ಹಿರಿಯೂರು :
ಕಸವನಹಳ್ಳಿ ಮೂಲದ ಶ್ರೀನಾಥ್ ರಂಗಸ್ವಾಮಿ ಸದ್ಯ ಅಮೇರಿಕಾದ ಅಟ್ಲಾಂಟಾದಲ್ಲಿ ವೃತ್ತಿ ಮಾಡುತ್ತಿದ್ದು, ಮಾತೃ ಭೂಮಿಯ ಸೆಳೆತಕ್ಕೆ ಒಳಗಾಗಿ ಪದೇ ಪದೇ ಭಾರತಕ್ಕೆ ಬಂದಾಗ ಕಸವನಹಳ್ಳಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಚಾಕ್ಲೇಟ್, ಪೆನ್ನು, ಆಟದ ಸಾಮಾನುಗಳು, ಪೋಸ್ಟರ್, ಪುಸ್ತಕಗಳು, ಅಲ್ಲದೆ ಶಿಕ್ಷಕರುಗಳಿಗೆ ವಾಚ್ ಗಳನ್ನೂ ಕೊಡುಗೆಯಾಗಿ ನೀಡುತ್ತಿದ್ದಾರೆ, ನಿಜಕ್ಕೂ ಇದು ಸ್ವದೇಶಿ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್ ಹೇಳಿದರು.
ತಾಲ್ಲೂಕಿನ ಕಸವನಹಳ್ಳಿ ಶಾಲೆಗೆ ಭೇಟಿ ನೀಡಿ, ಶಾಲೆಯ ವಿದ್ಯಾರ್ಥಿಗಳಿಗೆ ಚಾಕ್ಲೇಟ್, ಪೆನ್ನು, ಸೇರಿದಂತೆ ಅನೇಕ ಆಟದ ಸಾಮಾನುಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿದ ಶ್ರೀನಾಥ್ ರಂಗಸ್ವಾಮಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ನಂತರ ಅವರು ಮಾತನಾಡಿದರು.
ಕಸವನಹಳ್ಳಿ ಶಾಲೆಗೆ ಭೇಟಿ ನೀಡಿದ ಶ್ರೀನಾಥ್ ರಂಗಸ್ವಾಮಿರವರು ಮಾತನಾಡಿ, ಈ ಶಾಲೆಯಲ್ಲಿ ನನಗೆ ವಿದ್ಯೆ ಕಲಿಸಿದ ಶಿಕ್ಷಕರು, ಆ ಬಾಲ್ಯದಲ್ಲಿ ನನ್ನ ಜೊತೆ ಆಡಿದ ಸ್ನೇಹಿತರು ,ಈ ಹಳ್ಳಿಯಲ್ಲಿ ನನ್ನ ಆ ಬಾಲ್ಯದ ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ, ಅದಕ್ಕಾಗಿ ನಾನು ಆಗಾಗ ಇಲ್ಲಿಗೆ ಬಂದುಹೋಗುತ್ತೇನೆ .ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀನಾಥ್ ರಂಗಸ್ವಾಮಿ ಅವರ ಪತ್ನಿ ಸುಮನ್ ಶ್ರೀನಾಥ್, ಮುಖ್ಯ ಶಿಕ್ಷಕ ರಂಗನಾಥ್, ಸಹ ಶಿಕ್ಷಕ ಬಸವರಾಜ್, ಅಂಗನವಾಡಿ ಕಾರ್ಯಕರ್ತೆ ಮಹಾಲಕ್ಷ್ಮಿ, ನಂದಿನಿ,ಎಸ್. ಡಿ.ಎಂ.ಸಿ.ಅಧ್ಯಕ್ಷ. ಮಂಜುನಾಥ್, ರಂಗಪ್ಪ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments