ಹಿರಿಯೂರಿನಲ್ಲಿ ಗೋವು ಕಳ್ಳರ ಕೈಚಳಕ.
ನಗರದಲ್ಲಿ ಗೋವು ಕಳ್ಳತನ ಮಾಡಿ ಸಾಗಣಿಕೆ: ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್.
ಹಿರಿಯೂರಿನ ಚರ್ಚ್ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ಗೋವು ಕಳ್ಳರು ಗೋವುಗಳನ್ನು ಹಿಡಿದು ಟೆಂಪೋದಲ್ಲಿ ತುಂಬಿಕೊಂಡು ಹೋದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯಾರು ಇಲ್ಲದ ವೇಳೆ ಬಂದಿದ್ದ ಕಳ್ಳರು ಗೋವುಗಳನ್ನು ಟೆಂಪಲ್ ಓಡಿಸಿಕೊಂಡು ಬಂದು ನಾಲ್ಕೈದು ಜನರು ಟೆಂಪೋ ಒಳಗೆ ಎತ್ತಿ ಹಾಕಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಬಿಜೆಪಿ ಸರ್ಕಾರವು ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಸಾಗಟವನ್ನು ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಕಳ್ಳರು ಗೋವುಗಳನ್ನು ರಾತ್ರಿ ವೇಳೆಯಲ್ಲಿ ಕದ್ದು ಒಯ್ಯುತ್ತಿದ್ದಾರೆ. ಸೂಕ್ತ ಕ್ರಮ ವಹಿಸುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಇಂತಹ ಘಟನೆಯು ಹಿರಿಯೂರು ನಗರ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.
0 Comments