ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮದಲ್ಲಿ ಜಾತ್ರೆಗೆ ತಂದಿದ್ದ ದೇವರ ಕೋಣ ತಿವಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಮದಕರಿಪುರ ಗ್ರಾಮದ ಕೊಲ್ಲೂರಪ್ಪ(65) ಮೃತಪಟ್ಟವರು. ಗ್ರಾಮ ದೇವತೆ ಕೊಲ್ಲಾಪುರದಮ್ಮ ಜಾತ್ರೆ ನಡೆಯುತ್ತಿದ್ದು, ಸಂಪ್ರದಾಯದಂತೆ ಬುಧವಾರ ಬೆಳಗಿನ ಜಾವ ದೇವಾಲಯದ ಸಮೀಪ ಕಟ್ಟಲು ಕೊಲ್ಲೂರಪ್ಪ ಕೋಣ ಹಿಡಿದುಕೊಂಡು ಬರುವಾಗ ಅವರ ತೊಡೆಯ ಭಾಗಕ್ಕೆ ತಿವಿದಿದೆ.ಕೋಣದ ತಿವಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಕೊಲ್ಲೂರಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಕೆ.ಸಿವೀರೇಂದ್ರಪಪ್ಪಿ ಗ್ರಾಮದ ಜಾತ್ರಾ ಸಂಭ್ರಮದ ಸಂಧರ್ಭದಲ್ಲಿ ಕಣ್ತಪ್ಪಿನಿಂದ ನಡೆದ ಅಹಿತಕರ ಘಟನೆಯಲ್ಲಿ ಮರಣಹೊಂದಿದ ಗ್ರಾಮಸ್ಥರಾದ ಕೋಲಾರಪ್ಪನವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
0 Comments