ಹಿರಿಯೂರು ಮೇ28; ಮಗಳನ್ನು ಶಾಲೆಗೆ ಬಿಟ್ಟು ಬರಲು ಹೋಗುವ ದಾರಿ ಮಧ್ಯೆ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟೆರೆ ಮೂರು ಜನರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಹಿರಿಯೂರು ತಾಲ್ಲೂಕಿನ ಕಳವಿಬಾಗಿ ಬಳಿ ಈ ದುರ್ಘಟನೆ ನಡೆದಿದೆ..ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದರಿಂದ ವಿಶಾಲಾಕ್ಷಮ್ಮ (75) ಹಾಗೂ ನಾಗರಾಜ್ ಶೆಟ್ಟಿ (55) ಮೃತಪಟ್ಟಿದ್ದಾರೆ.. ನಾಜರಾಜ್ ಅವರು ತಮ್ಮ ಮಗಳನ್ನು ತುಮಕೂರಿನ ಶಾಲೆಗೆ ಸೇರಿಸಿದ್ದರು.. ಹೀಗಾಗಿ ಶಾಲೆಗೆ ಬಿಟ್ಟು ಬರಲು ಹಿರಿಯೂರಿನಿಂದ ತೆರಳುತ್ತಿದ್ದರು.. ಈ ವೇಳೆ ಈ ದುರಂತ ನಡೆದಿದೆ..
ಘಟನೆಯಲ್ಲಿ ಮೃತ ನಾಗರಾಜ್ ಅವರ ಮಗಳು ಬಿಂದು, ಪತ್ನಿ ಭಾಗ್ಯಲಕ್ಷ್ಮಿ, ಸಂಬಂಧಿ ಗೀತಾಗೆ ಗಂಭೀರ ಗಾಯಗಳಾಗಿವೆ. ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments