ಹಿಂಗಾರು ಹಂಗಾಮಿನಲ್ಲಿ ಬಿತ್ತಮಾಡಿದ ಬೆಳೆಗಳಿಗೆ ಡಿ.15ರೊಳಗೆ ಬೆಳೆ ವಿಮೆ ಕಟ್ಟುವಂತೆ ರೈತರಿಗೆ ಸಹಾಯಕ ಕೃಷಿ ನಿರ್ಧೇಶಕ ಡಾ.ಅಶೋಕ್ ತಿಳಿಸಿದ್ದಾರೆ.
by ಗೋಪನಹಳ್ಳಿಶಿವಣ್ಣ | 01/12/23 | ಕೃಷಿ
ಚಳ್ಳಕೆರೆ ಡಿ.1 ಹಿಂಗಾರು ಹಂಗಾಮಿನಲ್ಲಿ ಬಿತ್ತಮಾಡಿದ ಬೆಳೆಗಳಿ ಡಿ.15ರೊಳಗೆ ಬೆಳೆ ವಿಮೆ ಕಟ್ಟುವಂತೆ ರೈತರಿಗೆ ಸಹಾಯಕ ಕೃಷಿ ನಿರ್ಧೇಶಕ ಡಾ.ಅಶೋಕ್ ತಿಳಿಸಿದ್ದಾರೆ. ಒಂದೆಡೆ ಬರ ಪರಿಸ್ಥಿತಿ ಕಾಡುತ್ತಿದೆ. ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆಯಾಗದ ಕಾರಣ ಹಿಂಗಾರಿನಲ್ಲಿ ಕಡೆಲೆ.ಜೋಳ ಬಿತ್ತನೆ ಮಾಡಿದ್ದಾರೆ ಹೀಗಾಗಿ ರೈತರು ಬರಗಾಲ ಪರಿಣಾಮ ಸಂಭವನೀಯ ನಷ್ಟದಿಂದ ಪಾರಾಗಲು ಅನುಕೂಲವಾಗುವಂತೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮಂಜೂರಾತಿ ನೀಡಿದೆ. ಚಳ್ಳಕೆರೆ ತಾಲೂಕಿನಲ್ಲಿ ಕಪ್ಪು ಮಿಶ್ರಿತ ಭೂಮಿಯಲ್ಲಿ ಕಡಲೆ 4850 ಹೆಕ್ಟೇರ್ ಬಿತ್ತನೆ ಗುರಿಯಾಗಿದ್ದು ಅಕಾಲಿಕ ಮಳೆ ತಡವಾಗಿ ಬಂದ ಕಾರಣ2775 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಈಗ ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ಕಡಲೆ ಈಗ ತಾನೆ ಮೊಳಕೆ ಹೊಡೆಯುತ್ತಿದ್ದು ಕಡಲೆ ಬಿತ್ತನೆ ಮಾಡಿದ ರೈತರಿಗೆ ಇದು ಸುವರ್ಣವಕಾಶವಾಗಿರುವುದರಿಂದ ಕಡಲೆ.ಜೋಳ ಬಿತ್ತನೆ ಮಾಡಿದ ರೈತರು ನಿಗಧಿತ ದಿನಾಂಕದೊಳಗೆ ಬೆಳೆ ವಿಮೆ ಕಟ್ಟಿ ಕೃಷಿ ಇಲಾಖೆವತಿಯಿಂದ ಪ್ರತಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಬೆಳೆ ವಿಮೆ ಬಗ್ಗೆ ಮಾಹಿತಿ ಇರುವ ಕರಪತ್ರಗಳನ್ನು ಹಂಚಲಾಗಿದ್ದು ರೈತರು ಬೆಳೆ ವಿಮೆ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಎಲ್ಲಿ ಬೆಳೆ ವಿಮೆ ಮಾಡಿಸಬಹುದು?
ಬ್ಯಾಂಕ್ಗಳು, ಸಾಮಾಜಿಕ ಸೇವಾ ಕೇಂದ್ರಗಳು (ಸಿಎಸ್ಸಿ ಸೆಂಟರ್), ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿನಿಗದಿತ ಸಮಯ ದೊಳಗೆ ರೈತರು ವಿಮಾ ಕಂತು ಪಾವತಿಸಿ ಬೆಳೆ ವಿಮೆಗೆ ಪ್ರಸ್ತಾವನೆ ಸಲ್ಲಿಸಿ, ನೋಂದಣಿ ಮಾಡಿಸಿಕೊಳ್ಳಬಹುದು. ಬೆಳೆ ವಿಮೆಗೆ ನೋಂದಾಯಿಸಲು ಎಫ್ಐಡಿ (ಫಾರ್ಮರ್ ರಿಜಿಸ್ಪ್ರೇಷನ್ ಅಂಡ್ ಯುನಿಫೈಡ್ ಬೆನಿಫಿಷಿಯರಿ ಇನ್ಪರ್ಮೇಷನ್ ಸಿಸ್ಟಮ್) ಸಂಖ್ಯೆ ಹೊಂದಿರುವುದು ಕಡ್ಡಾಯ. ಒಂದು ವೇಳೆ ಎಫ್ಐಡಿ ಸಂಖ್ಯೆ ಹೊಂದಿರದಿದ್ದಲ್ಲಿ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಮತ್ತು ತೋಟಗಾರಿಕೆ ಇಲಾಖೆಯಲ್ಲಿಆಧಾರ್ ಸಂಖ್ಯೆ ಮತ್ತು ಆರ್ಟಿಸಿ ವಿವರಗಳನ್ನು ಸಲ್ಲಿಸಿ ಎಫ್ಐಡಿ ಸಂಖ್ಯೆ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments