ಚಳ್ಳಕೆರೆ ಜನಧ್ವನಿ ವಾರ್ತೆ ಮಾ 26
ಬಹುದಿನಗಳ ಬೇಡಿಕೆಯಾಗಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಮೂಲಕ ಹಕ್ಕು ಪತ್ರ ವಿತರಣೆ ಭಾಗ್ಯ ಸೋಮವಾರ ತಾಲೂಕು ಕಚೇರಿ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಫಲಾನುಭವಿಗಳಿಗೆ ಶಾಸಕ ಟಿ.ರಘುಮೂರ್ತಿ ಹಕ್ಕು ಪತ್ರ ವಿತರಣೆಗೆ ಚಾಲನೆ ನೀಡಲಿದ್ದಾರೆ ಎಂದು ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.
ಕಂದಾಯ ಗ್ರಾಮಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ವಿತರಣೆಗೆ ಸಿದ್ದವಾಗಿರುವ ಹಕ್ಕು ಪತ್ರಗಳು
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲಂಬಾಣಿ ತಾಂಡ,ಗೊಲ್ಲರಹಟ್ಟಿ, ಬೋವಿ ಕಾಲೋನಿ, ಬುಡಕಟ್ಟು ಸಮುದಾಯ, ಕುರುಬರ ಹಟ್ಟಿ, ಹಾಡಿ, ಸುಮಾರು ೫೦ ಕ್ಕೂ ಹೆಚ್ಚು ಸರಕಾರಿ ಹಾಗೂ ಖಾಸಗಿ ಜನವಸತಿ ಪ್ರದೇಶದದಲ್ಲಿ ವಾಸ ಮಾಡುವ ಮಜರೆ ಗ್ರಾಮಗಳನ್ನು ಗುರುತಿಸಿ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಇಲ್ಲವೇ ಗ್ರಾಮದ ಭಾಗವಾಗಿ ಪರಿವರ್ತಿಸಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸರಕಾರ ಮುಂದಾಗಿದೆ.
ತಾಲೂಕಿನಲ್ಲಿ ಕಸಬಾ, ಪರಶುರಾಂಪುರ, ನಾಯಕನಹಟ್ಟಿ ಹಾಗೂ ತಳಕು ಹೋಬಳಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಕಂದಾಯ ಗ್ರಾಮಗಳ ಸುಮಾರು ೧೬೦೦ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
0 Comments