ಸೋಮವಾರ ಗಂಗಾದೇವತೆಯೊಂದಿಗೆ ಚಳ್ಳಕೆರೆಮ್ಮ ಜಾತ್ರೆಗೆ ಜಾಲನೆ, ಗುರುವಾರ ಸಿಡಿ ಉತ್ಸವ

by | 10/03/24 | ಚರಿತ್ರೆ

ಚಳ್ಳಕೆರೆ ಜನಧ್ವನಿ ವಾರ್ತೆ ಮಾ.10
ಗ್ರಾಮ ದೇವತೆ ಶ್ರೀಚಳ್ಳಕೆರೆಯಮ್ಮನ ದೇವಿಯನ್ನು ತವರು ಮನೆ ದೊಡ್ಡೇರಿ ಗ್ರಾಮಕ್ಕೆ ಗಂಗಾ ಪೂಜೆ ಮಾಡುವುದರೊಂದಿಗೆ ಜಾತ್ರೆಗೆ ಸೋಮವಾರ ಚಾಲನೆ ದೊರೆಯಲಿದೆ.
ಚಳ್ಳಕೇರಮ್ಮ ದೇವಸ್ಥಾನದ ಧರ್ಮದರ್ಶಿಗಳ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ತಳವಾರರು, ಪೋತರಾಜರರು ಗ್ರಾಮದ ಪುರೋಹಿತರು, ಶಾನಭೋಗರ ಸಮ್ಮುಖದಲ್ಲಿ ಶ್ರೀದೇವಿಯ ಮೆರವಣಿಗೆಯೊಂದಿಗೆ ತವರು ಮನೆ ದೊಡ್ಡೇರಿಗೆ ತೆರಳಿ ಅಲ್ಲಿ ಗಂಗಾ ಪೂಜೆ ನೆರವೇರಿಸಿ ಪುನಃ ಸಂಜೆ ದೇವಸ್ಥಾನಕ್ಕೆ ಮರಳಿ ಬಂದು ಗುಡಿತುಂಬುವ ಮೂಲಕ ಜಾತ್ರಾಗೆ ಚಾಲನೆ ದೊರಲಿದೆ.
ಚಳ್ಳಕೆರೆ ನಗರದಿಂದ ಹೊರಟ ಶ್ರೀಚಳ್ಳಕೆರೆಯಮ್ಮ ದೇವಿಯ ಮೆರವಣಿಗೆಯಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದು, ವಿಶೇಷವಾಗಿ ಪೋತರಾಜರು, ಪುರಂತಪ್ಪ ಹಾಗೂ ದೇವಸ್ಥಾನದ ಆಯಗಾರರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.
ಶ್ರೀದೇವಿಯ ಮೆರವಣಿಗೆ ಇಲ್ಲಿನ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಸುಮಾರು 10 ಕಿ.ಮೀ ದೂರದ ದೊಡ್ಡೇರಿ ಗ್ರಾಮದ ಗರಣಿ ಹಳ್ಳಕ್ಕೆ ಹೋಗಿ ಗಂಗಾದೇವತೆ ಮಾಡಿಕೊಂಡು ವಿಶೇಷ ಅಲಂಕಾರದೊಂಗೆ ನಗರಕ್ಕೆ ಮರಳಿ ಗುಡಿ ತುಂಬಲಿದೆ ಜಾತ್ರೆ ಪ್ರಯುಕ್ತ ನಗರದ ಪ್ರಮುಖ ರಸ್ತೆ ನೆಹರು ವೃತ್ತ , ಬಳ್ಳಾರಿ ರಸ್ತೆ ಸೇರಿದಂತೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡು ಜಾತ್ರೆಗೆ ಕಳೆ ಕಟ್ಟಿದೆ.

ಮಂಗಳವಾರ ಕೋಣ ಉತ್ಸವ ಬುಧವಾರ ಹಿಟ್ಟಿನ ಆರತಿ, ಬೇವಿನ ಸೀರೆ ಉತ್ಸವ, ಗುರುವಾರ ಮಧ್ಯಾಹ್ನ 3.30ಕ್ಕೆ ದೇವಿಯ ಸಿಡಿ ಉತ್ಸವ ಜರುಗಲಿದೆ.
ಸಿಡಿ ಉತ್ಸವದಲ್ಲಿ ಜಿಲ್ಲೆಯ ಹಾಗೂ ನೆರೆಯ ರಾಜ್ಯದಿಂದ ಜನಸಾಗರ ಹರಿದು ಬರಲಿದೆ.

ಇತಿಹಾಸ
ಚಳ್ಳಕೇರಮ್ಮ ದೇವಿಯನ್ನು ಚಿತ್ರದುರ್ಗದ ಕಡೆಯಿಂದ ಬಂಡಿಯ ಮೇಲೆ ತರಲಾಯಿತು ಎಂಬ ಹಿನ್ನೆಲೆಯಿಂದ್ದು ಹಿಂದೆ ಅಲೆಮಾರಿಗಳಾಗಿದ್ದು ಜನ ತಮ್ಮೊಂದಿಗೆ ತಮ್ಮ ದೇವರನ್ನು ಹೊತ್ತೊಯ್ಯುತ್ತಿದ್ದು ಪೆಟ್ಟಿಗೆ ದೇವರು ಎಂದು ಕರೆಯುತ್ತಿದ್ದರು.ಚಳ್ಳಕೇರಮ್ಮ ಮೂಲರ್ತ ಪೆಟ್ಟಿಗೆಯ ದೆವರೇ ಆಗಿದ್ದು ತಾಲೂಕಿನ ದೊಡ್ಡೇರಿ ಗ್ರಾಮದಿಂದ ವಲಸೆ ಬಂದ ಈಕೆಯನ್ನು ತಂದು ಚಳ್ಳಕೆರೆಗೆ ಪ್ರತಿಷ್ಠಾಪಸಿದಂತೆ ತೋರುತ್ತದೆ. ಚಳ್ಳಕೆರೆ ನೆಲಸಿದ ಕಾರಣ ಈಕೆಗೆ ಸ್ಥಳೀಯ ಜನತೆ ಚಳ್ಳಕೇರಮ್ಮ ಎಂದು ಕರೆಯುತ್ತಾರೆ. ಚಳ್ಳಕೆರೆಯ ಹುಟ್ಟಿನ ನಂತರ ದೇವಿ ಇಲ್ಲಿಗೆ ಬಂದವಳಾದುದ್ದರಿAದ ಚಳ್ಳಕೆರೆಯಮ್ಮ ಎಂಭ ಹೆಸರು ಪಡೆದಿದ್ದಾಳೆ ಎಂಬ ಐತಿಹ್ಯವಿದೆ. ಈ ದೇವಿಯ ಜಾತ್ರೆ ಪದ್ದತಿ ಐದು ವರ್ಷಕೊಮ್ಮೆ ಜಾತ್ರೆ ನಡೆಯುತ್ತಿದೆ. ಜಾತ್ರೆ ವಿಶೇಷ ಕಾರ್ಯಕ್ರಮದೊಂದಿಗೆ ನಡೆಯುತ್ತದೆ.


ಚಳ್ಳಕೆರೆಗೆ ಪುರಾತನ ಹೆಸರು ಓರಗಲ್ಲು ಪಟ್ನ ಎಂದು ಹೆಸರು ಇತ್ತು ಎಂಬ ಐತಿಹ್ಯ ಓರಗಲ್ಲು ರಾಜ ಪರಶುರಾಮ ನಾಯಕರು ದೊಡ್ಡೇರಿಯಲ್ಲಿ ಆಡಳಿವನ್ನು ನಡೆಸುತ್ತಿದ್ದರು ಆ ಸಂದರ್ಭದಲ್ಲಿ ದೇವಿ ಬಂದು ನೆಲೆ ನಿಂತಿದ್ದಳು, ಸಂದರ್ಭದಲ್ಲಿ ಚಳ್ಳಕೆರೆಗೆ ಭಯಂಕರ ಪ್ಲೇಗು ಕಾಯಿಲೆವೊಂದು ಬಂದಾಗ ಚಳ್ಳಕೆರೆಗೆ ಬಂದು ಕಾಯಿಲೆಯನ್ನು ನಿವಾರಿಸಿ ಇಲ್ಲಿಯೇ ನೆಲೆಸಿದಳು ನಂತರ ಓರಗಲ್ಲು ಎಂಬ ಹೆಸರಾಯಿತು.
ಇಂದಿಗೂ ವೈಶ್ಯ ಬ್ಯಾಂಕ್ ಹಿಂದೆ ಇರುವ ಓರಗಲ್ಲು ಇದೆ ಈ ದೇವರ ಹೆಸರನ್ನೇ ಸಂಕ್ಷಿಪ್ತವಾಗಿ ಕಲ್ಲು ಕರಿ, ಚಲ್ಲಕೆರೆ, ಚಲಕಾರಿ, ಚಳಕೆರೆ, ಚಳ್ಳಕೆರೆ, ಎಂದು ಹೆಸರು ಬಂದಿದೆ.
14ನೇ ಶತಮಾನದಲ್ಲಿ ವಿಜಯನಗರ ಆಡಳಿತಕ್ಕೆ ಸೇರಿತ್ತು ೧೫ ನೇ ಶತಮಾನ ನಂತರ ಚಿತ್ರದುರ್ಗ ಪಾಳೇಗಾರರ ಆಡಳಿತಕ್ಕೆ ಸೇರಿತ್ತು ದೊಡ್ಡೇರಿ ಅಂದು ಗಡಿ ಠಾಣೆ, ಠಾಣಾಧಿಕಾರಿ ಕಾಮಗೇತುಲು ವಂಶಸ್ಥ ಕಾಟಪ್ಪನಾಯಕ, ಕಾಟಪ್ಪ ನಾಯಕನ ಮಗನೇ ಹಿರೇಮದಕರಿನಾಯಕ ಕಾಟಪ್ಪನಾಯಕರು ವಾಸಿಸಿದ ಸ್ಥಳ ಹಾಗೂ ಅವರ ಹೆಸರಿನಲ್ಲಿಯೇ ಇರುವ ಇಂದಿನ ಕಾಟಪ್ಪನಹಟ್ಟಿ ಇಲ್ಲಿ ಚಿಕ್ಕದಾದ ಕೋಟೆಯ ಕೊತ್ತಲವು ಸಹ ಚಳ್ಳಕೆರೆ ನಗರದ ಈಶಾನ್ಯದಲ್ಲಿದೆ ಕಾಟಪ್ಪನಾಯಕರ ಮನೆತರದವರೇ ಮದಕರಿನಾಯಕನ ವಂಶಸ್ಥರು ಇಂದಿಗೂ ಕಾಟಪ್ಪನಹಟ್ಟಿಯಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page