಡೆಸಿ ಚಿತ್ರದುರ್ಗದ ಶಂಕರ್ ಗೌಡ ಮಿನಿ ಡಬ್ಲಿಂಗ್ ಆರೋಪಿಯನ್ನು ಬಂದಿಸಿದ್ದಾರೆ.
1 ಲಕ್ಷ ಅಸಲಿ ಹಣಕ್ಕೆ 3 ಲಕ್ಷ ನಕಲಿ ನೋಟು ನೀಡುತ್ತೇವೆ ಎಂದಿದ್ದ ಶಂಕರ್ ಗೌಡ.
ಮಹಾರಾಷ್ಟ್ರದಿಂದ 17 ಲಕ್ಷದ 66 ಸಾವಿರ ಹಣ ನೀಡಿದ್ದ 3 ಮಂದಿ.
ಮಹಾರಾಷ್ಟ್ರ ಮೂಲದ ಮಹೇಶ್ ಕಾಟ್ಕರ್, ಸಚಿನ್ ಬಾಳು ಕಾಂಬ್ಳೆ, ಸುನೀಲ್ ಧವಳೆ.
ಮಹೇಶ್ ಕಾಟ್ಕರ್- DRDO ಟೆಕ್ನಿಕಲ್ ಆಫೀಸರ್.
ಕಾರ್ ನಲ್ಲಿ ನಕಲಿ ನೋಟಿನ ಟ್ರಂಕ್ ನೋಡಿ ಗಾಬರಿಯಾಗಿದ್ದ ಮಹಾರಾಷ್ಟ್ರ ಟೀಂ.
ಸಂಪೂರ್ಣ ಖೋಟಾ ನೋಟು ಕಂಡು ವ್ಯವಹಾರಕ್ಕೆ ಒಪ್ಪದಿದ್ದಕ್ಕೆ ಗಲಾಟೆ.
ಈ ವೇಳೆ ಚಾಕು ತೋರಿಸಿ ಮಹಾರಾಷ್ಟ್ರ ಟೀಂಗೆ ಜೀವ ಬೆದರಿಕೆ ಹಾಕಿದ್ದ ಶಂಕರ್ ಗೌಡ.
ಶಂಕರ್ ಗೌಡ & ಮಹಾರಾಷ್ಟ್ರದ ಮೂರು ಮಂದಿ ನಡುವೆ ಗಲಾಟೆ.
ಜಗಳ ನಡೆಯುವ ವೇಳೆ ಸ್ಥಳಕ್ಕೆ ಕೋಟೆ ಠಾಣೆ CPI ದೊಡ್ಡಣ್ಣ ದಾಳಿ.
ಈ ವೇಳೆ ಖೋಟ ನೋಟು ದಂಧೆಯ ಕರಾಳ ಮುಖ ಬಯಲಾಗಿದೆ.
ಮನಿ ಡಬ್ಲಿಂಗ್ ಮಾಡುತ್ತಿದ್ದ ಶಂಕರ್ ಗೌಡ ಅರೆಸ್ಟ್.
ಬಂಧಿತನಿಂದ 1 ಕಾರ್, 2 ಟ್ರಂಕ್ ನಕಲಿ ನೋಟು, 17 ಲಕ್ಷ ಅಸಲಿ ನೋಟು ವಶಕ್ಕೆ.
ಕೋಟೆ ಸಿಪಿಐ ದೊಡ್ಡಣ್ಣ ಅವರಿಂದ ಸುಮೋಟೋ ಕೇಸ್ ದಾಖಲು.
IPC 341,489(B),420,307 ಅಡಿಯಲ್ಲಿ ಕೇಸ್.
ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.ನೋಟು ಮುದ್ರಣಕ್ಕೆ ಬಳಸುತ್ತಿದ್ದ ಉಪಕರಣಗಳನ್ನು ಗ್ರಾಮಾಂತರ ಠಾಣೆಯ ಪೋಲಿಸರು ವಶಪಡಿಸಿಕೊಂಡಿದ್ದಾರೆ.
0 Comments