ಚಳ್ಳಕೆರೆ ಜನಧ್ವನಿ ವಾರ್ತೆ ಮಾ.17
ಸ್ಥಳಿಯ ಹಾಗೂ ವಯೋನಿವೃತ್ತಿ ಹೊಂದಿದ ಅಧಿಕಾರಿ ಪ್ರಭಲ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಯಾದ ಜಯರಾಂಇವರಿಗೆ ಟಿಕೇಟ್ ನೀಡುವಂತೆ ತಾಪಂ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಡಿ.ಉಪ್ಪಾರಹಟ್ಟಿ ಅಜ್ಜಣ್ಣ ಮನವಿ ಮಾಡಿಕೊಂಡಿದ್ದಾರೆ.
ನಗರದ ಮಹದೇವಿ ರಸ್ತೆಯಲ್ಲಿರುವ ಬಿಜೆಪಿ ಟಿಕೇಟ್ ಆಕಾಂಕ್ಷಿ ಜಯರಾಂ ಕಚೆರಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಷೋ ಮುನ್ನ ಪಕ್ಷದ ಕಾರ್ಯಕರ್ತರಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಯರಾಂ ಇವರು ಸರಕಾರಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸು ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿ ಪ್ರದಾನಿ ಮೋದಿಯವರ ಉತ್ತಮ ಆಡಳೀತ ಹಾಗೂ ಜನ ಪರ ಯೋಜನೆ, ಪಕ್ಷದ ಸಿದ್ದಾಂತವನ್ನು ಮೆಚ್ಚಿ ಸರಕಾರಿ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಅಕಾಡಕ್ಕೆ ಇಳಿದಿದ್ದು ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರಾಗಿದ್ದು ಈಗಾಗಲೆ ಕ್ಷೇತ್ರದಲ್ಲಿಎರಡು ಬಾರೀಗೂ ಹೆಚ್ಚು ಪ್ರವಾಸ ಮಾಡಿ ಮತದಾರರನ್ನು ಭೇಟಿ ಯಾಗುವುದ ಮೂಲಕ ಜನರಲ್ಲಿ ಚಿರಪರಿಚಿತರಾಗಿದ್ದಾರೆ ಇವರಿಗೆ ಬಿಜೆಪಿ ಪಕ್ಷದವತಿಯಿಂದ ಟಿಕೇಟ್ ನೀಡಿದರು ಗೆಲವುದು ಖಚಿತ ಎಂದು ತಿಳಿಸಿದರು.
ಬಿಜೆಪಿ ಟಿಕೇಟ್ ಆಕಾಂಕ್ಷಿ ಎಂ.ಎಸ್.ಜಯರಾಂಮಾತನಾಡಿ ಚಳ್ಳಕೆರೆ ಎಸ್ಟಿ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದರೆ 40ಸಾವಿರ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಿ ಪಡೆಸಿದರು.
ನಾನು ಉಪನ್ಯಾಸಕನಾಗಿ ,ಉನ್ನತ ಉದ್ದೆ ಅಲಂಕರಿಸಿ ಜನ ಸೇವೆ ಮಾಡುವ ಉದ್ದೇಶದಿಂದ ನಾನು 2019ರಲ್ಲಿ ಸರಕಾರಿ ನೌಕರಿಗೆ ಸ್ವಯಂ ನಿವೃತ್ತಿ ಪಡೆದು ಪ್ರದಾನಿ ನರೇಂದ್ರಮೋದಿ ಆಡಳಿತ ಹಾಗೂ ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸರ್ಪಡೆಯಾಗಿ ಕಳೆದು ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಬಿಜೆಪಿ ಪಕ್ಷ ಸಂಘಟನೆ ಮಾಡಿಕೊಂಡು ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಮತದಾರರಿಗೆ ಅರಿವು ಮೂಡಿಸುತ್ತಾ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ.
ನಾನೂ ಸ್ಥಳಿಯವಾಗಿದ್ದು ನನ್ನ ಖಾಯಂ ಮತಗಳು 15ಸಾವಿರಕ್ಕೂ ಹೆಚ್ಚು ಇದ್ದು ಪ್ರತಿಯೊಂದು ಸಮುದಾಯದವರು ನನಗೆ ಬೆಂಬಲ ಸೂಚಿಸುತ್ತಿದ್ದಾರೆ, ಬಿಜೆಪಿ ತತ್ವ ಸಿದ್ದಾಂತದAತೆ ನಾನು ಪಕ್ಷದಕ್ಕೆ ದುಡಿಯುತ್ತಿದ್ದೇನೆ ನನಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡುವ ಭರವಸೆ ಇದೆ ಆದ್ದರಿಂದ ಈಗಾಗಲೆ ಕ್ಷೇತ್ರದಲ್ಲಿ ಮುರು ಬಾರಿ ಮತದಾರರನ್ನು ಭೇಟಿಯಾಗಿದ್ದೇನೆ, ಸಾರ್ವಜನಿಕರಿಗೆ ಹಾಗೂ ಮತದಾರರಿಗೆ ಕಿರಿ ಕಿರಿ ಮಾಡದೆ ಕೆಲವೇ ಕಾರ್ಯಕರ್ತರೊದಂದಿಗೆ ಸರಳವಾಗಿ ಎಲೆಮರೆಕಾಯಿಯಂತೆ ಪ್ರಚಾರ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಉಪ್ಪಾರ ಸಂಘದ ಮಾಜಿ ತಾಲೂಕು ಅಧ್ಯಕ್ಷ ವೈ.ಯಲ್ಲಪ್ಪ ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments