ಚಳ್ಳಕೆರೆ ಜನಧ್ವನಿ ವಾರ್ತೆ ಜೂ 8
ಸಾರ್ವಜನಿಕರಿಗೆ ಹಾಗೂ ರೈತರ ಕೃಷಿ ಚಟುವಟಿಗೆ ತೊಂದರೆಯಾಗದAತೆ ಸರ್ವಿಸ್ ರಸ್ತೆಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಶಾಸಕ ಟಿ,ರಘುಮೂರ್ತಿ ಹೇಳಿದರು,
ಹಿರಿಯೂರಿಯೂರಿನಿಂದ ಚಳ್ಳಕೆರೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
]
ರೈತರು ರಸ್ತೆ ಅಭಿವೃದ್ಧಿಗೆ ಜಮೀನು ನೀಡಿದ್ದು ರೈತರ ಜಮೀನುಗಳಿಗೆ ಹೋಗಲು ಸರ್ವೀಸ್ ರಸ್ತೆ ಮಾಡದೆ ಗಿಡಗಳನ್ನು ನಡೆಲಾಗುತ್ತಿದ್ದು ರೈತರು ಕೃಷಿ ಚುಟುವಟಿಗೆ ಮಾಡಲು ದಾರಿಯಿಲ್ಲದಂತಾಗಿದೆ ಹಾಗೂ ಕಮ್ಮತ್ತ್ ಮರಿಕುಂಟೆ, ಗಂಜಿಗುಂಟೆ, ಚಿಕತನಹಳ್ಳಿ ಗ್ರಾಮಗಳಿಗೆ ಹೋಗುವ ಸರ್ವೀಸ್ ರಸ್ತೆಯಿಲ್ಲದೆ ಸುತ್ತಿ ಬಳಿಸಿ ಹೋಗುವ ಪರಿಸ್ಥಿತಿ ಇದ್ದು ಈ ಬಗ್ಗೆ ಜನರು ಪ್ರತಿಭಟನೆಯೂಸಹ ಮಾಡಿದ್ದಾರೆ ಆದ್ದರಿಂದ ಗ್ರಾಮೀಣ ಜನ ಹಾಗೂ ರೈತರಿಗೆ ಅನುಕೂಲವಾಗುವಂತೆ ರಸ್ತೆ ಕಾಮಗಾರಿಯನ್ನು ನಿರ್ಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಗೌರವ್,ಪಿಎಸ್ಸಿ ಕಂಪನಿಯ ಜಾನಿಜಿಲಾನಿ, ನಗರಸಭೆ ಸದಸ್ಯ ವೀರಭದ್ರಪ್ಪ ವಕೀಲ ಶ್ರೀನಿವಾಸ್,ರಮೇಶ್ಗೌಡ.ಪಿಎಸ್ಐ ಸತೀಶ್ನಾಯ್ಕ ಇತರರಿದ್ದರು.
0 Comments