ಚಳ್ಳಕೆರೆ ಜನಧ್ವನಿ ವಾರ್ತೆ ಮಾ.10
ಹಟ್ಟಿ ತಿಪ್ಪೇಶನ ಪುಣ್ಯ ಕ್ಷೇತ್ರದ ರಥೋತ್ಸವ ಜಾತ್ರೆಯಲ್ಲೂ ಅಭಿಮಾನಿಗಳು ಶಾಸಕ ಟಿ.ರಘುಮೂರ್ತಿ ಫೋಟೊ ಪ್ರದರ್ಶನ ಮಾಡುವ ಮೂಲಕ್ಕೆ ಮೊತ್ತೊಮ್ಮೆ ಟಿ.ರಘೂರ್ತಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ರಥೋತ್ಸವಕ್ಕೆ ಎಸೆದಿರುವುದು ಕಂಡು ಬಂದಿದೆ.
ಕರ್ನಾಟಕದ ಯಾವುದೇ ಮೂಲೆಯಲ್ಲಿ ಜಾತ್ರೆ ಹಬ್ಬ,ಉತ್ಸವಗಳು ನಡೆದರೆ ದಿ. ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ರವರ ಭಾವ ಪ್ರದರ್ಶನ ಮಾಡುವ ಮೂಲಕ ಕುಣಿದು ಕುಪ್ಪಳಿದ ದೃಶ್ಯಗಳನ್ನು ಕಾಣ ಬಹುದು ಆದರೆ ಶುಕ್ರವಾರ ನಾಯಕನಹಟ್ಟಿ ಶ್ರೀ ಗುರು ಹಟ್ಟಿ ತಿಪ್ಪೇಶನ ಜಾತ್ರೆಯಲ್ಲಿ ಅಭಿಮಾನಿಗಳು ಶಾಸಕ ಟಿ.ರಘುಮೂರ್ತಿಯವರು ಭಾವ ಚಿತ್ರದೊಂದಿಗೆ ಕುಣಿದು ಕುಪ್ಪಳಿಸಿ ಮತ್ತೊಮ್ಮೆ ಶಾಸಕ ಟಿ.ರಘುಮೂರ್ತಿ ಎಂದು ಘೋಷಣೆಗಳನ್ನು ಕೂಗಿದರೆ.
ಇತ್ತ ಭಕ್ತರು ಬಾಳೆ ಹಣ್ಣಿನ ಮೇಲೆ ಮತ್ತೊಮ್ಮೆ ಶಾಸಕ ಟಿ.ರಘುಮೂರ್ತಿ ಎಂದು ಬರೆದು ಹಟ್ಟಿ ತಿಪ್ಪೇಶನ ತೇರಿಗೆ ಎಸೆಯುವ ಮೂಲಕ ಹರಕೆ ಮಾಡಿಕೊಂಡಿದ್ದಾರೆ.
0 Comments