ಹೊಸವರ್ಷ ಸಂಭ್ರಮಾಚರಣೆಗೆ ಕೇಕ್ ಹಾಗು ಹೊಸ ಬಟ್ಟೆ ಖರೀದಿಗೆ ಮುಗಿಬಿದ್ದ ಜನರು.

by | 31/12/23 | ಸುದ್ದಿ


ಚಳ್ಳಕೆರೆ : ಹೊಷವರ್ಷ ಸಂಭ್ರಮಾಚರಣೆಗೆ ನಗರದ. ಬೇಕರಿ ಹಾಗೂ ಹೊಸ ಬಟ್ಟೆ ಖರೀದಿ ಬಲು ಜೋರಾಗಿತ್ತು. ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಇದ್ದರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಯುವಕ ಯುವತಿಯರು ಹಾಗೂ ವಿದ್ಯಾರ್ಥಿಗಳು ಹೊಸ ವರ್ಷ ಆಚರಣೆಗೆ ಭರದ ಸಿದ್ಧತೆ ನಡೆಸಿದ್ದಾರೆ 2024 ಹೊಸ ವರ್ಷದ ಆಗಮನದ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಬೇಕರಿಗಳಲ್ಲಿ ಬಗೆಬಗೆಯ ಕೇಕ್ ಗಳ ತಯಾರಿ ಹಾಗೂ ಮಾರಾಟ ಭರದಿಂದ ಸಾಗಿದ್ದು ಗ್ರಾಹಕರ ಗಮನ ಸೆಳೆಯುತ್ತಿವೆ.ಹೊಸ ವರ್ಷಾಚರಣೆಗೆ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು ದುಬಾರಿಯಾದರೂ ಪರವಾಗಿಲ್ಲ, ಹೊಸ ವರ್ಷಾಚರಣೆಗೆ ಕೇಕ್ ಬೇಕೆಬೇಕು ಎಂಬಂತಾಗಿದ್ದು ಈಗಾಗಲೇ ಬೇಕರಿಗಳಲ್ಲಿ ನೂರಾರು ಸಂಖ್ಯೆಯ ಕೇಕ್‌ಗಳು ತಯಾರಾಗಿ ಪೈಪೋಟಿಯ ಮೇಲೆ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ.


ನಗರದ ಬೆಂಗಳೂರು ರಸ್ತೆ ಬಳ್ಳಾರಿ ರಸ್ತೆ ಪಾವಗಡ ರಸ್ತೆ ಹಾಗೂ ಚಿತ್ರದುರ್ಗ ರಸ್ತೆಗಳಲ್ಲಿ ಇರುವ ಬೇಕರಿಗಳಲ್ಲಿ ಹೊಸವರ್ಷದ ಅಂಗವಾಗಿ ತಹರೇವಾರಿ ಕೇಕ್ ಗಳನ್ನು ಪ್ರದರ್ಶಿಸಿರುವುದು.

ನೂತನ ವರ್ಷದ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಆಚರಿಸುವ ಪರಿಪಾಟವಿದ್ದು ಕಾಲು ಕೆಜಿ ಗಾತ್ರದ ಸಣ್ಣ ಕೇಕ್‌ನಿಂದ ೧೦ಕೆಜಿಯ ಬೃಹತ್ ಗಾತ್ರದ ಕೇಕ್‌ಗಳನ್ನು ಬೇಕರಿಗಳಲ್ಲಿ ಮಾರಾಟಕ್ಕೆ ಸಿದ್ಧಪಡಿಸಲಾಗಿದೆ. ಡಿ.31ರ ರಾತ್ರಿ ಹೊಸ ವರ್ಷಾಚರಣೆಗೆ ಭರದಿಂದ ವ್ಯಾಪಾರ ಸಾಗಿದ್ದು ಜ.1ರಂದೂ ಕೂಡ ಕೇಕ್ ಮಾರಾಟ ಮುಂದುವರಿಯುತ್ತದೆ.ಕೇಜಿ ಕೇಕ್ ಗೆ ರು. 300 ರೂನಿಂದ 1200 ರೂವರೆಗೆ ಮಾರಾಟವಾಗುತ್ತಿದೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಜನರನ್ನು ತೃಪ್ತಿಪಡಿಸುವಲ್ಲಿ ಪಟ್ಟಣದ ವಾಸವಿ ಬೇಕರಿ ರಾಯಲ್ ಬೇಕರಿ ಶ್ರೀನಿವಾಸ ಬೇಕರಿ ಸೇರಿದಂತೆ ಪ್ರತಿಷ್ಠಿತ ಬೇಕರಿಗಳ ಮಾಲೀಕರು ಶುಕ್ರವಾರದಿಂದಲೇ ವಿವಿಧ ಕೇಕ್ ಗಳ ತಯಾರಿ,ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ.


ಹೊಸವರ್ಷದ ಆಚರಣೆಯ ವೇಳೆ ಹೆಚ್ಚಿನ ಕೇಕ್ ಗೆ ಡಿಮ್ಯಾಂಡ್ ಇರುತ್ತದೆ.ಅದಕ್ಕಾಗಿ ಗ್ರಾಹಕರ ಬಯಕೆಗೆ ತಕ್ಕಂತೆ ಕೇಕ್ ಗಳನ್ನು ಸಿದ್ದಪಡಿಸಿ ಮಾರುತ್ತಿದ್ದೇವೆ. ಗ್ರಾಹಕರಿಂದ ಅರ್ಡರ್ ತೆಗೆದುಕೊಂಡು ಕೆಲ ಕೇಕ್ ತಯಾರಿಸಿದರೆ , ಮತ್ತೆ ಕೆಲ ಕೇಕ್ ಗಳನ್ನು ವಿವಿಧ ಮಾದರಿಗಳಲ್ಲಿ ನಾವೇ ತಯಾರಿಸುತ್ತೇವೆ

ಪವಿತ್ರಣ್

ಡಿಲೆಕ್ಸ್ ಓವನ್ ಪ್ರೆಷ್ ಬೇಕರಿ ಮಾಲೀಕ

 

ಫೈನಾಫಲ್, ಅರೇಂಜ್, ಐಸ್ ಕ್ರೀಂ ಕೇಕ್, ಆಪಲ್ ಕೇಕ್, ಚಾಕಲೇಟ್ ಕೇಕ್,ಹನಿಕೇಕ್,ಪ್ಲಂ ಕೇಕ್ ಸೇರಿದಂತೆ ಹಲವು ಬಗೆಯ,ನಾನಾ ತೂಕದ ಕೇಕ್ ಗಳು ಎಲ್ಲಾ ಬೇಕರಿಯಲ್ಲೂ ಸಿದ್ದಪಡಿಸಿದ್ದು, ಮಿಕ್ಕಿಮೌಸ್,ಹೂವಿನಕುಂಡ, ಹೃದಯ, ಗಿಟಾರ್,ಫ್ಲವರ್ ಸೇರಿದಂತೆ ವಿವಿಧ ಆಕೃತಿ ಹಾಗೂ ಬಣ್ಣದಲ್ಲಿ ಜನರು ಹೇಳುವ ಆಕೃತಿಯಲ್ಲಿ ಕೇಕ್ ತಯಾರಿಸಿಕೊಡುತ್ತಾರೆ.ಬೆಂಗಳೂರು ಬೇಕರಿಯ ಧರ್ಮರಾಜ್ ಅವರು ಕಳೆದ ಹತ್ತಾರು ವರ್ಷದಿಂದ ಹೊಸವರ್ಷದ ಆಚರಣೆ ಅಂಗವಾಗಿ ಆಕರ್ಷಕ ಕೇಕ್ ಗಳ ತಯಾರಿ ಮಾಡುತ್ತಿದ್ದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಕೇಕ್ ತಯಾರಿಸಿಕೊಡುತ್ತಾರೆ.

ಜಗದೀಶ್ ರಾಮಾಚಾರಿ

ಗ್ರಾಹಕ

ನಗರದಲ್ಲಿ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ರಾತ್ರಿ ಇಡೀ ಗಸ್ತು ತಿರುಗಳು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಸಾರ್ವಜನಿಕರು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು ಕಿಡಿಗೇಡಿಗಳು ಅಹಿತಕರ ಘಟನೆಗಳನ್ನು ನಡೆಸಲು ಮುಂದಾದರೆ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳಲಾಗುವುದು


ಟಿಬಿ ರಾಜಣ್ಣ

ಡಿ ವೈ ಎಸ್ ಪಿ ಚಳ್ಳಕೆರೆ

ಒಟ್ಟಾರೆ ಹೊಸವರ್ಷ ಆಚರಣೆಯಲ್ಲಿ ಕೇಕ್ ವ್ಯಾಪಾರ ಭರಾಟೆಯಿಂದ ಕೂಡಿದ್ದು ಪಟ್ಟಣದ ಪ್ರತಿ ಬೇಕರಿಗಳಲ್ಲಿ ಗ್ರಾಹಕರಿಗಾಗಿ ಕೇಕ್ ಗಳು ಸಿದ್ದಗೊಂಡು ಕಾಯುತ್ತಿವೆ. ಯುವ ಜನತೆ ಮಧ್ಯರಾತ್ರಿ 12 ಗಂಟೆ ವೇಳೆಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತ ಕುಳಿತಿದ್ದು ನಗರದ ಪ್ರತಿಷ್ಠಿತ ಹೋಟೆಲ್ ಗಳು ಡಾಬಾಗಳು ಲೇಔಟ್ ಗಳು ಪಾರ್ಕ್‌ ಗಳು ಸೇರಿದಂತೆ ಹಲವಡೆಗಳಲ್ಲಿ ಸಿದ್ಧತೆಗಳು ಬರದಿಂದ ಸಾಗಿದ್ದು ಮಧ್ಯ ಮಾರಾಟಗಾರರು ಹೋಟೆಲ್ ಮಾಲೀಕರು ಬಟ್ಟೆ ಅಂಗಡಿಯ ಮಾಲೀಕರು ಸೇರಿದಂತೆ ವ್ಯಾಪಾರಸ್ಥರು ಉತ್ತಮ ವ್ಯಾಪಾರದ ನಿರೀಕ್ಷೆಹೊಂದಿದ್ದಾರೆ

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page