ಚಳ್ಳಕೆರೆ ಜನ ಧ್ವನಿವಾರ್ತೆಫೆ.17 ದೇಶದ ಬಂಜಾರ ಸಮುದಾಯದ ಏಕೈಕ ಸಂತ ಸೇವಾಲಾಲ್ ಅವರ 284 ನೇಜಯಂತ್ಯೋತ್ಸವ ಫೆ. 26 ರಂದು ಬಿಸಿನೀರು ಮುದ್ದಪ್ಪ ಸರಕಾರ ಪ್ರೌಢಶಾಲೆಯ ಆವರಣದ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಬಂಜಾರ ಸಮುದಾಯದ ಮುಖಂಡೆ ಗೀತಾ ಬಾಯಿ ಹಾಗೂ ಮಗ ಗುತ್ತಿಗೆದಾರ ಸುನಿಲ್ ಮನವಿ ಮಾಡಿಕೊಂಡಿದ್ದಾರೆ.ಶ್ರೀಸಂತಾಸೇವಾಲಾಲ್ ಜಯಂತಿಗೆ ಬರುವ ಗಣ್ಯರಿಗೆ ಹಾಗೂ ಸಮತ್ತ ನಾಗರೀಕರಿಗೆ ಶುಭಕೋರಿದ್ದಾರೆ.
ಈ ಸಂತರ ಬಗ್ಗೆ ಅನೇಕ ಐತಿಹ್ಯಗಳಿವೆ. 1739ರಲ್ಲಿ ನ್ಯಾಮತಿ ತಾಲ್ಲೂಕಿನ (ಹಿಂದೆ ಹೊನ್ನಾಳಿ) ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಮಾತೆ ದಂಪತಿಯ ಮಗನಾಗಿ ಜನ್ಮತಾಳಿದ ಸಂತ ಸೇವಾಲಾಲ್ ಸೂರಗೊಂಡನಕೊಪ್ಪದಲ್ಲಿ ಅನೇಕ ಪವಾಡಗಳನ್ನು ನಡೆಸಿದ್ದಾರೆ.
ಬಾಲಕನಾಗಿ ಬೆಳೆಯುತ್ತಿದ್ದಾಗ ಚಿನ್ನಿಕಟ್ಟೆ ಸುತ್ತಮುತ್ತ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದಾಗಲೇ ಸಹಪಾಠಿಗಳೊಂದಿಗೆ ಆಟವಾಡುತ್ತ ಪವಾಡಗಳನ್ನು ತೋರುತ್ತಿದ್ದರು. ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಕೆಸರನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ. ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯನ್ನು ಬಂಜಾರರು ಸೇರಿ ಅಲೆಮಾರಿ ಜೀವನ ನಡೆಸುವ ಸಮುದಾಯಗಳನ್ನು ಉದ್ಧರಿಸಲು ಬಳಸಿದ ಸಂತ ಇವರು ಎಂಬ ಕಥೆಗಳು ಚಾಲ್ತಿಯಲ್ಲಿವೆ. ಮಹಾರಾಷ್ಟ್ರದ ಪೌರಾಗಢದಲ್ಲಿ (ಪೌರಾದೇವಿಯ ಸ್ಥಳ) ಸೇವಾಲಾಲರು ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ.
ವಿಷೇಶ
ತಾಲೂಕಿನ ವಿವಿಧ ತಾಂಡಗಳ ಅವಿವಾಹಿತ ಕನ್ಯೆಯರು ದಿನನಿತ್ಯದ ಹಲವು ಜಂಜಾಟಗ ಮಧ್ಯೆಯೂ ಶ್ರೀ ಸಂತಸೇವಾಲಾಲ್, ಮರಿಯಮ್ಮ ದೇವಿಗೆ ಪ್ರಿಯವಾದ ತೀಜ್ ಗೋಧಿ ಬಿತ್ತನೆ ಆಚರಣೆಯ ಸಮಯದಲ್ಲಿ ತಾಂಡಗಳ ಮನೆಗಳಲ್ಲಿ ಯಾರು ಮಾಂಸ ಹಾರ ತಯಾರಿಸುವುದಿಲ್ಲ , ಆಹಾರದಲ್ಲಿ ಉಪ್ಪು, ಹುಳಿ ಸೇವೆನೆ ಮಾಡದೆ ಭಕ್ತಿಯಿಂದ ಬಿದರಿನ ಪುಟ್ಟಿಯಲ್ಲಿ ಗೋದಿ ಸಸಿಯನ್ನು ಬೆಳೆದು ಜಯಂತಿ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಲು ವಿಶೇಷ ತಯಾರಿ ಮಾಡಿದ್ದಾರೆ.
ಶ್ರೀ ಸಂತಸೇವಾಲಾಲ್ ಹಾಗೂ ಮರಿಯಮ್ಮದೇವಿಗೆ ಇಷ್ಟವಾದ ಗೋದಿ ಬೆಳೆಯನ್ನು ಒಂಭತ್ತು ದಿನಗಳು ಶ್ರದ್ದಾ ಭಕ್ತಿಯಿಂದ ಪ್ರತಿದಿನ ಬೆಳಗ್ಗೆ ಉಪವಾಸ ವೃತಾಚಾರಣೆ ಮಾಡಿ ಬಿದಿರಿನ ಬುಟ್ಟಿಗಳಲ್ಲಿ ಗೋಧಿ ಮತ್ತು ನವ ಧಾನ್ಯಗಳನ್ನು ಬಳಸಿ ಕೊನೆಯ ದಿನದಂದು ಹೊಸ ಬಟ್ಟೆಗಳನ್ನು ಧರಿಸಿ ಭಕ್ತಿಯಿಂದ ಸಂವೃದ್ಧಿಯಾಗಿ ಬೆಳೆದ ಗೋಧಿ ಬುಟ್ಟಿಗಳನ್ನು ಪೂಜಿಸಿ ನಂತರ ತಲೆಯ ಮೇಲೆ ಹೊತ್ತು ವಿವಿಧ ರೀತಿಯ ವಾದ್ಯ. ಕರತಾಳಗಳೊಂದಿಗೆ ಗ್ರಾಮದ ಸುತ್ತ ಮೆರವಣಿಗೆ ಮಾಡಿ ನಂತರ ಪೂಜೆ ಸಲ್ಲಿಸಿ ಪ್ರಸಾದದ ರೂಪದಲ್ಲಿ ಗೋಧಿ ಬೆಳೆಯನ್ನು ಎಲ್ಲರಿಗೂ ಹಂಚಿ ಉಳಿದಿದ್ದನ್ನು ಕೆರೆಗೆ ವಿಸರ್ಜನೆ ಮಾಡುತ್ತಾರೆ.
ಬಂಜಾರಸಮುದಾದಮುಖಂಡೆ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಬಾಯಿ ಜನಧ್ವನಿಯೊಂದಿಗೆ ಮಾತನಾಡಿ ತೀಜ್ ಹಬ್ಬ ಆಚರಣೆ ಹಾಗೂ ಶ್ರೀ ಸಂತಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಈ ಪದ್ದತಿಯನ್ನು ರೂಡಿಸಿಕೊಂಡು ಬರಲಾಗುತ್ತಿದೆ. ಬುಟ್ಟಿಯಲ್ಲಿ ಶ್ರದ್ದಾ ಭಕ್ತಿಯಿಂದ ಬೆಳೆದ ಗೋಧಿ ಹಾಗೂ ರಾಗಿ, ಭತ್ತ ನವಣೆ, ಸಜ್ಜೆ, ಉರುಳಿ, ಅವರೆ, ತೊಗರಿ, ಉದ್ದು, ನವಧಾನ್ಯಗಳ ಬೆಳೆ ಸಮೃದ್ದಿಯಾಗಿ ಬಂದರೆ ಆ ವರ್ಷ ಮಳೆ ಬೆಳೆ ಚನ್ನಾಗಿ ಆಗುತ್ತದೆ ಜತೆಗೆ ಅತಿವೃಷ್ಠಿ, ಅನಾವೃಷ್ಠಿ , ಬರಗಾಲ, ರೋಗ ರುಜಿನಗಳು ಬರುವುದಿಲ್ಲ ಎಂಬುದು ತಾಂಡದ ಜನರ ಇಂದಿಗೂ ಮನೆ ಮಾತನಾಡಿದೆ ಎಂದು ತಿಳಿಸಿದರು.
0 Comments