ಚಳ್ಳಕೆರೆ ಡಿ.16 ಕ್ರೀಡೆಯಲ್ಲಿ ಭಾಗವಹಿಸುವರು ಸೊಲು-ಗೆಲವು ಎನ್ನದೆ ಛಲಬಿಡದೆ ಮುಂದೆ ಬರಬೇಕು ನಿರಂತರ ಪರಿಶ್ರಮದಿಂದ ಮಾತ್ರ ಒಳ್ಳೆಯ ಸಾದನೆ ಮಾಡಬಹುದು. ತಾಲೂಕಿನಲ್ಲಿನ ಯುವಕರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಯಶಸ್ವಿ ಯಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ಚಳ್ಳಕೆರೆ ನಗರದ ಯೂತ್ ಕ್ಲಬ್ ವತಿಯಿಂದ ಬಿಸಿ ನೀರು ಮುದ್ದಪ್ಪ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಅಂತರರಾಜ್ಯ ವಾಲಿಬಾಲ್ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಬಯಲು ಸೀಮೆಯ ಈ ಕ್ಷೇತ್ರ ಸದಾ ಬರಗಾಲಕ್ಕೆ ತುತ್ತಾದರೂ ಕ್ರೀಡಾರಂಗ.ಸಾಹಿತ್ಯ .ಸಂಸ್ಕೃತಿ ಕೃಷಿಗೆ ಬರವಿಲ್ಲ .ಕ್ರೀಡೆಯು ಮನುಷ್ಯನಿಗೆ ಮನೊಚೈತನ್ಯ, ಉಲ್ಲಾಸ, ನೀಡುತ್ತದೆ ಅಲ್ಲದೆ ಸದೃಡ ಆರೋಗ್ಯ ಮಾನಸಿಕ ಸಮತೋಲನ ಕಾಪಾಡಲು ಸಹಕಾರಿ ಯಾಗುತ್ತದೆ ಕ್ರೀಡೆಯಲ್ಲಿ ಭಾಗವಹಿಸುವರು ಸೊಲು-ಗೆಲವು ಎನ್ನದೆ ಛಲಬಿಡಮುಂದೆ ಬರಬೇಕು ನಿರಂತರ ಪರಿಶ್ರಮದಿಂದ ಮಾತ್ರ ಒಳ್ಳೆಯ ಸಾದನೆ ಮಾಡಬಹುದು ಎಂದು ವಿವಿಧ ಕಡೆಗಳಿಂದ ಬಂದ ಕ್ರೀಡಾ ಪಟುಗಳಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಯೂತ್ ಕ್ಲಬ್ ತಾಲ್ಲೂಕು ಅಧ್ಯಕ್ಷ ವೀರಭದ್ರಸ್ವಾಮಿ, ಆಯೂಬ್, ಕುಶಲ ಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷ ಆರ್ ಪ್ರಸನ್ನ. ಮಾಜಿ ಜಿಪಂ ಸದಸ್ಯ ಬಾಬುರೆಡ್ಡಿ, ಪ್ರಸನ್ನಕುಮಾರ್, ಮುಖಂಡರಾದ ಕೃಷ್ಣಮೂರ್ತಿ, ಚೇತನ್ ಕುಮಾರ್, ಪ್ರಹ್ಲಾದ್, ಚನ್ನಕೇಶವ, ಬಸವರಾಜ್, ಸುಭಾಸ್ ರೆಡ್ಡಿ, ಮಂಜುನಾಥ ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments