ಚಳ್ಳಕೆರೆ: ದೇಶದಲ್ಲಿ ಈಗಾಗಲೇ ಮತ್ತೊಮ್ಮೆ ಕೊರೋನ ರೋಗದ ಆತಂಕ ಶುರುವಾಗಿದ್ದು ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕ ವರ್ಗ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಾಗೃತವಾಗುವ ಅನಿವಾರ್ಯತೆ ಬಂದೊದಗಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಜಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಹೆಗ್ಗೇರೆ ತಾಯಮ್ಮ ಸರ್ಕಾರಿ ಬಾಲಕಿಯ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಕೊರೋನ ರೋಗದ ಹತೋಟಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಈ ಹಿಂದೆ 2020- 21 ಅವಧಿಯಲ್ಲಿ ಕರೋನ ರೋಗವು ದೇಶದಲ್ಲಿ ಮಹಾಮಾರಿಯಂತೆ ಅಪ್ಪಳಿಸಿ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿತು ವಿದ್ಯಾರ್ಥಿಗಳಿಗೆ ತರಗತಿಗಳಿಲ್ಲದೆ ಪಾಠ ಪ್ರವಚನಗಳನ್ನು ಆನ್ಲೈನ್ ತರಗತಿಗಳ ಮೂಲಕ ಬೋಧಿಸಿ ಅವರ ಜೀವನವನ್ನು ಕಟ್ಟಿಕೊಳ್ಳಲು ಶಿಕ್ಷಕರು ಅವಿರತ ಶ್ರಮವನ್ನು ವಹಿಸಿದರು ಹೀಗಾಗಿ ಈಗ ಬಂದಿರುವ ಕರೋನ ಹೊಸ ತಳಿಯ ರೋಗವನ್ನು ಹಿಮ್ಮೆಟ್ಟಿಸಲು ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕ ವರ್ಗ ಜಾಗೃತಿ ವಹಿಸುವುದು ಬಹುಮುಖ್ಯವಾಗಿದೆ ಸರ್ಕಾರ ಸೂಚಿಸುವ ಎಲ್ಲಾ ಆದೇಶಗಳನ್ನು ಕಟ್ಟನಿಟ್ಟಾಗಿ ಶಾಲೆಗಳಲ್ಲಿ ಪಾಲಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಲ್ಲ ವಿದ್ಯಾರ್ಥಿಗಳು ಉದಾಸೀನ ತೋರದೆ ಶಾಲೆಗಳಲ್ಲಿನ ಶಿಕ್ಷಕರ ಸೂಚನೆಗಳನ್ನು ಪಾಲಿಸಿ ತಮ್ಮ ಮನೆಯವರ ಹಾಗೂ ತಮ್ಮ ಸಹಪಾಠಿಗಳ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ವೇಣಿ ಮಾತನಾಡಿ ಕೊರೋನಾ ರೋಗ ರಾಜ್ಯದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಂಡಿಲ್ಲ ಹಾಗೆಂದ ಮಾತ್ರಕ್ಕೆ ಮಕ್ಕಳು ಹಾಗೂ ಪೋಷಕರು ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಉದಾಸೀನ ತೋರಬಾರದು ವಿದ್ಯಾರ್ಥಿಗಳು ಶಾಲೆಗಳಲ್ಲಿ ಸಹಪಾಠಿಗಳೊಂದಿಗೆ ಊಟ ಮಾಡುವಾಗ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ ಅಂತರ ಕಾಯ್ದುಕೊಳ್ಳಬೇಕು ಮತ್ತು ತಮ್ಮ ಕೈಗಳನ್ನು ಆಗಿಂದಾಗೆ ಸ್ವಚ್ಛಗೊಳಿಸಿಕೊಂಡು ಶಾಲೆಯ ಆವರಣವನ್ನು ಶುಚಿತ್ವವಾಗಿಟ್ಟುಕೊಳ್ಳಬೇಕು ಮಾಸ್ಕ್ ಧರಿಸಿಕೊಳ್ಳಬೇಕು ವಿದ್ಯಾರ್ಥಿಗಳು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಕೊರೊನ ರೋಗವನ್ನು ಹಿಮ್ಮಟ್ಟಿಸಲು ಶಾಲೆಯಲ್ಲಿ ಈಗಾಗಲೇ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಈ ವೇಳೆ ಶಿಕ್ಷಕರಾದ ಪ್ರದೀಪ್ ಪ್ರಾಣೇಶ್ ಗಂಗೂಬಾಯಿ ಉಮಾ ಶಿವಣ್ಣ ಶಂಕರ ಪ್ರಸನ್ನ ಸಿಬ್ಬಂದಿಗಳಾದ ರಂಗನಾಥ್ ಸೇರಿದಂತೆ ಶಿಕ್ಷಕರು ಶಿಕ್ಷಕಿಯರು ಹಾಗೂ ವಿಧ್ಯಾರ್ಥಿಗಳು ಇದ್ದರು.
0 Comments