ದೇಶದ ಬೆನ್ನೆಲುಬು ರೈತ ಅನ್ನದಾತ ಮದು ಹೇಳುವವರೇ ಒಮ್ಮೆ ಈ ರೈತರ ಜಮೀಗೆ ಭೇಟಿ ನೀಡಿ ನೋಡಿ
ಚಳ್ಳಕೆರೆ ಫೆ.3 ನಗರ ಪ್ರದೇಶದಲ್ಲಿ ಹಂದಿಗಳ ಸಾಕಂದಿಗಳ ಹಾವಳಿ ಹೆಚ್ಚಾಗಿದ್ದು ನಗರಕ್ಕೆ ಹೊಂದಿಕೊಂಡ ಹೈರಾಣಾಗುತ್ತಿದ್ದಾರೆ.
ಈಗಾಗಲೆ ರೈತರು ಹಿಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದಾಗಿನಿಂದ ಮಳೆ ಕೊರತೆ, ಅತಿವೃಷ್ಟಿ, ಕೀಟಬಾಧೆ, ಇಳುವರಿ ಕುಂಠಿತ, ಬೆಲೆ ಕುಸಿತ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದಾನೆ. ನಗರಕ್ಕೆ ಹೊಂದಿಕೊಂಡ ನೀರಾವರಿ ಆಶ್ರಿತ ಬೆಳೆಗಳಿಗೆ ಹಂದಿಗಳ ಹಾವಳಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ನಗರಂಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ರೋಜ ಹೋಟೆಲ್ ಹಿಂಭಾಗದಲ್ಲಿ ರೈತರು ಬೆಳೆದ ಮೆಕ್ಕೆಜೋಳದ ಜಮೀನುಗಳಿಗೆ ನಗರದ ಸಾಕಂದಿಗಳು ನುಗ್ಗೆ ಬೆಳೆಯನ್ನು ಹಾಳುಮಾಡಿವೆ ಇದೇನು ಹೊಸತಲ್ಲ ಕಳೆದ ಸುಮಾರು 6 ತಿಂಗಳ ಹಿಂದೆಯೂ ರೈತರ ಬೆಳೆಗಳನ್ನು ಹಾಳು ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಿದಾ ಕೃಷಿ ಅಧಿಲಾರಿಗಳು ಹಾಗೂ ಗ್ರಾಪಂ ಸದಸ್ಯ ಪಿಡಿಒ ಜಮೀನಿಗೆ ಭೇಟಿ ನೀಡಿ ಹೋದರೂ ಸಹ ಯಾವುದೇ ಕ್ರಮ ಜರುಗಿಲ್ಲ ರೈತರೇ ಹಂದಿ ಮಾಲಿಕರ ಮನಡಗೆ ಹೋಗಿ ಹೆಡಳಿದರೆ ರೈತರ ಮೇಲೆ ದೌರ್ಜನ್ಯ ಮಾಡಲು ಮುಂದಾಗಿತ್ತಾರೆ ನಾವು ಸಾಲ ಸೂಲ ಮಾಡಿ ಬೆಳೆದ ಬೆಳೆಗಳಿಗೆ ಹಂದಿಗಳು ದಾಳಿ ಮಾಡುತ್ತವೆ ಹಗಲು ರಾತ್ರಿ ನಿದ್ರೆಗೆಟ್ಟು ಹಂದಿಗಳನ್ನು ಕಾದು ನಮ್ಮ ಆರೋಗ್ಯದ ಮೇಲು ಪರಿಣಾಮ ಬೀರಿದೆ. ಕಷ್ಟ ಪಟ್ಟು ಬೆಳೆದ ಬೆಳಡಗಳು ಹಂದಿಗಳ ಪಾಲಾದರೆ ನಷ್ಟ ತುಂಬುವರು ಯಾರು ಇದರಿಂದ ನಮಗೆ ವಿಷಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ರೈತ ಮಹಿಳೆ ಗಂಗಮ್ಮ ಮಾತನಾಡಿ ತಮ್ಮ ಹೊಲದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಗೋವಿನಜೋಳ ಇನ್ನೇನೂ ಫಲ ಕೊಡುವ ಹಂತಕ್ಕೆ ಬಂದಿತ್ತು. ಆದರೆ, ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನ ಹಂದಿಗಳು ರಾತ್ರೋರಾತ್ರಿ ತಿಂದು ಹಾಳು ಮಾಡಿವೆ. ಇದರಿಂದ ರೈತ ಸಂಕಷ್ಟಕೀಡಾಗಿದ್ದಾನೆ ಪೋಲಿಸ್ ಇಲಾಖೆ ಮಾಹಿತಿ ನೀಡಿದರೂ ಬರುತ್ತೇವೆ ಎಂದುಹೇಳಿದರೂ ಯಾರೂ ಬಂದಿಲ್ಲ ನಮ್ಮ ಕಷ್ಟ ಯಾರಿಗೇಳಲಿ ಎಂಬಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಗರದಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಬೆಳೆದು ನಿಂತ ಅಳಿದುಳಿದ ಬೆಳೆ ಸಂರಕ್ಷಿಸಿಕೊಳ್ಳಲು ರೈತರು ಹಗಲು ರಾತ್ರಿ ಹಂದಿ ಕಾಯುವ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು. ರೈತರ ಹೊಲದಲ್ಲಿರುವ ಬೆಳೆ ನಾಶ ಮಾಡುತ್ತಿರುವ ಹಂದಿಗಳಿಂದ ಮುಕ್ತಿ ನೀಡಬೇಕೆಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಜನಸ್ಪಂದನಾ ಕಾರ್ಯಕ್ರಕ್ಕೂ ಅರ್ಜಿನೀಡಿದರೂ ಇದುವರೆಗೂ ರೈತರ ಮನವಿ ಸ್ಪಂದನೆ ಸಿಕ್ಕಿಲ್ಲ.
0 Comments