ಹೊಸದುರ್ಗ ಡಿ.27ದಿನಾಂಕ 22.11.2023 ರಂದು ಹೊಸದುರ್ಗ ಟೌನ್ ಹುಳಿಯಾರು ರಸ್ತೆಯಲ್ಲಿ ಬರುವ ಬ್ಯಾಂಕ್ಅ ಫ್ ಬರೋಡ ಬ್ಯಾಂಕಿನ ಮುಂಭಾಗದಲ್ಲಿ ನಿಂತಿದ್ದ ಕೆಎ-06-ಇನ್-5031 ನೇ ಸ್ವಿಫ್ಟ್ ಕಾರಿನ ಗ್ಲಾಸ್ಅನ್ನು ಹೊಡೆದು ಕಾರಿನ ಒಳಗೆ ಇದ್ದ ಒಟ್ಟು 10 ಲಕ್ಷ ರೂ ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಹೊಸದುರ್ಗ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಒರ್ತೆ ಮಾಡಲು ತಂಡ ರಚನೆ ಮಾಡಲಾಗಿತ್ತು
ಸದರಿ ಪ್ರಕರಣದಲ್ಲಿ ಕಳುವಾದ ಹಣ ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೊಸದುರ್ಗ
ಪೊಲೀಸ್ ನಿರೀಕ್ಷಕರಾದ .ತಿಮ್ಮಣ್ಣ ಎನ್ ಹಾಗೂ ಸಿಬ್ಬಂದಿಯವರನ್ನು ಒಳಗೊಂಡ ತಂಡ ರಚಿಸಿದ್ದು,
ಸದರಿಯವರು ಆರೋಪಿತರ ಪತ್ತೆಯ ಬಗ್ಗೆ ತಾಂತ್ರಿಕ ಸಹಾಯದಿಂದ ಅಂತರರಾಜ್ಯ ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾ ಬಾನಾಲ (41) ಪಡೆದುಕೊಂಡು ವಿಚಾರಣೆ ನಡೆಸಿ
ಆರೋಪಿತನ ಕಡೆಯಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 7,02,000/- ರೂ ನಗದು ಹಣವನ್ನು
ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದಲ್ಲಿನ ಆರೋಪಿತರು ಬ್ಯಾಂಕ್ ಹಾಗೂ ಹಣದ ವಹಿವಾಟು ನಡೆಯುವ ಸ್ಥಳಗಳಲ್ಲಿ
ವಿಶೇಷವಾಗಿ ಬ್ಯಾಂಕ್ಗಳ ಬಳಿ ನಿಗಾ ವಹಿಸಿ 2 ಜನ ಬ್ಯಾಂಕಿನ ಒಳಗಡೆ ಹಾಗೂ 2 ಜನ ಮೋಟಾರ್
ಬೈಕಿನಲ್ಲಿ ಹೊರಗಡೆ ಇದ್ದು, ಇವರು ಬ್ಯಾಂಕಿನಿಂದ ಹೆಚ್ಚಿನ ಹಣವನ್ನು ತರುವ ವ್ಯಕ್ತಿಯನ್ನು ಹಿಂಬಾಲಿಸಿ ಆ
ವ್ಯಕ್ತಿ ಸದರಿ ಹಣವನ್ನು ಕಾರಿನಲ್ಲಿ ಅಥವಾ ಬೈಕಿನಲ್ಲಿ ಇಟ್ಟಾಗ ಇವರೊಂದಿಗೆ ಬಂದ ಇನ್ನೊಬ್ಬ ವ್ಯಕ್ತಿ
ಚಾಟರ್ ಬಿಲ್ ಅಥವಾ ರಬ್ಬರ್ ಬ್ಯಾಂಡ್ ನ ಸಹಾಯದಿಂದ ಕಾರಿನ ಗ್ಲಾಸನ್ನು ಕಲ್ಲಿನಿಂದ ಹೊಡೆದು
ಅಲ್ಲಿದ್ದ ಹಣವನ್ನು ಲಪಟಾಯಿಸುವುದು ಇವರ ವೃತ್ತಿಯಾಗಿರುತ್ತದೆ. ಆರೋಪಿತರು ರೈಲ್ವೆ ಸ್ಟೇಷನ್ ಸುತ್ತ
ಮುತ್ತ ತಮ್ಮ ಮನೆಗಳನ್ನು ಮಾಡಿಕೊಂಡು ಅಕ್ಕಪಕ್ಕ ದವರಿಗೆ ಸಂಶಯ ಬಾರದಂತೆ ತಾವು ರೈಲ್ವೆ
ಕೆಲಸದವರು ಎಂಬಂತೆ ನಂಬಿಕೆ ಬರುವಂತೆ ಮಾಡುತ್ತಾರೆ. ಪೊಲೀಸ್ಆದ್ದರಿಂದ ಚಿತ್ರದುರ್ಗ
ವತಿಯಿಂದ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ ತಾವು ಬ್ಯಾಂಕ್ಗಳಲ್ಲಿ ಹಣ ವಹಿವಾಟು ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು
ಮತ್ತು ಸುರಕ್ಷಿತರಾಗಿರಬೇಕು. ಸದರಿ ಪತ್ತೆ ಕಾರ್ಯ ಮಾಡಿದ ಹೊಸದುರ್ಗ ಪೊಲೀಸರ ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರುಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments