ಚಳ್ಳಕೆರೆ ಜನಧ್ವನಿ ವಾರ್ತೆ ಮೇ 22
ಹಣ ನೀಡಲಿಲ್ಲವೆಂದು ಹೆರಿಗೆ ಮಾಡಿಸಲು ಮುಂದಾಗದ ಇರುವುದರಿಂದ ತುಂಬು ಗರ್ಭಿಣಿಯನ್ನು ಆಟೋದಲ್ಲೇ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದ ಅಮಾನವೀಯ ಘಟನೆಯೊಂದು ಸೋಮವಾರ ಚಳ್ಳಕೆರೆ ನಗರದಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಜಿ,ದೇವರಹಳ್ಳಿ ಗ್ರಾಮದ ಸುಮರಾಣಿ(26) ಸೋಮವಾರ ಮಧ್ಯಹ್ನಾನ 2 ಗಂಟೆಸುಮಾರಿನಲ್ಲಿ ಸರಕಾರಿ ಹೆರಿಗೆ ವೈದ್ಯರಿಗೆ ಸೇರಿದ ಖಾಸಗಿ ಹೆರಿಗೆ ಆಸ್ಪತ್ರೆ ಎನ್ನಲಾದ ಆಸ್ಪತ್ರೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ತೋರಿಸಲು ಬಂದಿದ್ದಾರೆ.
ಇದು ಹೆರಿಗೆ ನೋವಾಗಿರುವುದರಿಂದ 38 ಸಾವಿರ ರೂ ಆಗುತ್ತದೆ ಹಣ ಕಟ್ಟಿದರೆ ಹೆರಿಗೆ ಮಾಡಿಸುವುದಾಗಿ ಪ್ರಸೂತಿ ಹಾಗೂ ಸ್ತಿçà ರೋಗ ತಜ್ಞೆ ಡಾ.ಶಮಾಪರ್ವೀನ್ ತಿಳಿಸಿದರು. ಮೇಡಂ ನಮ್ಮ ಬಳಿ ಈಗ ಅಷ್ಟು ಹಣ ಇಲ್ಲ ಸರಕಾರಿ ಆಸ್ಪತ್ರೆಗೆ ಹೋಗುತ್ತೇವೆ ಎಂದು ಹೇಳಿ ನಗರದ ಸಾರ್ವಜನಿಕ ಹೆರಿಗೆ ಆಸ್ಪತ್ರೆಗೆ ಬಂದಾಗ ಅಲ್ಲಿನ ಆರೋಗ್ಯ ಸಹಾಯಕಿಯರು ವೈದ್ಯರಿಗೆ ದೂರವಾಣಿ ಕರೆ ಮಾಡಿ ಹರಿಗೆಗೆ ಬಂದಿದ್ದಾರೆ ಎಂದು ತಿಳಿಸಿದಾಗ ಅವರಿಗೆ ಹೆರಿಗೆ ಮಾಡಿಸಲು ಆಸ್ಪತ್ರೆಗೆ ಸೇರಿಸಿಕೊಳ್ಳ ಬೇಡಿ ಹಾಗೂ ಅಂಬ್ಯೂಲೆನ್ಸ್ ವಾಹನ ಸಹ ಮಾಡಿಕೊಡಬೇಡಿ ಎಂದು ತಿಳಿಸಿದರು.ಇತ್ತ ಹೆರಿಗೆ ನೋವು ಕಾಣಿಸಿಕೊಂಡಿದೆ ಚಳ್ಳಕೆರೆಯಿಂದ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಆಟೋದಲ್ಲೇ ಗರ್ಭಿಣಿ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಗರ್ಭಿಣಿ ಪೋಷಕರು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡರು.
. ಗರ್ಭಿಣಿ ತಾಯಿ ಬೋರಮ್ಮ ಹೆರಿಗೆ ವೈದ್ಯರ ಹಾಗೂ ಅವ್ಯವಸ್ಥೆ ಬಗ್ಗೆ ಆಕ್ರೋಶ ಹೊರಹಾಕಿರುವುದು
ಗರ್ಭಿಣಿ ತಾಯಿ ಬೋರಮ್ಮ ಮಾತನಾಡಿ ಪತ್ರಿ ತಿಂಗಳು ತಪಾಸಣೆಗೆ ಬಂದಾಗ 3 ರಿಂದ 4 ಸಾವಿರ ಬಿಲ್ ಮಾಡುತ್ತಿದ್ದಾರೆ ಇಂದು 8 ತಿಂಗಳಿಗೆ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ ಈ ದಿನ ಹೆರಿಗೆ ನೋವು ಬಂದಿದೆ ಎಂದು ವೈದ್ಯರ ಬಳಿ ಬಂದರೆ 38 ಸಾವಿರ ರೂ ನೀಡಿದರೆ ಮಾತ್ರ ಹೆರಿಗೆ ಮಾಡಿಸುತ್ತೇನೆ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ಜಿಲ್ಲಾಸ್ಪತ್ರೆಗೆ ಆಟೋದಲ್ಲೇ ಹೆರಿಗೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು.
ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಎಂದು ಹೇಳುತ್ತಾರೆ ಇಲ್ಲಿನವೈದ್ಯರು ಖಾಸಗಿ ಆಸ್ಪತ್ರೆಗಳನ್ನಿಟ್ಟುಕೊಂಡು ಹಣ ಮಾಡುತ್ತಿದ್ದಾರೆ ಒಂದು ಹೆರಿಗೆ ಆಗುವಷ್ಟರಲ್ಲಿ ಕನಿಷ್ಟ50ರಿಂದ 70 ಸಾವಿರ ಹಣ ಬೇಕು ಬಡವರು ,ಕೂಲಿ ಕಾರ್ಮಿಕರು ಸಾಲಸೂಲ ಮಾಡಿ ಹೆರಿಗೆ ಮಾಡಿಸುವ ಪರಿಸ್ಥಿತಿ ಬಂದಿದೆ ನಮ್ಮ ಮಗಳಿಗೆ ಆದ ಪರಿಸ್ಥಿತಿ ಮತ್ತೆ ಯಾರಿಗೂ ಆಗದಂತೆ ಸಂಬAಧಪಟ್ಟ ಅಧಿಕಾರಿಗಳು ನೋಡಿಕೊಳ್ಳ ಬೇಕಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸAಬಂಧಪಟ್ಟ ಜಿಲ್ಲಾ ಆರೋಗ್ಯಾಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
WhatsApp Audio 2023-05-22 at 6.05.21 PM
ಗರ್ಭಿಣಿ ಮಹಿಳೆಯ ಕುಟುಂಬರಸ್ಥರು ಜನಧ್ವನಿ ಮೀಡಿಯಾದೊಂದಿಗೆ ಮಾತನಾಡಿರುವುದು.
0 Comments