ಚಳ್ಳಕೆರೆ ಜನಧ್ವನಿ ವಾರ್ತೆ ಜೂ 14.
ಬಿತ್ತನೆ ಬೀಜ ಪಡೆಯ ಕಡ್ಡಾಯವಾಗಿ ಇಕೆವೈಸಿ ಮಾಡಿಸಿರಬೇಕು ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಅಗತ್ಯ ಬೀಜ ಗೊಬ್ಬರ ಸಂಗ್ರಹಣೆ ಮಾಡಿದ್ದು ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ ಅಭಯ ನೀಡಿದ್ದಾರೆ,
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆರಣದಲ್ಲಿ ೨೦23 ರ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಶೇಂಗಾ ರೈತ ಸಂಪರ್ಕ ಕೇಂದ್ರ ಮೂಲಕ ಬಿತ್ತನೆ ಶೇಂಗಾ ವಿತರಿಸಿ ಮಾತನಾಡಿದರು.
ರೈತರು ಬಿತ್ತನೆ ಬೀಜ ಗೊಬ್ಬರ ಖರೀದಿಗೆ ಮುನ್ನ ಗುಣ ಮಟ್ಟವನ್ನು ಪರೀಲನೆ ಮಾಡಿಕೊಂಡು ಬಿಲ್ ಪಡೆಯುವುದು ಕಡ್ಡಾಯ ಕೃಷಿ ಇಲಾಖೆವತಿಯಿಂದ ವಿತರಣೆ ಮಾಡುವ ಬಿತ್ತನೆ ಶೇಂಗಾ ಚೀಲದ ಮೇಲೆ ಕ್ಯೂ ಆರ್ ಕೋಡ್ ಇದ್ದು ರೈತರಿಗೆ ವಿತರಣೆ ಮಾಡುವ ಕ್ಯೂಆರ್ ಕೋಡ್ ಸ್ಕಾö್ಯನ್ ಮಾಡಿ ನಿಮ್ಮ ಪಹಣಿ, ಆದಾರ್ ಕಾರ್ಡ್ ಜೆರಾಕ್ಸ್, ಎಫ್.ಐ.ಡಿ ನಂ ನೊಂದಿಗೆ ಎಂಟ್ರಿ ಮಾಡಲಾಗುವುದು ಇದರಿಂದ ಒಬ್ಬರ ಹೆಸರಿನಲ್ಲಿ ಮೊತ್ತೊಬ್ಬರು ಬಿತ್ತನೆ ಬೀಜ ಪಡೆಯಲು ಅಕ್ರಮಗಳಿಗೆ ಕಡಿವಾಣ ಬಿದ್ದಂತಾಗಿದೆ ಎಂದು ತಿಳಿಸಿದರು.
ಗರಿಷ್ಠ 2ಹೆಕ್ಟೇರ್ ಪ್ರದೇಶಕ್ಕೆ ಅಥವಾ ರೈತರ ಹಿಡುವಳಿಗನುಸಾರವಾಗಿ ಬಿತ್ತನೆ ಬೀಜಗಳನ್ನು ಪಡೆಯ ಬಹುದು. ಬಿತ್ತನೆ ಬೀಜ ವಿತರಣೆಯನ್ನು ಸೀಡ್ ಮಿಸ್ ನಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ. ಈ ನಂತರ ವಿತರಿಸುವ ಬಿತ್ತನೆ ಬೀಜಕ್ಕೆ ಪ್ರತೀ ಪ್ಯಾಕೆಟ್ ಮೇಲೆ ಕ್ಯೂ ಆರ್ಕೋಡ್ ಇದ್ದು, ರೈತರು ಕ್ಯೂಆರ್ ಕೋಡ್ ಇರುವುದನ್ನು ಖಾತರಿ ಪಡಿಸಿಕೊಂಡು ಬಿತ್ತನೆ ಬೀಜ ಪಡೆಯುವಂತೆ ತಿಳಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments