ಜಗಳೂರು ಡಿ.19 ಹಳೆ ವೈಶಮ್ಯದ ಹಿನ್ನೆಲೆ ವ್ಯಕ್ತಿಯೊಬ್ಬ ತಂದೆ ಮತ್ತು ಮಗನಿಗೆ ಚಾಕುವಿನಿಂದ ಇರಿತ.ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಘಟನೆ.
ಗೌರಿಪುರ ಗ್ರಾಮದ ಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್ ಗಾಯಗೊಂಡವರು.
ಹಾಲಸ್ವಾಮಿ ಚಾಕುವಿನಿಂದ ಇರಿದ ವ್ಯಕ್ತಿ.
ಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್ ಜಿಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲು.
ಹಾಲಸ್ವಾಮಿ ಕೂಡ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಆಸ್ಪತ್ರೆಯಲ್ಲಿ ದಾಖಲು.
ಘಟನೆ ಹಿನ್ನೆಲೆ:
ಕಳೆದ ವರ್ಷ ಕ್ಯಾಸೆನಹಳ್ಳಿ ಗ್ರಾಪಂನಲ್ಲಿ ನರೇಗಾ ಕಾಮಗಾರಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಹೊಸಕೆರೆ ಗ್ರಾಮದ ಮಾಯಮ್ಮ ಡಾಬಾದಲ್ಲಿ ರಾಮಕೃಷ್ಣ ಎಂಬ ಯುವಕನ ಕೊಲೆಯಾಗಿತ್ತು.
ಪ್ರಕರಣದ ಆರೋಪಿಗಳಾದ ಪಿಡಿಒ ಎ.ಟಿ.ನಾಗರಾಜ್ ಹಾಗೂ ಅವರ ಸಹೋದರ ಎ.ಟಿ.ಪ್ರಭು ಮತ್ತು ಧನ್ಯಕುಮಾರ್ ಸೇರಿ ಅನೇಕರ ವಿರುದ್ದ ಕೇಸ್ ದಾಖಲಿಸಲಾಗಿತ್ತು.
ಕೊಲೆ ಪ್ರಕರಣ ಆರೋಪ ಹೊತ್ತಿರುವ ಧನ್ಯಕುಮಾರ್ಗೆ ಜಮೀನು ನೀಡಲು ಸಹಕಾರ ನೀಡುತ್ತಿದ್ದೀರಿ ಎಂದು ಅನುಮಾಸಿ ಕೊಲೆಯಾದ ರಾಮಕೃಷ್ಣ ಸಹೋದರ ಹಾಲಸ್ವಾಮಿ ಡಿ.೧೮ರ ಸೋಮವಾರ ರಾತ್ರಿ ಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್ ಜತೆಗೆ ಜಗಳ ತೆಗೆದಿದ್ದಾನೆ.
ಅಷ್ಟೇ ಅಲ್ಲ ಬುಧವಾರ ಬೆಳಿಗ್ಗೆ ಚಂದ್ರಪ್ಪ ಅವರ ಮನೆ ಬಳಿ ಬಂದು ಚಾಕುವಿನಿಂದ ತಂದೆ ಮತ್ತು ಮಗನ ಬೆನ್ನು ಮತ್ತು ಎದೆಗೆ ಇರಿದಿದ್ದಾನೆ.
ಆಗ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಬಡಿಗೆಗಳನ್ನು ಹಿಡಿದು ಬೆನ್ನು ಹತ್ತಿದ ಚಂದ್ರಪ್ಪ ಮತ್ತು ಹೇಮಂತ್, ಅವರಿಂದ ತಪ್ಪಿಸಿಕೊಳ್ಳಲು ಹೋದ ಹಾಲಸ್ವಾಮಿ ನಿಂತಿದ್ದ ಟ್ರ್ಯಾಕ್ಟರ್ ಅಡಿ ನುಗ್ಗುವಾಗ ಕಬ್ಬಿಣ ತಲೆಗೆ ಬಡಿದು ಬಲವಾದ ಪೆಟ್ಟು ಬಿದ್ದಿದ್ದು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇತ್ತ ಹಾಲಸ್ವಾಮಿಯಿಂದ ಚಾಕು ಇರಿತಕ್ಕೆ ಒಳಗಾದ ಚಂದ್ರಪ್ಪ ಮತ್ತು ಹೇಮಂತ್ಗೆ ಎದೆ ಮತ್ತು ಬೆನ್ನಿಗೆ ಬಲವಾದ ಇರಿತಗಳಾಗಿದ್ದು, ದಾವಣಗೆರೆಯ ಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿವೆ.
ಪಿಐ ಎಂ.ಶ್ರೀನಿವಾಸ್, ಪಿಎಸ್ಐ ಎಸ್.ಡಿ.ಸಾಗರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಸಂಬAಧ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗೌರಿಪುರ ಗ್ರಾಮದಲ್ಲಿ ರಿಸರ್ವ್ ಪೋಲಿಸರನ್ನು ನಿಯೋಜನೆ ಮಾಡಲಾಗಿದೆ.
0 Comments