ಶಿವಮೊಗ್ಗ ಜಿಲ್ಲೆ ಸುದ್ದಿ
ಹೊಸನಗರ ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ
ಶ್ರೀಗಂಧ ಚೋರ ರ ಹೆಡೆಮುರಿ ಕಟ್ಟಿದ ಹೊಸನಗರ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು.
ಹೊಸನಗರ ವಲಯ, ವ್ಯಾಪ್ತಿಯಲ್ಲಿ ದಿನಾಂಕ: 13-12-2023 ರಂದು ಅಕ್ರಮ ಶ್ರೀಗಂಧ
ಮರಗಳ ಕಡಿತಲೆ, ಸಾಗಾಣಿಕೆ ಹಾಗೂ ದಾಸ್ತಾನಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ
ಪ್ರಕರಣಗಳಲ್ಲಿ ಒಟ್ಟು 39.240 ಕೆ. ಈ ಶ್ರೀಗಂಧ ಹಾಗೂ 3 ಬೈಕ್ಗಳನ್ನು 6 ಜನ
ಆರೋಪಿಗಳ ಸಮೇತ ಇಲಾಖಾ ಪರ ವಶಪಡಿಸಿಕೊಂಡಿದ್ದು, ಹೊಸನಗರ ತಾಲ್ಲೂಕಿನ
ಸುಮಾರು 7-8 ಕಡೆ ದಾಳಿ ನಡೆಸಲಾಗಿದೆ. ಕಾರ್ಯಚರಣೆಯನ್ನು ಶ್ರೀ ಸಂತೋಷ್
ಕುಮಾರ್ ಕೆಂಚಪ್ಪನವರ್ ಭಾ.ಅ.ಸೇ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಾಗರ
ವಿಭಾಗ ಹಾಗೂ ಶ್ರೀ ಮೋಹನ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,
ಹೊಸನಗರ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಹೊಸನಗರ ವಲಯ
ಅರಣ್ಯಾಧಿಕಾರಿಗಳಾದ ಶ್ರೀ ಎಂ ರಾಘವೇಂದ್ರ, ನಗರ ವಲಯದ ಅರಣ್ಯಾಧಿಕಾರಿಗಳಾದ
ಶ್ರೀ ಸಂಜಯ್ ಬಿ ಎಸ್ ಇವರುಗಳ ನೇತೃತ್ವದಲ್ಲಿ ಸಿಬ್ಬಂದಿಗಳಾದ ಷಣ್ಮುಖ ಪಟೇಲ್,
ಹಾಲೇಶ್ ಕುಮಾರ್, ದೊಡ್ಮಿನಿ, ಯುವರಾಜ್, ಅನಿಲ್, ಮಂಜುನಾಥ, ಅಕ್ಷಯ್,
ನರೇಂದ್ರ, ಸತೀಶ್ ನಿಟ್ಟೂರ್, ಯೋಗರಾಜ್, ಮನೋಜ್ ಮೌನೇಶ್. ಇರ್ಷಾದ್,
ಪುಟ್ಟಸ್ವಾಮಿ, ರಾಜು, ಶಶಿಕುಮಾರ್, ಜಸ್ಟ್ರಿ ಲಾಯ್, ರಮೇಶ್, ದಿವಾಕರ, ಸರೇಶ್,
ಕೃಷ್ಣಮೂರ್ತಿ ಹಾಗೂ ವಾಹನ ಚಾಲಕರಾದ ಜಗದೀಶ್ ಹಾಗೂ ಪ್ರಮೋದ್, ರಾಮು
ಇವರುಗಳು ಪಾಲ್ಗೊಂಡಿರುತ್ತಾರೆ. ಕಾರ್ಯಚರಣೆಯಲ್ಲಿ ಅಂದಾಜು 1.50 ಲಕ್ಷ ಮೌಲ್ಯದ
ಶ್ರೀಗಂಧ ಹಾಗೂ 3 ವಾಹನಗಳನ್ನು ಇಲ್ಲಿ ಮಾಡಲಾಗಿರುತ್ತದೆ. ಹೀಗೆಯೇ ತಾಲ್ಲೂಕಿನ
ಇತರೆ ಶ್ರೀಗಂಧ ಕಳ್ಳ ಸಾಗಾಣಿಕೆದಾರರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಶೀಘ್ರದಲ್ಲಿ
ಆರೋಪಿಗಳನ್ನು ಬಂಧಿಸಲು ಕ್ರಮ ತೆಗೆದು ಕೊಳ್ಳಲಾಗುವುದು.
0 Comments