ಹಿರಿಯೂರುನಗರಸಭೆಗೆ ನೂತನವಾಗಿ ಸರ್ಕಾರದಿಂದ ಕಾಂಗ್ರೆಸ್ ಪಕ್ಷದ 5 ಸದಸ್ಯರುಗಳ ನಾಮ ನಿರ್ದೇಶನ

by | 20/10/23 | ಸುದ್ದಿ


ಹಿರಿಯೂರು :
ಹಿರಿಯೂರು ನಗರಸಭೆಗೆ ಕಾಂಗ್ರೆಸ್ ಪಕ್ಷದಿಂದ ನಗರಸಭೆ ನೂತನ ನಾಮನಿರ್ದೇಶನ ಸದಸ್ಯರಾಗಿ ಶ್ರೀಯುತ ಈ.ಆರ್.ರಮೇಶ್ ಬಾಬು, ಬಿನ್ ಲೇಟ್ ರಂಗಯ್ಯಶೆಟ್ಟಿ ಹಿರಿಯೂರು ಟೌನ್, ಶ್ರೀ ಎಸ್.ಎಲ್.ಶಿವಕುಮಾರ್ ಬಿನ್ ಎಸ್.ಎಲ್.ಲಿಂಗಪ್ಪ ವೇದಾವತಿನಗರ, ಶ್ರೀವಿ.ಶಿವಕುಮಾರ್ ಲೇಟ್ ವೀರಭದ್ರಪ್ಪ ಹಿರಿಯೂರು ಟೌನ್, ಶ್ರೀ ಗಿರೀಶ್ ಕುಮಾರ್ ಬಿನ್.ವೀರಣ್ಣ, ಸಿದ್ಧನಾಯ್ಕ ಸರ್ಕಲ್ ಹಿರಿಯೂರು ಟೌನ್, ಅಜೀಂ ಪಾಷಾ ಬಿನ್.ಮಹಮದ್ ಹಯಾತ್ ಮಿರ್ಜಾಮಿರ್ಜಾ ಬಡಾವಣೆ ಹಿರಿಯೂರು, ಇವರುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ರವರು ಸರ್ಕಾರದಿಂದ ನಾಮನಿರ್ದೇಶನ ಮಾಡಿಸಿದ್ದಾರೆ.
ಹಿರಿಯೂರು ನಗರಸಭೆಗೆ ನೂತನವಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಎಲ್ಲಾ ಸದಸ್ಯರುಗಳಿಗೆ ಅವರು ನಗರಸಭೆ ವತಿಯಿಂದ ನಗರದ ನಾಗರಕರೀಕರಿಗೆ ಉತ್ತಮ ಕೆಲಸ-ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ಸೇವೆ ಸಲ್ಲಿಸಲಿ ಎಂಬುದಾಗಿ “ಹಿರಿಯೂರು ನ್ಯೂಸ್” ತಂಡದ ವತಿಯಿಂದ ಪತ್ರಕರ್ತರುಗಳಾದ ಆಲೂರುಹನುಮಂತರಾಯಪ್ಪ ಹಾಗೂ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್, ಪರಮೇಶ್ವರಪ್ಪ, ವೆಂಕಟೇಶ್, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ ಇವರುಗಳು ಅಭಿನಂದಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *