ನಾಯಕನಹಟ್ಟಿ :: ಏ.7.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ವರದನವಾಗಲಿದೆ ಎಂದು ಕೊರಡಿಹಳ್ಳಿ ಗ್ರಾಮದ ಮುಖಂಡ ಆನಂದಪ್ಪ ಹೇಳಿದ್ದಾರೆ.
ಅವರು ಭಾನುವಾರ ಹೋಬಳಿಯ ತೊರೆಕೊಲಮ್ಮನಹಳ್ಳಿಯಲ್ಲಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ರವರ ಜನ್ಮದಿನಾಚರಣೆ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಭೀಮ ಫೌಂಡೇಶನ್ ತೊರೆಕೋಲಮ್ಮನಹಳ್ಳಿ ಮತ್ತು ಮಾದಿಗ ಸೇವಾ ಟ್ರಸ್ಟ್ ನಾಯಕನಹಟ್ಟಿ ಹೋಬಳಿ ವತಿಯಿಂದ. ತೊರೆಕೋಲಮ್ಮನಹಳ್ಳಿ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜನೆ ಮಾಡಲಾಗಿದ್ದು.
ಈ ಸ್ಪರ್ಧಾತ್ಮಕ ಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಒಬ್ಬ ವ್ಯಕ್ತಿ ಉತ್ತಮ ಶಿಕ್ಷಣ ಪಡೆಯುವುದರಿಂದ ಸಮಾಜದಲ್ಲಿ ಗೌರವ ಹಾಗೂ ಮನ್ನಣೆಗೆ ಪಾತ್ರರಾಗುತ್ತಾರೆ ಪೋಷಕರು ಮತ್ತು ಶಿಕ್ಷಕರ ಪರಿಶ್ರಮದಿಂದ ಮಕ್ಕಳ ಭವಿಷ್ಯವನ್ನು ರೂಪಿಸಬಹುದು ಎಂದರು.
ಗುಂತಕೋಲಮ್ಮನಹಳ್ಳಿ ಶಿಕ್ಷಕ ಜಿ ಎಂ ಜಯಣ್ಣ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ.
ಇಂದು ಪ್ರಥಮವಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು 51 ಜನ ಯುವಕ ಯುವತಿಯರು ಬರೆಯುತ್ತಿದ್ದಾರೆ.
ದೇಶದ ಬೆನ್ನೆಲುಬು ಯುವಶಕ್ತಿ. ಯುವಕರು ತಮ್ಮ ಜವಾಬ್ದಾರಿಯನ್ನು ಅರಿತು ತಮಗೆ ಕೊಟ್ಟ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿಷ್ಠೆಯಿಂದ ಮಾಡಿ ದೇಶ ಹಾಗೂ ಸಮಾಜ ಕಟ್ಟಲು ಮುಂದೆ ಬರಬೇಕು.
ಗ್ರಾಮೀಣ ಯುವಕ- ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆದು ಪೂರ್ವ ತಯಾರಿಯೊಂದಿಗೆ ಗುರಿ ಸಾಧಿಸಲು ಪಣತೊಡಬೇಕು ಎಂದರು.
ಈಸಂದರ್ಭದಲ್ಲಿ ಗುಂತುಕೋಲಮ್ಮನಹಳ್ಳಿ ಜಿ ಎಂ ಜಯಣ್ಣ, ಎನ್ ದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಟಿ ರಾಜಣ್ಣ. ಆರ್ ಬಸಪ್ಪ ಉಪಾಧ್ಯಕ್ಷರು ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ, ಮಾರಕ್ಕ, ಚೌಡಪ್ಪ, ಗಾದ್ರಪ್ಪ ,
ಭೀಮ ಫೌಂಡೇಶನ್ ತೊರೆಕೋಲಮ್ಮನಹಳ್ಳಿ ಅಧ್ಯಕ್ಷರಾದ ತಿಮ್ಮಶೆಟ್ಟಪ್ಪ.ವಿ ಉಪಾಧ್ಯಕ್ಷರು ಎಚ್ ಕುಮಾರ್. ಕಾರ್ಯದರ್ಶಿ ಬಿ ನಾಗೇಶ್. ಸಂಚಾಲಕರು ಈ ಮಧು, ಖಜಾಂಚಿ ಈ ವೆಂಕಟೇಶ್. ಸದಸ್ಯರಾದ ಟಿ ಮಧು, ಎಂ ನಾಗೇಶ್, ಟಿ ನವೀನ್, ಟಿ ಬಸವರಾಜ್ ಟಿ ದುರುಗೇಶ್. ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು
0 Comments