ಚಳ್ಳಕೆರೆ ಜನಧ್ವನಿ ವಾರ್ತೆ ಫೆ11 .ರೈತ ದೇಶದ ಬೆನ್ನಲಬು, ಪ್ರತಿ ಸಭೆ ಸಮಾರಂಭದಲ್ಲೂ ರೈತ ಗೀತೆ ಹಾಡುವ ಮೂಲಕ ಹೊಗಳುತ್ತಾರೆ ಆದರೆ ಕೃಷಿ ಕಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯವಾದರೂ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ ಎಂದು ರೈತರು ಪ್ರತಿ ಭಟನೆ ಮಾಡುವ ಮೂಲಕ ಅಕ್ರೋಶ ಹೊರಹಾಕಿದ್ದಾರೆ.
ಹೌದು ಇದು ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಬಂದಾಗ ಕಮಿಷನ್ ಹಾವಳಿ, ತೂಕದಲ್ಲಿ ವ್ಯಾತ್ಯಾಸ, ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವ ರೈತರ ಬೆಳೆಗೆ ತಕ್ಕ ಪ್ರತಿಫಲ ಸಿಗದೆ ರೈತರನ್ನು ಮೋಸ ಮಾಡುತ್ತಿದ್ದಾರೆ ಎಂದು ಅಕ್ರೋಶ ಹೊರಹಾಕಿದ್ದಾರೆ,
ಹಿಂದೂಪುರ ಬಳ್ಳಾರಿ ಮಾರುಕಟ್ಟೆಯಲ್ಲಿ 20 ಸಾವಿರು ಇರುವ ಹುಣಿಸೆ ಹಣ್ಣು ಇಲ್ಲಿ ಕೇಲವರ 10 ಸಾವಿರ ರೂಗಳಿಗೆ ಕೇಳುತ್ತಾರೆ ಯಾವುದೇ ಒಂದು ಅಂಗಡಿಯಲ್ಲಿ ಟೆಂಡರ್ ಆದರೆ ಬೆಲೆಯನ್ನು ಎಲ್ಲಾ ಅಂಗಡಿಯಲ್ಲಿ ಒಂದೆ ಮಾಡುತ್ತಾರೆ. ಗುಣ ಮಟ್ಟದ ಹಣ್ಣಿಗೂ, ಕಳಪೆ ಹಣ್ಣಿಗೂ ಒಂದೇ ಮಾಡುತ್ತಾರೆ ಇಲ್ಲಿ ಎಲ್ಲ ದಲ್ಲಾಳಿ ಮಂಡಿಯವರು ಮಾತನಾಡಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಾರೆ ಖರೀದಿದಾರರು ಬೇರೆ ಕಡೆಯಿಂದ ಬರ ಬೇಕು ಇಲ್ಲಿನ ವರ್ಗಕರು ರೈತರಿಗೆ ಅನ್ಯಾಯ ಮಾಡುತ್ತಾರೆ ನಮಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.+.
ಒಂದು ಕಡೆ ರೈತರಿಗೆ ಅನ್ಯಾಯ ಮತ್ತೊಂದುಕಡೆ ಸರ್ಕಾರಕ್ಕೆ ತೆರಿಗೆ ಬೊಕ್ಕಸಕ್ಕೆ ತುಂಬಾ ನಷ್ಟು ಮಾಡುತ್ತಿದ್ದಾರೆ ಕೃಷಿ ಉತಪ್ಪನ್ನ ಮಾರುಕಟ್ಟೆಯಲ್ಲಿ ಅನ್ಯಾಯವಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿದೆ.
ರೈತರಿಗೆ ಅನ್ಯಾಯ ಮಾಡುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ರೈತರು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
0 Comments