ಹಿರಿಯೂರು:
ತಾಲ್ಲೂಕಿನ ವ್ಯಾಪ್ತಿಯಲ್ಲಿನ ಈ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಕುಂಚಿಟಿಗ ಸಮುದಾಯದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾಪುರಸ್ಕಾರಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ತಿಳಿಸಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಈ ವಿಚಾರವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹೆಚ್.ರಂಗನಾಥ್ ಹುಲಗಲಕುಂಟೆ ಮಾತನಾಡಿ, ನಮ್ಮ ಕುಂಚಿಟಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಸಂಘದ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂಬುದಾಗಿ ಹೇಳಿದರಲ್ಲದೆ,
ಅರ್ಹ ವಿದ್ಯಾರ್ಥಿಗಳು ಇದೇ ತಿಂಗಳು ಮೇ 25ರ ಒಳಗಾಗಿ ತಮ್ಮ ಬಯೋಡೇಟಾ ಸಹಿತ ಪಾಸ್ ಪೋರ್ಟ್ ಅಳತೆ ಭಾವಚಿತ್ರ ಲಗತ್ತಿಸಿ ಅಂಕಪಟ್ಟಿ, ಟಿಸಿ ಅಥವಾ ಜಾತಿ ದೃಢೀಕರಣ ಪತ್ರ, ಮೊಬೈಲ್ ನಂಬರ್ ನೊಂದಿಗೆ ಅರ್ಜಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಕುಬೇರಪ್ಪನವರ ವಿಳಾಸಕ್ಕೆ ತಲುಪಿಸಬೇಕು ಎಂಬುದಾಗಿ ಅವರು ಹೇಳಿದರು.
ಹೆಚ್ಚಿನ ವಿವರಗಳಿಗಾಗಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹೆಚ್.ರಂಗನಾಥ್ ಹುಲಗಲಕುಂಟೆ ಮೊಬೈಲ್ ಸಂಖ್ಯೆ 9731281576, ಡಿ.ಹನುಮಂತರಾಯ ಖಜಾಂಚಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘ ಬ್ಯಾಡರಹಳ್ಳಿ 96861758551, ವಿ.ಕುಬೇರಪ್ಪ ಪ್ರಧಾನ ಕಾರ್ಯದರ್ಶಿ ಮೊಬೈಲ್ ಸಂಖ್ಯೆ 9972199458 ಇವರುಗಳನ್ನು ಸಂಪರ್ಕಿಸಬಹುದಾಗಿದೆ.
ಇಂದಿನ ಸಭೆಯಲ್ಲಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಹುಲಿರಂಗನಾಥ್, ಪ್ರಧಾನ ಕಾರ್ಯದರ್ಶಿ ಕುಬೇರಪ್ಪ, ಉಪಾಧ್ಯಕ್ಷ ಜೋಗೇಶ್ , ಮೈಸೂರು ಶಿವಣ್ಣ ಕುರುಬರಹಳ್ಳಿ, ಕಾತ್ರಿಕೇನಳ್ಳಿ ಮಂಜುನಾಥ್, ದಿಂಡಾವರಚಂದ್ರಗಿರಿ, ಕುರುಬರಹಳ್ಳಿ ದೇವರಾಜ್, ಹುಲಗಲಕುಂಟೆ ಶಶಿಕಲಾ, ಚಿಲ್ಲಹಳ್ಳಿ ವೀರಣ್ಣಗೌಡ, ಕೆ.ಕೆ.ಹಟ್ಟಿಜಯಪ್ರಕಾಶ್, ದಿಂಡವರ ಸಣ್ಣತಿಮ್ಮಣ್ಣ, ಫಿಲಾಜನಹಳ್ಳಿ ಆರ್. ರಾಮಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments