ಚಳ್ಳಕೆರೆ ಸೆ.16. ಗ್ರಾಮೀಣ ಪ್ರದೇಶದ ಬಡ ಕೂಲಿಕಾರ್ಮಿಕರು ಹಾಗೂ ರೈತರಿಗೆ ಉದ್ಯೋಗ ಖಾತ್ರಿ ಯೋಜನೆ ಮಧ್ಯವರ್ತಿಗಳಿಗೆ ವರದಾನವಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಬಹುತೇಕ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಇಲಾಖೆ ಹಾಗೂ ಗ್ರಾಮಪಂಚಾಯಿತಿ ಸಯಯೋಗದಲ್ಲಿ ರೈತರ ಹೊಲಗಳಲ್ಲಿನ ಪಲವತ್ತಾದ ಮಣ್ಣು ಕೊಚ್ಚಿ ಹೋಗುವುದನ್ನು ತಡೆಯಲು, ಮಳೆ ನೀರು ಇಂಗಿಸಲು ಬದುಗಳನ್ನು ನಿರ್ಮಿಸಲು ನರೇಗಾ ಯೋಜನೆಯಡಿ ಅವಕಾಶ ನೀಡಿದೆ ಇದನ್ನೆ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ರೈತರ ಹೆಸರಿನಲ್ಲಿ ಜೆಸಿಬಿ ಯಂತ್ರಗಳ ಮೂಲಕ ಬದು ನಿರ್ಮಾಣ ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.
ಕೂಲಿಗಾಗಿ ಗ್ರಾಮೀಣ ಜನರು ಗುಳೆಹೋಗುವುದನ್ನು ತಪ್ಪಿಸಲು ತಮ್ಮ ತಮ್ಮ ಗ್ರಾಮದಲ್ಲೇ ನರೇಗಾ ಯೋಜನೆಯಡಿಯಲ್ಲಿ ಕೂಲಿ ಇಲ್ಲದ ಬಡ ಜನರಿಗೆ ಸರ್ಕಾರದಿಂದಲೇ ನರೇಗಾ ಕಾಮಗಳಲ್ಲಿ ಕೆಲಸ ಕೊಟ್ಟು ಕೂಲಿ ಹಣವನ್ನು ನೇರವಾಗಿ ಕಾರ್ಮಿಕರ ಖಾತೆಗೆ ನೇರವಾಗಿ ಪಾವತಿ ಮಾಡುವ ಈ ಯೋಜನೆಯ ಉದ್ದೇಶ. ಆದರೆ ಗ್ರಾಮೀಣ ಭಾಗಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ರೈತರು ತಮ್ಮ ಜಮೀನುಗಳಲ್ಲಿ ಬದುಗಳನ್ನು ನಿರ್ಮಿಸಿಕೊಂಡು ಮಳೆಗೆ ಕೊಚ್ಚಿ ಹೋಗುವ ಫಲವತ್ತಾದ ಮಣ್ಣು ತಡೆಯಲು ಹಾಗೂ ಮಳೆ ನೀರು ಇಂಗಿಸಲು ಹಕಾರಿಯಾಗುವಮನತೆ ಇಳಿಜಾರು ಕಡೆ ಬದು ನಿರ್ಮಾಣ ಮಾಡಿಕೊಂಡು ಕೂಲಿ ಪಡೆದು ಆರ್ಥಿಕವಾಗಿ ಸದೃಢರಾಗುವಂತೆ ಹೇಳಲಾಗುತ್ತಿದೆ. ಆದರೆ ರೈತರ ಹೆಸರಿನಲ್ಲಿ ಗ್ರಾಮೀಣ ಭಾಗದಲ್ಲಿ ಬದು ನಿರ್ಮಾಣ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ.
ಮಾನವ ಕೂಲಿಗೆ ಕತ್ತರಿ
ಉದ್ಯೋಗ ಖಾತ್ರಿ ಯೋಜನೆಯಡಿ ಯಂತ್ರಗಳ ಬಳಕೆ ನಿಷೇಧವಿದ್ದರೂ ಗ್ರಾಪಂ ವ್ಯಾಪ್ತಿಯಲ್ಲಿ ರೈತರ ಜಮೀನುಗಳಲ್ಲಿ ಬದು ನಿರ್ಮಾಣ ಕಾಮಗಾರಿಯನ್ನ ಜೆಸಿಬಿ ಯಂತ್ರದ ಮೂಲಕ ಕಾಮಗಾರಿಗಳನ್ನು ಮಾಡಿಸುತ್ತಾರೆ ಎಂಬ ದೂರುಗಳು ಸಾಕಷ್ಟು ಕೇಳಿ ಬರುತ್ತವೆ ಇದರಿಂದ ಮಾನವ ಕೂಲಿಗೆ ಕತ್ತರಿ ಹಾಕಿದಂತಾಗಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ನರೇಗಾ ಯೋಜನೆಯ ಬದು ನಿರ್ಮಾಣ ಕಾಮಗಾರಿಗಳಿಗೆ ಜೆಸಿಬಿ ಯಂತ್ರಗಳ ಬಳಕೆಗೆ ಕಡಿವಾಣ ಹಾಕುವರೇ ಕಾದು ನೋಡ ಬೇಕಿದೆ.
0 Comments