. ನಾಯಕನಹಟ್ಟಿ:
ಸೂರ್ಯನ ಬೆಳಕಿನಿಂದ ಪ್ರಯೋಗಾತ್ಮಕ ವಿದ್ಯುತ್ ಉತ್ಪಾದನಾ ಘಟಕವನ್ನು ಐಐಎಸ್ಸಿ ಸ್ಥಾಪಿಸಿರುವುದು ಹೆಚ್ಎಎಲ್ ಇದಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತದೆ ಎಂದು ಹೆಚ್ಎಎಲ್ ನಿರ್ದೇಶಕ(ಹೆಚ್ಆರ್) ಎ.ಬಿ.ಪ್ರಧಾನ್ ಹೇಳಿದರು.
ಸಮೀಪದ ಕುದಾಪುರ ಐಐಎಸ್ಸಿಯಲ್ಲಿ ಶನಿವಾರ ಪ್ರಯೋಗಾತ್ಮಕ ಸೋಲಾರ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಎಎಲ್ ಮತ್ತು ಐಐಎಸ್ಸಿ ಎರಡೂ ಸಂಸ್ಥೆಗಳು ಸಂಶೋಧನಾತ್ಮಕ ವೈಜ್ಞಾನಿಕ ಯೋಜನೆಗಳನ್ನು ಮಾಡುತ್ತಿದ್ದು ಶ್ಲಾಘನೀಯ. ವಿದ್ಯುತ್ ಉತ್ಪಾದನೆ ನೀರಿನಿಂದ ಹಾಗು ಕಲ್ಲಿದ್ದಿಲಿನಿಂದ ಮಾಡುತ್ತಿದ್ದು, ಈಗ ಗಾಳಿ ಹಾಗು ಸೂರ್ಯನ ಬೆಳಕಿನಿಂದ ಮಾಡುತ್ತಿದ್ದಾರೆ. ನೀರು, ಕಲ್ಲಿದ್ದಲು ಮುಗಿಯುವ ಸಂಪನ್ಮೂಲವಾಗಿದ್ದು, ಸೂರ್ಯನ ಬೆಳಕು ನಮಗೆ ಸದಾ ಇರುತ್ತದೆ. ಇದು ಪರಿಸರ ಸ್ನೇಹಿ ಯೋಜನೆಯಾಗಿದೆ. ಐಐಎಸ್ಸಿಯ ಇಂತಹ ಪ್ರಯೋಗಾತ್ಮಕ ಯೋಜನೆಗಳಿಗೆ ಹೆಚ್ಎಎಲ್ ಸದಾ ಜೊತೆಗಿರುತ್ತದೆ ಎಂದು ಹೇಳಿದರು. ಈಗಾಗಲೇ ನಮ್ಮ ಸಂಸ್ಥೆಯಿAದ ಇಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿದ್ದು, ಈ ಕಟ್ಟಡದಲ್ಲಿ ದೇಶದ ಸಾವಿರಾರು ವಿಜ್ಞಾನ ಶಿಕ್ಷಕರಿಗೆ ತರಬೇತಿಯನ್ನು ಪಡೆದಿದ್ದಾರೆ. ಈ ಮೂಲಕ ಎರಡು ವೈಜ್ಞಾನಿಕ ಸಂಸ್ಥೆಗಳು ದೇಶದ ಶಿಕ್ಷಣ ವ್ಯವಸ್ಥೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿವೆ ಎಂದು ಹೇಳಿದರು.
ಐಐಎಸ್ಸಿ ಸೋಲಾರ್ ಘಟಕ ಯೋಜನೆಯ ಪ್ರೋ.ಉಮಾನಂದ್ ಮಾತನಾಡಿ, ಸಾಮಾನ್ಯವಾಗಿ ಎಲ್ಲಾ ಸೋಲಾರ್ ಘಟಕಗಳು ಮಹಡಿಯ ಮೇಲೆ ಅಥವ ನೆಲದಲ್ಲಿ ಸ್ಥಾಪನೆಯಾಗಿವೆ. ಆದರೆ ಇಲ್ಲಿ ನೂತನವಾಗಿ ನೆಲದಿಂದ ಎಂಟು ಅಡಿ ಎತ್ತರದಲ್ಲಿ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿ ಕೆಳಗೆ ಏನಾದರೂ ಬೆಳೆಯನ್ನು ಬೆಳೆಯ ಬಹುದೆಂಬ ಸಂಶೋಧನಾತ್ಮಕ ಪ್ರಯೋಗಗಳನ್ನು ಮಾಡುವ ಯೋಜನೆ ಇದೆ ಎಂದು ವಿವರಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಇಲ್ಲಿನ ಕೌಶಲ್ಯಾಭಿವೃದ್ಧಿ ಕೇಂದ್ರದ ಮುಖ್ಯಸ್ಥ ಹಾಗು ಡೀನ್ ಪ್ರೋ.ಸತೀಶ್ ಮಾತನಾಡಿ, ಹೆಚ್ಎಎಲ್ ಸಹಕಾರದಿಂದ ಕುದಾಪುರದ ಎಸ್ಡಿಸಿ ಕೇಂದ್ರವು ಅಭಿವೃದ್ಧಿಗೊಳ್ಳುತ್ತಿದೆ. ಇಲ್ಲಿ ಒಂದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಐಐಎಸ್ಸಿ ಕುದಾಪುರ ಕ್ಯಾಂಪಸ್ಸಿಗೆ ಬೇಕಾದ ವಿದ್ಯುತ್ ಬಳಸಿ ಉಳಿಕೆಯಾದ ವಿದ್ಯುತ್ನ್ನು ಬೆಸ್ಕಾಂಗೆ ನೀಡುವ ಯೋಚನೆ ಇದೆ ಎಂದು ತಿಳಿಸಿದರು. ಹೊಸ ಹೊಸ ಪ್ರಯೋಗಾತ್ಮಕ ಯೋಜನೆಗಳು ಇಲ್ಲಿ ಕೈಗೊಳ್ಳಲಾಗಿದೆ. ಕೇಂದ್ರದ ಮುಖ್ಯ ದ್ವಾರದಿಂದ ಎಸ್ಡಿಸಿ ಹಾಗು ವಸತಿ ನಿಲಯದವರೆಗೆ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.
ಐಐಎಸ್ಸಿ ಕ್ಯಾಂಪಸ್ಸಿನ ಕೌಶಲಾಭಿವೃದ್ಧಿ ಕೇಂದ್ರದ ಸಂಚಾಲಕ ಡಾ.ಬಿ.ಸುಬ್ಬಾರೆಡ್ಡಿ ಮಾತನಾಡಿ, ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲದೇ ಸೋಲಾರ್ ವಿದ್ಯುತ್ ನಿಂದ ಏನೆಲ್ಲಾ ಉಪಯೋಗವಿದೆ ಎಂಬುದನ್ನು ಯುವಕರಿಗೆ ತರಬೇತಿ ನೀಡುವ ಯೋಜನೆ ಐಐಎಸ್ಸಿಗಿದೆ. ಸೋಲಾರ್ ಘಟಕದ ರಿಪೇರಿ. ವಿದ್ಯುತ್ ಚಾಲಿತ ವಾಹನಗಳ ನಿರ್ವಹಣಾ ತರಬೇತಿಯನ್ನು ಯುವಕರಿಗೆ ನೀಡುವ ಯೋಜನೆ ಇದೆ. ಈಗಾಗಲೇ ಕಳೆದ ವಾರದಲ್ಲಿ ‘ಮುಂದಿನ ಪೀಳಿಗೆಯ ಶಕ್ತಿಶಾಲಿ ಅಂತರ್ಜಾಲ ಆಧಾರಿತ ಸ್ಮಾರ್ಟ್ಗ್ರಿಡ್ ಪ್ರಯೋಗಾಲಯ ತರಬೇತಿ ಕೇಂದ್ರ’ ಉದ್ಘಾಟನೆ ಮಾಡಲಾಗಿದೆ. ಈ ಘಟಕದಿಂದ ಉತ್ಪಾದನೆಯಾದ ವಿದ್ಯುತ್ ನಿಂದ ವಿದ್ಯುತ್ ಚಾಲಿತ ಎರಡು ಸಣ್ಣ ವಾಹನಗಳನ್ನು ಈಗ ತರಲಾಗಿದೆ ಈ ವಾಹನಗಳು ಕ್ಯಾಂಪಸ್ಸಿನ ಒಳಗೆ ಓಡಾಡಲು ಶಿಕ್ಷಕರಿಗೆ ಮತ್ತು ಅಧಿಕಾರಿಗಳಿಗೆ ಅನೂಲವಾಗಲಿವೆ ಎಂದು ತಿಳಿಸಿದರು.
ಐಐಎಸ್ಸಿ ಕ್ಯಾಂಪಸ್ಸಿನ ಕೌಶಲಾಭಿವೃದ್ಧಿ ಕೇಂದ್ರದ ಸಂಚಾಲಕ ಡಾ.ಬಿ.ಸುಬ್ಬಾರೆಡ್ಡಿ, ಬೆಂಗಳೂರು ಐಐಎಸ್ಸಿ ಕೌಶಲಾಭಿವೃದ್ಧಿ ವಿಭಾಗದ ಡೀನ್ ಪ್ರೊ.ಎಸ್.ಕೆ.ಸತೀಶ್. ಯೋಜನಾಧಿಕಾರಿ ಪ್ರೊ.ಎಲ್.ಉಮಾನಂದ ಮಾತನಾಡಿದರು. ಎಂಜಿನಿಯರ್ ಹೇಮಂತ್, ಅಮಿತ್ ಇದ್ದರು.
.
0 Comments