ಚಳ್ಳಕೆರೆ ಜನಧ್ವನಿ ವಾರ್ತೆ ಜ.28. ಐತಿಹಾಸಿಕ ಹಾಗೂ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಕೇಂದ್ರ ಚಿತ್ರದುರ್ಗ ಜಿಲ್ಲೆಯಲ್ಲಿ ಜನವರಿ-11 ರಿಂದ ಫೆ 2 ರ ವರೆಗೆ ವಿಜೃಂಬಣೆಯಿಂದ ನಡೆಯುವ ಕಾಡುಗೊಲ್ಲ ಆರಾಧ್ಯ ದೈವವಾದ ಕ್ಯಾತಪ್ಪನ ಪರಿಷೆ ಜವರಿ 29 ರ ಸೋಮವಾರ ಸುಮಾರು 4 ಗಂಟೆ ಸಮಯದಲ್ಲಿ ಬಾರೆ ಕಳ್ಳೆಗುಡಿ ಏರಿ ಕಳಸ ಕೀಳುವ ಕಾರ್ಯಕ್ರಮ ನಡೆಯಲಿದ್ದು. ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಇಂದಿಗೂ ಭಾವೈಕ್ಯ ಹಾಗೂ ಸಾಮಾಜಿಕ ಸಾಮರಸ್ಯದ ದ್ಯೂತಕವಾಗಿದೆ. ಈ ಪರಿಷೆಗೆ ಆಂದ್ರಪ್ರದೇಶದ ಅನಂತಪುರ, ರಾಯದುರ್ಗ, ಕಲ್ಯಾಣದುರ್ಗ, ಬಳ್ಳಾರಿ, ಹಾವೇರಿ, ದಾರವಾಡ, ಶಿವಮೊಗ್ಗ, ಮೈಸೂರು, ಬೆಂಗಳೂರು, ಕೋಲಾರ, ತುಮಕೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಸೇರುತ್ತಾರೆ.
ವಿಶಿಷ್ಟ ಆಚರಣೆ :-ಕಾಡುಗೊಲ್ಲ ಬುಡಕಟ್ಟಿನ ಹದಿಮೂರು ಗುಡಿಕಟ್ಟಿನವರು ನವಣೆ ಮತ್ತು ಹುರುಳಿ ಭತ್ತ(ವ್ರತ) ಹಾಗೂ ಮನೆ ಶುದ್ಧೀಕರಿಸಿ ಕೊಳ್ಳುವುದರರೊಂದಿಗೆ ಆಚರಣೆಗಳು ಆರಂಭವಾಗುತ್ತವೆ. ಜಾತ್ರೆ ಮುಗಿಯುವವರೆಗೆ ಹುರುಳಿ, ನವಣೆ ಬಸಳಸುವುದಾಗಲಿ, ಮುಟ್ಟುವುದಾಗಲಿ ಮತ್ತು ನವಣೆ -ಹರುಳಿ ಬೆಳೆದ ಹೊಲದಲ್ಲಿ ಹೋಗದಂತೆ ಕಟ್ಟುನಿಟ್ಟಿನ ವ್ರತವನ್ನು ಇಂದಿಗೂ ಪಾಲಿಸುತ್ತಾರೆ.
ಐತಿಹ್ಯ: ಕ್ಯಾತಪ್ಪದೇವರು ಕಾಡುಗೊಲ್ಲರಿಗೆ ಒಲಿಯುವ ಮೊದಲು ರೆಡ್ಡಿ ಜನಾಂಗದ ಹೇಮಾರೆಡ್ಡಿ ಮತ್ತು ಭೀಮಾರೆಡ್ಡಿ ರವರಿಗೆ ಒಲಿದಿತ್ತು. ಇದರಿಂದ ರೆಡ್ಡಿಗಳಿಗೆ ಶ್ರೀಮಂತಿಕೆ ಬಂತು. ಆಗ ಅಲಕ್ಷö್ಯದಿಂದ ದೇವರನ್ನು ಹುರುಳಿ-ನವಣೆ ಕಣಜದಲ್ಲಿ ಹಾಕಿ ಮುಚ್ಚಿದರು. ರೆಡ್ಡಿಗಳ ನಿರ್ಲಕ್ಷö್ಯಕ್ಕೆ ಬೇಸತ್ತ ಕ್ಯಾತೇದೇವರು ಕಾಡಿಗೊಲ್ಲರ ದನಗಾಹಿ ಬೊಮ್ಮಲಿಂಗನಿಗೆ ಒಲಿದು ಬಂದು ಗೊಲ್ಲರ ತಾಣದಲ್ಲಿ ನೆಲೆ ನಿಲ್ಲುತ್ತಾನೆ. ಗೊಲ್ಲರು ಇಂದಿಗೂ ಜಾತ್ರೆ ನಡೆಯುವ ಸಂದರ್ಭದಲ್ಲಿ ಹರುಳಿ-ನವಣೆಯ ಕಟ್ಟು ನಿಟ್ಟಿನ ವ್ರತವನ್ನು ಆಚರಿಸುತ್ತಾರೆ. ಕಾರೆ, ಬಾರೆ ಮುಳ್ಳಿನ ಗಿಡಗಳು ಹಾಗೂ ಹತ್ತಿ, ಕಳ್ಳಿ, ಬೇವಿನ (ದೇವರ) ಮರವನ್ನು ಕಡಿದು ನೆಲಕ್ಕೆ ಮುಟ್ಟಿಸದಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಸಾಗಿಸುತ್ತಾರೆ. ಕ್ಯಾತಪ್ಪದೇವರ ಮೂಲ ನೆಲೆಯಾದ ಚನ್ನಮ್ಮನಾಗತಿಹಳ್ಳಿ ಗ್ರಾಮದ ದೇವರ ಗುಡಿ ಸುತ್ತಲೂ ಕಳ್ಳೆಯ ಬೇಲಿ ಹಾಕುತ್ತಾರೆ.
ಗುಡಿ ನಿರ್ಮಾಣ:-ಒಕ್ಕಲು ಮಕ್ಕಳು ಸಜ್ಜೆರೊಟ್ಟಿ, ಶೇಂಗಾ ಚಟ್ನಿ, ಅನ್ನ ಮೊಸರಿನ ಬುತ್ತಿ ಕಟ್ಟಿಕೊಂಡು ಗುಡಿ ನಿರ್ಮಿಸಲು ಹೋಗುತ್ತಾರೆ. ಜಾತ್ರೆ ನಡೆಯುವ ಪುರ್ಲಹಳ್ಳಿಯ ವಸಲು ದಿಬ್ಬದಲ್ಲಿ ಬೆಳಗಿನಜಾವ ಏಳು ಗಂಟೆ ಸುಮಾರಿನಲ್ಲಿ 18 ರಿಂದ 20 ಅಡಿ ಎತ್ತರದ ಬಾರೆ, ಕಾರೆ, ಬಂದ್ರೆ, ತುಗ್ಗಲಿಮೋರು ಮತ್ತು ಎರದ ಕಳ್ಳೆಯಿಂದ 20 ನಿಮಿಷಕ್ಕೆ ದೇವರ ಒಕ್ಕಲ ಮಕ್ಕಳು (ಬೊಮ್ಮನಗೊಲ್ಲರು ಹಾಗೂ ಕೋಣನ ಗೊಲ್ಲರು ) ಕಳ್ಳೆ ಮುಳ್ಳಿನಿಂದ ಗುಡಿ ನಿರ್ಮಿಸಿ ಅದರ ತುದಿಗೆ ಕಂಚಿನ ಪಂಚಕಳಶಗಳನ್ನು ಏರಿಸುತ್ತಾರೆ.
ಚನ್ನಮ್ಮನಾಗತಿಹಳ್ಳಿ ಕ್ಯಾತಪ್ಪದೇವರು, ಪರಿವಾರದ ದೇವರುಗಳಾದ ಬಂಜಗೆರೆ ವೀರಣ್ಣ, ಈರಬಡಕ್ಕ, ಆಂಧ್ರಪ್ರದೇಶ ಕಲ್ಯಾಣದುರ್ಗ ತಾಲ್ಲೂಕಿನ ತಾಳಿ ದೇವರು,ಬತವಿನದೇವರು, ಕೋಣನ ದೇವರು ಸೇರಿದಂತೆ ಎಲ್ಲಾ ಪೆಟ್ಟಿಗೆ ದೈವಗಳನ್ನು ಜಾತ್ರೆ ಜರುಗುವ ವಸಲು ದಿಬ್ಬದ ಕಳ್ಳೆಮುಳ್ಳಿನ ಬೇಲಿಗುಡಿ ಒಳಗೆ ಪ್ರತಿಷ್ಠಾಪಿಸುತ್ತಾರೆ. ಅಲ್ಲಿ ಮೊದಲಿಗೆ ಗಂಗಾಪೂಜೆ, ಹಾವಿನಗೂಡು, ಕರವಿನಗೂಡು, ಮಜ್ಜನಭಾವಿ, ಹುತ್ತದ, ಕೋಣನ ಪೂಜೆ ಮುಗಿಸಿದ ನಂತರ ಗುಂಡಿ ತೆಗೆದು ಮಧ್ಯರಾತ್ರಿ ಮಡಿಯಿಂದ ಐದು ಜನ ಮುತ್ತೆöÊದೆಯರು ಒನಕೆಯಿಂದ ನವಣೆ ಕುಟ್ಟಿ ದೇವರಿಗೆ ನೈವೇದ್ಯ ಅರ್ಪಿಸಿ, ಭಕ್ತರು ವ್ರತ ಅಳಿಯುತ್ತಾರೆ.
ಚಳ್ಳಕೆರೆ ತಾಲ್ಲೂಕು ಪುರ್ಲಹಳ್ಳಿಯ ವಸಲು ದಿಬ್ಬದಲ್ಲಿ ನಡೆಯುವ ಜಾತ್ರೆಗೆ ಬಂದ ಭಕ್ತರು ವಿವಿಧ ಹರಕೆಯನ್ನು ತೀರಿಸುತ್ತಾರೆ. ಜ.29 ರ ಸೋಮವಾರ ಮದ್ಯಾಹ್ನ 4.30ಕ್ಕೆ ಸರಿಯಾಗಿ ತಣ್ಣೀರಿನಲ್ಲಿ ಸ್ನಾನ ಮಾಡಿದ ದೇವರ ಒಕ್ಕಲಿನ ಏಳೆಂಟು ಜನ ಈರಗಾರರು ಬರಿ ಮೈ-ಬರಿಗಾಲಲ್ಲಿ ನಾ ಮುಂದು ತಾ ಮುಂದು ಎಂದು ಕೇಕೆ ಹೊಡೆಯುತ್ತ ಕಳ್ಳೆ ಮುಳ್ಳಿನಿಂದ ನಿರ್ಮಿಸಿದ ದೇವರ ಗುಡಿಯನ್ನು ಎದ್ದು ಬಿದ್ದು ಹೊರಳಾಡುತ್ತಾ ಹುರುಪಿನಿಂದ ಗುಡಿ ಮೇಲೆ ಹತ್ತಿ ಕಳಶ ಕೀಳಲು ಕೇಲವೇ ನಿಮಿಷಗಳಲ್ಲಿ ನಡೆದು ಹೋಗುತ್ತದೆ. ಈ ಕ್ರಿಯೆ ನೋಡುಗರಲ್ಲಿ ಆಶ್ಚರ್ಯ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments